08:53 PM (IST) Aug 13

India Latest News Live 13 August 2026ಜಾಲತಾಣದಲ್ಲಿ ಸ್ಟೇಟಸ್​ ಹಾಕ್ತೀರಾ? ಮನೆಯ ತಿಜೋರಿ ಖಾಲಿಯಾಗತ್ತೆ ಹುಷಾರ್​- ಪೊಲೀಸರ ಖಡಕ್​ ವಾರ್ನಿಂಗ್​

ಸೋಷಿಯಲ್ ಮೀಡಿಯಾದಲ್ಲಿ ಪ್ರವಾಸದ ಸ್ಟೇಟಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಇದು ಕಳ್ಳರಿಗೆ ನಿಮ್ಮ ಮನೆ ಖಾಲಿ ಇದೆ ಎಂದು ನೀವೇ ಮಾಹಿತಿ ನೀಡಿದಂತೆ ಎಂದು ಡಿವೈಎಸ್ಪಿ ಎಚ್ಚರಿಸಿದ್ದಾರೆ. ಆದ್ದರಿಂದ, ಪ್ರವಾಸ ಮುಗಿಸಿ ಬಂದ ನಂತರ ಫೋಟೋಗಳನ್ನು ಹಂಚಿಕೊಳ್ಳುವುದು ಸುರಕ್ಷಿತ.

Read Full Story
08:38 PM (IST) Aug 13

India Latest News Live 13 August 2026ಬಾಕ್ಸಿಂಗ್‌ ರಿಂಗ್‌ಗೆ ಆಹ್ವಾನಿಸಿದ್ದ ಶ್ರೀಶಾಂತ್‌ಗೆ ಸೈಲೆಂಟ್‌ ಉತ್ತರ ನೀಡಿದ ಹರ್ಭಜನ್‌ ಸಿಂಗ್‌!

2008ರ ಐಪಿಎಲ್ 'ಸ್ಲ್ಯಾಪ್‌ಗೇಟ್' ವಿವಾದದ ಬಳಿಕ, ಇತ್ತೀಚೆಗೆ ಶ್ರೀಶಾಂತ್ ಅವರು ಹರ್ಭಜನ್ ಸಿಂಗ್‌ಗೆ ಬಾಕ್ಸಿಂಗ್ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್, ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಿದ್ದ ಎಂದಿದ್ದಾರೆ.

Read Full Story
07:54 PM (IST) Aug 13

India Latest News Live 13 August 2026'ಒತ್ತಾಯಪೂರ್ವಕವಾಗಿ ಅಪ್ಪಿಕೊಳ್ಳೋದು ವಿದೇಶಾಂಗ ನೀತಿಯಲ್ಲ..' ಮೋದಿ ಬಗ್ಗೆ ಮಿಮಿಕ್ರಿ ಮಾಡಿ ಲೇವಡಿ ಮಾಡಿದ ರಾಹುಲ್‌ ಗಾಂಧಿ

ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸಿದ ರಾಹುಲ್ ಗಾಂಧಿ, ನಾಯಕರನ್ನು ಅಪ್ಪಿಕೊಳ್ಳುವುದೇ ರಾಜತಾಂತ್ರಿಕತೆಯಲ್ಲ ಎಂದರು. ವೇದಿಕೆಯಲ್ಲೇ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡು ಅವರು ವ್ಯಂಗ್ಯವಾಡಿದ್ದಾರೆ.

Read Full Story
07:29 PM (IST) Aug 13

India Latest News Live 13 August 2026‘ದಿ ಒನ್‌ ಆ್ಯಂಡ್‌ ಓನ್ಲಿ...’ ಶ್ರೀದೇವಿಯನ್ನು ನೆನೆದು ಪ್ರಿಯಾಂಕಾ ಭಾವುಕ - ‘ಎಂಪ್ರೆಸ್’ ಫಸ್ಟ್ ಲುಕ್ ರಿವೀಲ್

Sridevi Biography Book: ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು, ಪ್ರಿಯಾಂಕಾ ಚೋಪ್ರಾ ಅವರು 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ.

