ಕಾವಡ ಯಾತ್ರೆ: ಶ್ರೀಕ್ಷೇತ್ರ ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್ ಕಸದ ರಾಶಿ!
ಶ್ರಾವಣ ಮಾಸದ ಕಾವಡ ಯಾತ್ರೆಯ ನಂತರ ಹರಿದ್ವಾರದಲ್ಲಿ ಸುಮಾರು 7000 ಟನ್ ಕಸ ಸಂಗ್ರಹವಾಗಿದೆ. 4.8 ಕೋಟಿ ಯಾತ್ರಿಕರು ಭಾಗವಹಿಸಿದ್ದ ಈ ಯಾತ್ರೆಯ ಬಳಿಕ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮೂತ್ರ ತುಂಬಿದ ಬಾಟಲಿಗಳು ಎಲ್ಲೆಡೆ ಬಿದ್ದಿದ್ದು, ಸ್ವಚ್ಛತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೂತ್ರದ ಬಾಟಲುಗಳ ರಾಶಿ ಮತ್ತು 7000 ಟನ್ ಕಸ
ಹರಿದ್ವಾರ: ಶ್ರಾವಣ ಮಾಸದ ನಿಮಿತ್ತ ಉತ್ತರಾಖಂಡದ ಪವಿತ್ರ ಕ್ಷೇತ್ರ ಹರಿದ್ವಾರದಲ್ಲಿ ನಡೆದ ಕಾವಡ ಯಾತ್ರೆ ಬಳಿಕ ಮೂತ್ರದ ಬಾಟಲುಗಳ ರಾಶಿ ಮತ್ತು 7000 ಟನ್ ಕಸ ಸಂಗ್ರಹವಾಗಿದೆ.
ಸರಿಸುಮಾರು 4.8 ಕೋಟಿ ಕಾವಡ ಯಾತ್ರಿಕರು
ಈ ವರ್ಷ ಸರಿಸುಮಾರು 4.8 ಕೋಟಿ ಕಾವಡ ಯಾತ್ರಿಕರು ಗಂಗಾ ನದಿ ನೀರನ್ನು ಸಂಗ್ರಹಿಸಿದ್ದಾರೆ. ಆದರೆ ಈ ವೇಳೆ ಅಪಾರ ಪ್ರಮಾಣದ ತ್ಯಾಜ್ಯಗಳು ಘಾಟ್, ಮೇಳಗಳ ಮೈದಾನಗಳು, ಪಾರ್ಕಿಂಗ್ ಪ್ರದೇಶ ಸ್ಥಳಗಳಲ್ಲಿ ಹಾಗೆಯೇ ಉಳಿದುಕೊಂಡಿವೆ.
ಈ ವರ್ಷ ಸರಿಸುಮಾರು 4.8 ಕೋಟಿ ಕಾವಡ ಯಾತ್ರಿಕರು ಗಂಗಾ ನದಿ ನೀರನ್ನು ಸಂಗ್ರಹಿಸಿದ್ದಾರೆ. ಆದರೆ ಈ ವೇಳೆ ಅಪಾರ ಪ್ರಮಾಣದ ತ್ಯಾಜ್ಯಗಳು ಘಾಟ್, ಮೇಳಗಳ ಮೈದಾನಗಳು, ಪಾರ್ಕಿಂಗ್ ಪ್ರದೇಶ ಸ್ಥಳಗಳಲ್ಲಿ ಹಾಗೆಯೇ ಉಳಿದುಕೊಂಡಿವೆ.
ಕೊಠಡಿಯಲ್ಲಿ ಮೂತ್ರದ ಬಾಟಲಿಗಳು ಪತ್ತೆ
ಪ್ಲಾಸ್ಟಿಕ್ ತಟ್ಟೆಗಳು, ಬಳಸಿ ಎಸೆದ ಬಟ್ಟೆಗಳು, ಮೂತ್ರ ಮಾಡಿ ಬಿಸಾಕಿದ ಬಾಟಲಿ, ಇನ್ನಿತರ ವಸ್ತುಗಳು ಸೇರಿದಂತೆ ಪುರಸಭೆಯ ನೈರ್ಮಲ್ಯ ಸಿಬ್ಬಂದಿ 7000 ಟನ್ ಕಸವನ್ನು ಸಂಗ್ರಹಿಸಿದ್ದಾರೆ. ಇದರ ಜತೆಗೆ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಮೂತ್ರದ ಬಾಟಲಿಗಳು ಪತ್ತೆಯಾಗಿದ್ದು, ಯಾತ್ರಿಕರು ಸ್ಚಚ್ಛತೆ ಕಾಯ್ದುಕೊಳ್ಳದರ ಬಗ್ಗೆ ಚರ್ಚೆ ಶುರುವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

