LIVE NOW
India Latest News Live: ದೆಹಲಿ ಗಲಭೆ ಕೇಸ್: ಆರೋಪಿ ಉಮರ್ ಖಾಲೀದ್ಗೆ 3 ದಿನಗಳ ಜಾಮೀನು

ಸಾರಾಂಶ
ನವದೆಹಲಿ: ಯುಎಪಿಎ ಕಾಯ್ದೆಯಡಿ ಬಂಧಿತನಾಗಿರುವ ದೆಹಲಿ ಗಲಭೆ ಆರೋಪಿ ಉಮರ್ ಖಾಲೀದ್ಗೆ ದೆಹಲಿ ಹೈಕೋರ್ಟ್ 3 ದಿನಗಳ ಜಾಮೀನನ್ನು ಶುಕ್ರವಾರ ಮಂಜೂರು ಮಾಡಿದೆ. ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿರುವುದರಿಂದ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ಇದನ್ನು ಮನ್ನಿಸಿದ ಹೈಕೋರ್ಟ್ ಜೂ.1ರಿಂದ 3ರವರೆಗೆ ಜಾಮೀನು ನೀಡಿದೆ.
Add Asianetnews Kannada as a Preferred Source

ಇದೇ ವೇಳೆ, ಸುಪ್ರೀಂ ಕೋರ್ಟ್ನ ದ್ವಿಪಕ್ಷೀಯ ಪೀಠ ಉಮರ್ ಸೇರಿದಂತೆ ಇತರ ಆರೋಪಿಗಳ ಕಾಯಂ ಜಾಮೀನು ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಆದರೆ ಅಬ್ದುಲ್ ಖಾಲೀದ್ ಸೈಫಿ ಹಾಗೂ ತಸ್ಲೀಂ ಅಹ್ಮದ್ ಎಂಬ ಇಬ್ಬರು ಆರೋಪಿಗಳಿಗೆ 6 ತಿಂಗಳ ಮಧ್ಯಂತರ ಜಾಮೀನು ನೀಡಿದೆ.