- Home
- News
- India News
- India Latest News Live: ಕಾವಡ ಯಾತ್ರೆ - ಶ್ರೀಕ್ಷೇತ್ರ ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್ ಕಸದ ರಾಶಿ!
LIVE NOW
India Latest News Live: ಕಾವಡ ಯಾತ್ರೆ - ಶ್ರೀಕ್ಷೇತ್ರ ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್ ಕಸದ ರಾಶಿ!

ಸಾರಾಂಶ
ನವದೆಹಲಿ: ‘ಶಾರ್ಟ್ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು. ಆದರೆ ಎಲ್ಲದಕ್ಕೂ ಶಾರ್ಟ್ಕಟ್ (ಅಡ್ಡದಾರಿ) ಹುಡುಕುತ್ತಾ ಹೋಗುವುದು ಸಲ್ಲದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಕಿವಿಮಾತು ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆತ್ಮಚರಿತ್ರೆಯಾದ ‘ಭಾರತೀಯ ಗಣರಾಜ್ಯದ ವಿಜಯ: ನನ್ನ ಜೀವನ, ನನ್ನ ಹೋರಾಟಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದರು.
‘ಇದು ರೀಲ್ಸ್ನ ಯುಗವಾಗಿದೆ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ನಿಮ್ಮನ್ನು ಅವುಗಳತ್ತ ಆಕರ್ಷಿಸುತ್ತಾರೆ. ಹೀಗಿರುವಾಗ, ರೈಲು ನಿಲ್ದಾಣಗಳಲ್ಲಿ ಬ್ರಿಡ್ಜ್ ಬದಲು ಹಳಿ ದಾಟಿ ಸಾಗುವವರಿಗೆ ಎಚ್ಚರಿಸುವ ‘ಶಾರ್ಟ್ಕಟ್ಗಳು ಅಪಾಯಕಾರಿ’ ಎಂಬ ಸಾಲನ್ನು ನೆನಪಿಟ್ಟುಕೊಳ್ಳಬೇಕು. ಆದರೆ ಶಾರ್ಟ್ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು’ ಎಂದು ಮೋದಿ ಹೇಳಿದರು.
06:46 AM (IST) Aug 13
India Latest News Live 13 August 2026ಕಾವಡ ಯಾತ್ರೆ - ಶ್ರೀಕ್ಷೇತ್ರ ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್ ಕಸದ ರಾಶಿ!
ಶ್ರಾವಣ ಮಾಸದ ಕಾವಡ ಯಾತ್ರೆಯ ನಂತರ ಹರಿದ್ವಾರದಲ್ಲಿ ಸುಮಾರು 7000 ಟನ್ ಕಸ ಸಂಗ್ರಹವಾಗಿದೆ. 4.8 ಕೋಟಿ ಯಾತ್ರಿಕರು ಭಾಗವಹಿಸಿದ್ದ ಈ ಯಾತ್ರೆಯ ಬಳಿಕ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮೂತ್ರ ತುಂಬಿದ ಬಾಟಲಿಗಳು ಎಲ್ಲೆಡೆ ಬಿದ್ದಿದ್ದು, ಸ್ವಚ್ಛತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story