Read Full Story
07:05 PM (IST) Aug 13

India Latest News Live 13 August 2026ಬುಕಿಂಗ್‌ ವೇಳೆಯೇ 'ಟಿಪ್ಸ್‌' ಕೇಳುವಂತಿಲ್ಲ - ಓಲಾ, ಉಬರ್‌ನಂತಹ ಕ್ಯಾಬ್‌ ಕಂಪನಿಗಳಿಗೆ ಕೇಂದ್ರದ ಖಡಕ್‌ ಸೂಚನೆ

ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಮುಂಗಡವಾಗಿ 'ಟಿಪ್ಸ್' ನೀಡುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸಾರಿಗೆ ಸಚಿವಾಲಯವು ವಾಹನ ಅಗ್ರಿಗೇಟರ್‌ಗಳಿಗೆ ಖಡಕ್ ಸೂಚನೆ ನೀಡಿದೆ.

Read Full Story
05:47 PM (IST) Aug 13

India Latest News Live 13 August 2026ಬಾಲ್ಯದಲ್ಲಿ ಅನಾಥರಾದ್ರು, ನೆದರ್ಲ್ಯಾಂಡಲ್ಲಿ ಸ್ನೇಹಿತರಾಗಿ ದೂರಾದ್ರು, 3 ದಶಕದ ಬಳಿಕ ತಿಳೀತು ಭಾರತದಲ್ಲಿ ಒಡಹುಟ್ಟಿದ ಸಹೋದರಿಯೆಂದು!

ನೆದರ್ಲ್ಯಾಂಡ್ಸ್‌ನಲ್ಲಿ ದತ್ತು ಪಡೆದು ಬೆಳೆದ ಇಬ್ಬರು ಭಾರತೀಯ ಹುಡುಗಿಯರು ಹದಿಹರೆಯದಲ್ಲಿ ಸ್ನೇಹಿತರಾಗುತ್ತಾರೆ. ವರ್ಷಗಳ ನಂತರ, ಡಿಎನ್‌ಎ ಪರೀಕ್ಷೆಯೊಂದು ಅವರಿಬ್ಬರೂ ಒಂದೇ ತಾಯಿಯ ಮಕ್ಕಳಾದ ಅಕ್ಕ-ತಂಗಿಯರು ಎಂಬ ಬೆರಗಿನ ಸತ್ಯವನ್ನು ಬಹಿರಂಗಪಡಿಸುತ್ತದೆ, ಇದು ಅವರ ಭಾವುಕ ಪುನರ್ಮಿಲನಕ್ಕೆ ಕಾರಣವಾಗುತ್ತದೆ.
Read Full Story
05:45 PM (IST) Aug 13

India Latest News Live 13 August 2026ವಿಶ್ವಪ್ರಸಿದ್ಧ ಸಾಂಚಿ ಸ್ತೂಪಕ್ಕಿಂತಲೂ ಹಳೆಯದಾದ ಸ್ತೂಪ ಶೋಧನೆಗೆ ಮುಂದಾದ ಸರ್ಕಾರ!

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ 'ದೇವುರ್ ಕೊಠಾರ್' ಬೌದ್ಧ ಸ್ತೂಪವು ವಿಶ್ವಪ್ರಸಿದ್ಧ ಸಾಂಚಿ ಸ್ತೂಪಕ್ಕಿಂತಲೂ ಹಳೆಯದು ಮತ್ತು ಬೃಹತ್ತಾದುದು ಎಂಬ ಚರ್ಚೆ ಹುಟ್ಟುಹಾಕಿದೆ.

Read Full Story
04:58 PM (IST) Aug 13

India Latest News Live 13 August 2026ಭಾರತದಲ್ಲಿ ನೂರಾರು ನದಿಗಳಿವೆ, ಆದರೆ ಈ ಒಂದು ನದಿ ಮಾತ್ರ ‘ಗಂಡು ನದಿ’! ಯಾಕೆ ಗೊತ್ತಾ?

