ರಾಹುಲ್ ಗಾಂಧಿ, ಇ20 (ಎಥನಾಲ್) ಇಂಧನ ಮಿಶ್ರಣ ನೀತಿಯು ಒಂದು ದೊಡ್ಡ ಹಗರಣವಾಗಿದ್ದು, ಜನರ ವಾಹನಗಳನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಭ್ರಷ್ಟಾಚಾರದಿಂದ ಸಾರ್ವಜನಿಕರಿಗೆ ನೇರ ನಷ್ಟವಾಗುತ್ತಿದೆ ಎಂದ ಅವರು, ತೈಲ ಕಂಪನಿಗಳು ಇಂಧನ ಮಾಲಿನ್ಯದ ವರದಿಗಳನ್ನು ತಳ್ಳಿಹಾಕಿವೆ.
- Home
- News
- India News
- India Latest News Live: ಇ20 ಇಂಧನ ರಹಸ್ಯ - ನಿಮ್ಮ ವಾಹನಕ್ಕೆ ಕಾದಿದೆಯೇ ಅಪಾಯ? ರಾಹುಲ್ ಗಾಂಧಿ ಹೇಳಿದ್ದೇನು?
India Latest News Live: ಇ20 ಇಂಧನ ರಹಸ್ಯ - ನಿಮ್ಮ ವಾಹನಕ್ಕೆ ಕಾದಿದೆಯೇ ಅಪಾಯ? ರಾಹುಲ್ ಗಾಂಧಿ ಹೇಳಿದ್ದೇನು?

ನವದೆಹಲಿ: ‘ಸ್ವಾತಂತ್ರ್ಯ ಹೋರಾಟಗಾರರು ಬಂದೂಕಿಗೆ ಎದೆಯೊಡ್ಡಿ ನಿಲ್ಲುತ್ತಿದ್ದರು, ಆದರೆ ನೀವು ಸಂಸದರಾಗಿ ಮೊಟ್ಟೆಗೆ ಯಾಕೆ ಹೆದರುತ್ತೀರಿ?’ ಎಂದು ಸುಪ್ರೀಂ ಕೋರ್ಟ್ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಪ್ರಶ್ನಿಸಿದೆ.
ದ್ವೇಷಭಾಷಣ ಪ್ರಕರಣವೊಂದರಲ್ಲಿ ಕೋಲ್ಕತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸರು ಆ.15ರೊಳಗೆ ವಿಚಾರಣೆ ಬರುವಂತೆ ಮಹುವಾಗೆ ನೋಟಿಸ್ ನೀಡಿದ್ದರು. ಇದರ ರದ್ದು ಕೋರಿ ಸಂಸದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
‘ಪೊಲೀಸರು ನಾನು ನನ್ನ ಸ್ವಂತ ಕ್ಷೇತ್ರದಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಹೇಳಿದ್ದಾರೆ. ಆದರೆ ನಾನು ಹಿಂದೆ 2 ಸಲ ಅಲ್ಲಿಗೆ ಹೋದಾಗ ಬೆದರಿಕೆಗಳನ್ನು ಹಾಕಲಾಯಿತು. ಮೊಟ್ಟೆ ಎಸೆಯಲಾಯಿತು’ ಎಂದು ಅವರು ಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ದ್ವಿಸದಸ್ಯ ಪೀಠ, ‘ನೀವು ಸಂಸದರು. ರಾಜಕೀಯಕ್ಕೆ ಧುಮುಕಿದ ಮೇಲೆ ಮೊಟ್ಟೆಗೆ ಹೆದರುತ್ತೀರಾ? ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಎದೆಯೊಡ್ಡಿ ನಿಂತಿದ್ದರು. ಇಂತಹ ಅರ್ಜಿಗಳು ವಿಚಾರಣೆಗೆ ಬರಬಾರದು’ ಎಂದು ಹೇಳಿ ಅರ್ಜಿ ವಜಾ ಮಾಡಿತು,