ಇರಾಕ್ನ ಬಸ್ರಾ ಬಳಿ ಅಮೆರಿಕ ಸ್ವಾಮ್ಯದ 'ಸೇಫ್ಸೀ ವಿಷ್ಣು' ತೈಲ ಟ್ಯಾಂಕರ್ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ, ಇರಾನ್ ಕೊಲ್ಲಿ ರಾಷ್ಟ್ರಗಳಾದ ಒಮಾನ್, ಯುಎಇ, ಕುವೈತ್ ಮತ್ತು ಬಹ್ರೈನ್ನ ಬಂದರುಗಳು ಹಾಗೂ ವಿಮಾನ ನಿಲ್ದಾಣಗಳ ಮೇಲೆ ದಾಳಿಯನ್ನು ಮುಂದುವರಿಸಿದೆ.
- Home
- News
- India News
- India Latest News Live: Safesea Vishnu ship attack - ಇರಾನ್ ‘ಆತ್ಮಾಹುತಿ ಬೋಟ್’ ದಾಳಿ - ಭಾರತ ಹಡಗು ಸಿಬ್ಬಂದಿ ಸಾವು, 15 ಭಾರತೀಯರಿಗೆ ಗಾಯ
India Latest News Live: Safesea Vishnu ship attack - ಇರಾನ್ ‘ಆತ್ಮಾಹುತಿ ಬೋಟ್’ ದಾಳಿ - ಭಾರತ ಹಡಗು ಸಿಬ್ಬಂದಿ ಸಾವು, 15 ಭಾರತೀಯರಿಗೆ ಗಾಯ

ಮುಂಬೈ / ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿನ ಯುದ್ಧದ ನಡುವೆಯೂ ಭಾರತೀಯ ಕ್ಯಾಪ್ಟನ್ ಮುನ್ನಡೆಸುವ, ಲೈಬೀರಿಯನ್ ಧ್ವಜ ಹೊಂದಿರುವ ಕಚ್ಚಾ ತೈಲ ಹಡಗೊಂದು ಇರಾನ್ನಿಂದ ನಿರ್ಬಂಧಿತವಾಗಿರುವ ಹೋರ್ಮುಜ್ ಜಲ ಸಂಧಿಯನ್ನು ದಾಟಿ ಮುಂಬೈ ಬಂದರನ್ನು ತಲುಪಿದೆ. 1.35 ಲಕ್ಷಟನ್ (10 ಲಕ್ಷ ಬ್ಯಾರೆಲ್) ಕಚ್ಚಾ ತೈಲವನ್ನು ಇದು ಹೊತ್ತು ತಂದಿದ್ದು, ಸುರಕ್ಷಿತವಾಗಿ ತಲುಪಿದೆ.
India Latest News Live:Safesea Vishnu ship attack - ಇರಾನ್ ‘ಆತ್ಮಾಹುತಿ ಬೋಟ್’ ದಾಳಿ - ಭಾರತ ಹಡಗು ಸಿಬ್ಬಂದಿ ಸಾವು, 15 ಭಾರತೀಯರಿಗೆ ಗಾಯ
India Latest News Live:ನ್ಯಾಯೋಚಿತವಲ್ಲದ ವ್ಯಾಪಾರ - ಭಾರತ ಸೇರಿ 16 ದೇಶಗಳ ವಿರುದ್ಧ ತನಿಖೆಗೆ ಟ್ರಂಪ್ ನಿರ್ಧಾರ
ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು, ಭಾರತ ಸೇರಿದಂತೆ 16 ದೇಶಗಳ ವಿರುದ್ಧ ಅನ್ಯಾಯದ ವ್ಯಾಪಾರ ನಡವಳಿಕೆ ಆರೋಪದ ಮೇಲೆ ತನಿಖೆ ಆರಂಭಿಸಿದೆ.ತನ್ನ ಈ ಹಿಂದಿನ ಪ್ರತಿ ತೆರಿಗೆ ನೀತಿಯನ್ನು ಅಲ್ಲಿನ ಸುಪ್ರೀಂಕೋರ್ಟ್ ರದ್ದು ಮಾಡಿದ ಹಿನ್ನೆಲೆ ಹೊಸ ರೂಪದಲ್ಲಿ ತೆರಿಗೆ ಹೇರಲು ಈ ಅಡ್ಡದಾರಿ ಹಿಡಿದಿದೆ ಎನ್ನಲಾಗ್ತಿದೆ
India Latest News Live:ಗೋಯಿಂಗ್ ಡಾರ್ಕ್ ತಂತ್ರ ಬಳಕೆ - ಯುದ್ಧ ಆರಂಭವಾದ ಬಳಿಕ ಯಶಸ್ವಿಯಾಗಿ ಹರ್ಮುಜ್ ದಾಟಿ ಭಾರತಕ್ಕೆ ಬಂದ ಮೊದಲ ಕಚ್ಚಾತೈಲ ಹಡಗು
ಮಧ್ಯಪ್ರಾಚ್ಯದ ಯುದ್ಧದ ನಡುವೆ, ಭಾರತೀಯ ಕ್ಯಾಪ್ಟನ್ ನೇತೃತ್ವದ ಕಚ್ಚಾ ತೈಲ ಹಡಗು ಇರಾನ್ ನಿಯಂತ್ರಿತ ಹರ್ಮುಜ್ ಜಲಸಂಧಿಯನ್ನು 'ಡಾರ್ಕ್ ಮೋಡ್' ತಂತ್ರ ಬಳಸಿ ಯಶಸ್ವಿಯಾಗಿ ದಾಟಿದೆ. 1.35 ಲಕ್ಷ ಟನ್ ತೈಲದೊಂದಿಗೆ ಸೌದಿ ಅರೇಬಿಯಾದಿಂದ ಹೊರಟ ಈ ಹಡಗು ಸುರಕ್ಷಿತವಾಗಿ ಮುಂಬೈ ಬಂದರನ್ನು ತಲುಪಿದೆ.