ಭಾರತದಲ್ಲಿ ಬಹುತೇಕ ನದಿಗಳು ಹೆಣ್ಣಿನ ಹೆಸರನ್ನು ಹೊಂದಿದ್ದರೆ, ಬ್ರಹ್ಮಪುತ್ರವನ್ನು 'ಬ್ರಹ್ಮ ದೇವನ ಮಗ' ಎಂಬ ಅರ್ಥದಿಂದ 'ಗಂಡು ನದಿ' ಎಂದು ಕರೆಯಲಾಗುತ್ತದೆ. ಟಿಬೆಟ್‌ನಲ್ಲಿ ಹುಟ್ಟಿ, ಅಸ್ಸಾಂನ ಜೀವನಾಡಿಯಾಗಿ ಹರಿಯುವ ಈ ನದಿಯು ತನ್ನ ಬೃಹತ್ ಹರಿವು ಮತ್ತು ವಿಶ್ವದ ಅತಿದೊಡ್ಡ ನದಿ ದ್ವೀಪವಾದ ಮಜುಲಿಯನ್ನು ನಿರ್ಮಿಸಿರುವುದಕ್ಕೆ ಪ್ರಸಿದ್ಧವಾಗಿದೆ.
Read Full Story
04:20 PM (IST) Aug 13

India Latest News Live 13 August 2026E20 ಇಂಧನ - ಆಟೋ ರಂಗದ ಆಂತರಿಕ ವರದಿಯಲ್ಲಿ ಬೆಚ್ಚಿಬೀಳಿಸೋ ಸತ್ಯ, ಅಪಾಯಕಾರಿ ಮಟ್ಟದ ಕ್ಲೋರೈಡ್ ಪತ್ತೆ, ಮೈಲೇಜ್ ಕುಸಿತ!

ದೇಶಾದ್ಯಂತ E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಕುಸಿತ ಮತ್ತು ಎಂಜಿನ್ ಹಾನಿಯಂತಹ ದೂರುಗಳು ಹೆಚ್ಚಾಗಿವೆ. ಆಟೋ ಉದ್ಯಮದ ಆಂತರಿಕ ತನಿಖೆಯಲ್ಲಿ ಇಂಧನದಲ್ಲಿ ಅಪಾಯಕಾರಿ ಮಟ್ಟದ ಕ್ಲೋರೈಡ್ ಮತ್ತು ತೇವಾಂಶ ಪತ್ತೆಯಾಗಿದೆ. ಆದರೆ, ಆಟೋಮೊಬೈಲ್ ತಯಾರಕರ ಸಂಘವು (SIAM) ಸರ್ಕಾರಕ್ಕೆ ನೀಡಿದ್ದ ದೂರನ್ನು ಹಿಂಪಡೆದಿದ್ದು, ಸಾರ್ವಜನಿಕರಲ್ಲಿ ಗೊಂದಲ ಮುಂದುವರೆದಿದೆ.
Read Full Story
03:52 PM (IST) Aug 13

India Latest News Live 13 August 2026ಮೊದಲ ದಿನವೇ ಆಸ್ಟ್ರೇಲಿಯಾದ ಸೊಕ್ಕಡಗಿಸಿದ ಬಾಂಗ್ಲಾದೇಶ..! ವೇಗಿಗಳ ದಾಳಿಗೆ ತವರಿನಲ್ಲೇ ಮಂಕಾದ ಕಾಂಗರೂ ಪಡೆ

23 ವರ್ಷಗಳ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಬಾಂಗ್ಲಾದೇಶ, ಮೊದಲ ಟೆಸ್ಟ್‌ನ ಮೊದಲ ದಿನವೇ ಆತಿಥೇಯರನ್ನು 198 ರನ್‌ಗಳಿಗೆ ಕಟ್ಟಿಹಾಕಿದೆ. ಹಸನ್ ಮಹಮೂದ್ ಅವರ 6 ವಿಕೆಟ್‌ಗಳ ನೆರವಿನಿಂದ ಈ ಸಾಧನೆ ಮಾಡಿದ ಬಾಂಗ್ಲಾ, ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
Read Full Story
03:51 PM (IST) Aug 13

