ತೆಲಂಗಾಣ ಸರ್ಕಾರವು 'ಇಂದಿರಮ್ಮ ಸೀರೆ ವಿತರಣೆ ಯೋಜನೆ'ಯನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಉದ್ಘಾಟಿಸಿದಎರಡು ಹಂತಗಳಲ್ಲಿ ರಾಜ್ಯದ ಸುಮಾರು 1 ಕೋಟಿ ಅರ್ಹ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಣೆ ಈ ಯೋಜನೆಯು ಇಂದಿರಾ ಗಾಂಧಿಯವರಿಂದ ಪ್ರೇರಿತವಾದ ಮಹಿಳಾ ಸಬಲೀಕರಣದ ಒಂದು ಭಾಗವಾಗಿದೆ.
ಹೈದರಾಬಾದ್ (ನ.20): ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಾಸಿಕ ಹಣ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದ ತೆಲಂಗಾಣ ಸರ್ಕಾರ ಈಗ ಉಚಿತ ಸೀರೆ ಯೋಜನೆ ಜಾರಿಗೆ ತಂದಿದೆ.
ಇಂದಿರಮ್ಮ ಸೀರೆ ವಿತರಣೆ ಯೋಜನೆ:
ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ವಾರ್ಷಿಕೋತ್ಸವದಂದು 1 ಕೋಟಿ ಮಹಿಳೆಯರಿಗೆ ಸೇರೆ ಹಂಚುವ ‘ಇಂದಿರಮ್ಮ ಸೀರೆ ವಿತರಣೆ ಯೋಜನೆ’ಯನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬುಧವಾರ ಉದ್ಘಾಟಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರೆಡ್ಡಿ, ‘ಸೀರೆ ವಿತರಣೆ ಯೋಜನೆ 2 ಹಂತದಲ್ಲಿ ಈ ಯೋಜನೆ ಜಾರಿಯಾಗಲಿದೆ. ಮೊದಲು ಡಿ.9ರ ಒಳಗೆ ಗ್ರಾಮೀಣ ಭಾಗದ ಅರ್ಹ ಮಹಿಳೆಯರಿಗೆ ಸೀರೆ ನೀಡಲಾಗುವುದು. ಬಳಿಕ ಮಾ.1-8ರ ಹೊತ್ತಿಗೆ ನಗರಪ್ರದೇಶದಲ್ಲಿ 65 ಲಕ್ಷ ಸೀರೆಗಳ ವಿತರಣೆಯಾಗುವುದು ಎಂದರು.
ಮಹಿಳಾ ಸಬಲೀಕರಣ ಕಾರ್ಯಕ್ರಮಕ್ಕೆ ಇಂದಿರಾ ಗಾಂದಿ ಪ್ರೇರಣೆ:
ಇಂದಿರಾ ಅವರಿಂದ ಪ್ರೇರಿತರಾಗಿ ನಮ್ಮ ಸರ್ಕಾರ ಹಲವು ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ರೆಡ್ಡಿ ಹೇಳಿದರು. ಇದೇ ವೇಳೆ, ಆ ಸೀರೆ ಉಟ್ಟು ಮಹಿಳಾ ಸ್ವಾಭಿಮಾನವನ್ನು ಪ್ರದರ್ಶಿಸುವಂತೆ ಸಚಿವೆಯರು ಮತ್ತು ಶಾಸಕಿಯರಿಗೆ ಕರೆ ನೀಡಿದರು.