India Latest News Live 13 August 2026Arranged Marriage - ​‘ಎಕ್ಸೆಲ್ ಶೀಟ್’ನಲ್ಲೇ ಮದುವೆ ಮ್ಯಾಚ್ ಹುಡುಕಿದ್ದ Gen Z ಯುವಕ! ವರ್ಷದ ಬಳಿಕ ಕನೆಕ್ಟ್ ಆಯ್ತು ಲೈಫ್ 'ಫಾರ್ಮುಲಾ'!

ಹಿರಿಯರು ನೋಡಿ ನಿರ್ಧರಿಸಿದ ಮದುವೆ ಸಂಬಂಧಗಳನ್ನು ಸುಲಭವಾಗಿ ನಿರ್ವಹಿಸಲು ಪುಣೆ ಮೂಲದ ವಿಕಾಸ್ ಲೋಹಿಯಾ ಎಂಬ ಯುವಕ ಒಂದು ಎಕ್ಸ್ ಎಲ್ ಶೀಟ್ ತಯಾರಿಸಿದ್ದರು. ಪೋಷಕರು ಬಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಉತ್ತರಿಸಲು, ಈಗಾಗಲೇ ನೀಡಿದ ಉತ್ತರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ಶೀಟ್‌ಅನ್ನು ಬಳಕೆ ಮಾಡುತ್ತಿದ್ದ.

Read Full Story
02:53 PM (IST) Aug 13

India Latest News Live 13 August 202645 ದಿನ ಮುಂಚೆನೇ ಲೀವ್ ಕೇಳಿದ್ರೂ ಮ್ಯಾನೇಜರ್ No ಅಂದ..! ಟೆಕ್ಕಿಯ ರೆಡ್ಡಿಟ್ ಪೋಸ್ಟ್ ಫುಲ್ ವೈರಲ್!

45 ದಿನಗಳ ಮುಂಚಿತವಾಗಿ ರಜೆ ಕೇಳಿದರೂ ಮ್ಯಾನೇಜರ್ ಅನುಮತಿ ನಿರಾಕರಿಸಿದ್ದಕ್ಕೆ ಟೆಕ್ಕಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಪೂರ್ವ-ಯೋಜಿತ ಪ್ರವಾಸಕ್ಕೆ ರಜೆ ನಿರಾಕರಿಸಿದ ಈ ಘಟನೆಯು, ಭಾರತೀಯ ಐಟಿ ಕಂಪನಿಗಳಲ್ಲಿನ ಕೆಲಸದ ಸಂಸ್ಕೃತಿ ಮತ್ತು ಉದ್ಯೋಗಿಗಳ ಹಕ್ಕುಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
02:51 PM (IST) Aug 13

India Latest News Live 13 August 2026Cab Booking Rules Changed - ರೈಡ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್; ಓಲಾ, ಉಬರ್, ರ್ಯಾಪಿಡೋಗೆ ಕೇಂದ್ರದ ಬಿಗ್ ಶಾಕ್!

ಮುಂಗಡ ಟಿಪ್ ನೀಡಿದರೆ ಬೇಗ ರೈಡ್ ಸಿಗುತ್ತದೆ ಎಂಬ ಭಾವನೆ ಮೂಡಿಸಿ ಗ್ರಾಹಕರ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಚ್ಚರಿಕೆ ನೀಡಿದೆ.

Read Full Story
01:33 PM (IST) Aug 13

India Latest News Live 13 August 2026IPL 2027 ಗೂ ಮುನ್ನ ಮುಂಬೈ ಇಂಡಿಯನ್ಸ್ ಈ ಮೂವರು ಬೌಲರ್‌ಗಳಿಗೆ ಗೇಟ್‌ಪಾಸ್ ನೀಡೋದು ಫಿಕ್ಸ್..! ಲಿಸ್ಟ್‌ನಲ್ಲಿದ್ದಾರೆ ₹12.5 ಕೋಟಿಯ ಮಾರಕ ವೇಗಿ

ಕಳೆದ ಐಪಿಎಲ್ ಸೀಸನ್‌ನಲ್ಲಿ ನೀರಸ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, ಮುಂಬರುವ ಹರಾಜಿಗೂ ಮುನ್ನ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಕಳಪೆ ಪ್ರದರ್ಶನ ತೋರಿದ ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಟ್ರೆಂಟ್ ಬೌಲ್ಟ್ ಸೇರಿದಂತೆ ಮೂವರು ಪ್ರಮುಖ ಬೌಲರ್‌ಗಳನ್ನು ತಂಡದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.
Read Full Story
12:42 PM (IST) Aug 13

India Latest News Live 13 August 2026ಟಾಟಾ ಸನ್ಸ್ ಚುಕ್ಕಾಣಿ ಬಿಟ್ಟ ಚಂದ್ರಶೇಖರನ್, ದಿಢೀರ್ ಬೆಳವಣಿಗೆ ಬೆನ್ನಲ್ಲೇ ಟಾಟಾ ಗ್ರೂಪ್‌ನಲ್ಲಿ ಅಧಿಕಾರದ ಹೋರಾಟ!

ಎನ್. ಚಂದ್ರಶೇಖರನ್ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಟಾಟಾ ಸಮೂಹದಲ್ಲಿ ತೀವ್ರ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಗಿದೆ. ಟಾಟಾ ಗ್ರೂಪ್ ಮತ್ತು ನೋಯೆಲ್ ಟಾಟಾ ನೇತೃತ್ವದ ಟಾಟಾ ಟ್ರಸ್ಟ್‌ಗಳ ನಡುವಿನ ಹೂಡಿಕೆ ಯೋಜನೆಗಳು, ಆಡಳಿತಾತ್ಮಕ ಭಿನ್ನಾಭಿಪ್ರಾಯಗಳೇ ಈ ಅಧಿಕಾರ ಹೋರಾಟಕ್ಕೆ ಮುಖ್ಯ ಕಾರಣ.

Read Full Story
12:14 PM (IST) Aug 13

India Latest News Live 13 August 2026ಸ್ಟಿಫನ್ ಫ್ಲೆಮಿಂಗ್ ಜಾಗಕ್ಕೆ ಸರ್‌ಪ್ರೈಸ್ ಎಂಟ್ರಿ? ಸಿಎಸ್‌ಕೆ ಹೊಸ ಕೋಚ್ ಬಗ್ಗೆ ಬಿಗ್ ಹಿಂಟ್ ಕೊಟ್ಟ ರವಿಚಂದ್ರನ್ ಅಶ್ವಿನ್..!

ಸಿಎಸ್‌ಕೆ ಹೆಡ್ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿಯುವ ಸಾಧ್ಯತೆಯಿದ್ದು, ಅವರ ಸ್ಥಾನಕ್ಕೆ ಇಯಾನ್ ಮಾರ್ಗನ್ ಬರಬಹುದು ಎಂದು ಆರ್. ಅಶ್ವಿನ್ ಸುಳಿವು ನೀಡಿದ್ದಾರೆ. ಇದೇ ವೇಳೆ, ಮುಂದಿನ ಸೀಸನ್‌ನಲ್ಲಿ ಎಂ.ಎಸ್. ಧೋನಿಯೇ ತಂಡದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
Read Full Story
12:02 PM (IST) Aug 13

India Latest News Live 13 August 2026ತಿಳಿದುಕೊಳ್ಳಿ! ಅನುಮತಿ ಇಲ್ಲದೇ ಯಾರಾದರೂ ನಿಮ್ಮ ವಿಡಿಯೋ ಮಾಡಿದ್ರೆ ಕಾನೂನಿಲ್ಲಿ ಏನು ಶಿಕ್ಷೆ ಕೊಡಿಸಬಹುದು?

ಸ್ಮಾರ್ಟ್‌ಫೋನ್ ಕೈಯಲ್ಲಿದೆ ಎಂದ ತಕ್ಷಣ ಯಾರದ್ದೇ ವಿಡಿಯೋ ಮಾಡುವುದು ಕಾನೂನುಬದ್ಧವಲ್ಲ. ಇತರರ ವೈಯಕ್ತಿಕ ಗೌರವ ಮತ್ತು ಖಾಸಗಿತನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

Read Full Story
11:49 AM (IST) Aug 13

India Latest News Live 13 August 2026ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯ ಮಾನವನ ಗುಹೆ ಪತ್ತೆ, ಪ್ರಾಚೀನ ಬೆಂಕಿ, ಕಲ್ಲಿನ ಉಪಕರಣ, ಆಭರಣ ಬೆಳಕಿಗೆ

ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯದಾದ ಕೊಸ್ಕಾರ್ಲಿ ಗುಹೆಯು ಪತ್ತೆಯಾಗಿದ್ದು, ಇದು ಎಪಿಪಾಲಿಯೊಲಿಥಿಕ್ ಅವಧಿಯ ಮಾನವ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಈ ಉತ್ಖನನದಲ್ಲಿ ಪ್ರಾಚೀನ ಅಗ್ನಿಕುಂಡ, ಕಲ್ಲಿನ ಉಪಕರಣಗಳು ಮತ್ತು ವೈಯಕ್ತಿಕ ಆಭರಣಗಳು ದೊರೆತಿದ್ದು, ಇದು ಅನಾಟೋಲಿಯಾ ಮತ್ತು ಕಾಕಸಸ್ ನಡುವಿನ ಸಾಂಸ್ಕೃತಿಕ ಸಂಪರ್ಕವನ್ನು ಸೂಚಿಸುತ್ತದೆ.
Read Full Story
11:35 AM (IST) Aug 13

India Latest News Live 13 August 2026ಮುಸ್ಲಿಂ ಜೊತೆ ಮದುವೆ, ಡುಮ್ಮಿ, ಕೊಳಕು ಟ್ರೋಲ್‌ಗೆ ಪ್ರತಿಕ್ರಿಯಿಸಿದ ಸ್ವರಾ ಭಾಸ್ಕರ್

ನಟಿ ಸ್ವರಾ ಭಾಸ್ಕರ್ ಅವರು ಮದುವೆ ಮತ್ತು ಹೆರಿಗೆಯ ನಂತರದ ತೂಕ ಏರಿಕೆಗೆ ಸಂಬಂಧಿಸಿದಂತೆ ತಮ್ಮನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ತಾಯಿಯಾದ ನಂತರ ದೇಹದಲ್ಲಿ ಆಗುವ ಬದಲಾವಣೆಗಳು ಸಹಜವಾಗಿದ್ದು, ಟೀಕೆಗಳಿಗೆ ಹೆದರಿ ತೂಕ ಇಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story
10:56 AM (IST) Aug 13

India Latest News Live 13 August 2026Gold Rally Back - ಚಿನ್ನದ ದರ ಕುಸಿತ ಅಂತ್ಯ, ಇನ್ಮುಂದೆ ತೀವ್ರ ಏರಿಕೆ; ಶಾಕಿಂಗ್ ಭವಿಷ್ಯ ನುಡಿದ ಪೀಟರ್ ಸ್ಕಿಫ್!

ಭಾರತದಲ್ಲಿ ಚಿನ್ನದ ದರ ಮಂಗಳವಾರ 3 ಸಾವಿರ ರೂಪಾಯಿಗಿಂತ ಹೆಚ್ಚು ಹೆಚ್ಚಾಗಿತ್ತು, ಇಂದು ಮತ್ತೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ದರ ದಾಖಲಿಸಿದೆ. ಜಾಗತಿಕ ವಿದ್ಯಮಾನಗಳು ಮತ್ತು ಡಾಲರ್ ಮೌಲ್ಯ ಕುಸಿತದಿಂದಾಗಿ ಭವಿಷ್ಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Read Full Story