ಕಲೆ ಇರಲಿ ಅಥವಾ ವಿಜ್ಞಾನ, ಮಕ್ಕಳಿಗೆ ಬೇಕು ಪ್ರಾಯೋಗಿಕ ಕಲಿಕೆ ಹಿಂದೂಸ್ತಾನ್ ಇಂಟರ್ನ್ಯಾಷನಲ್ ಶಾಲೆ,ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಬದ್ಧ ಮಕ್ಕಳ ದಿನದಂದು ವಿದ್ಯಾರ್ಥಿಗಳಿಂದ ಕಲೆ- ವಿಜ್ಞಾನ ಪ್ರದರ್ಶನ 

ಶಿಕ್ಷಣ ಅಂದರೆ ಬರೀ ಒದುವ ಅಥವಾ ಬರೆಯುವ ಸಾಮರ್ಥ್ಯವಲ್ಲ; ಬದಲಾಗಿ ಸಮಗ್ರ ಬೌದ್ಧಿಕ ಬೆಳವಣಿಗೆಯೇ ಶಿಕ್ಷಣದ ಮೂಲ ಆಶಯವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಯ ಸಂಪೂರ್ಣ ಬೆಳವಣಿಗೆಯೇ ಶಿಕ್ಷಣದ ಪ್ರಮುಖ ಉದ್ದೇಶ. ಕಲಿಸುವಿಕೆಯಲ್ಲಿ ಪ್ರಾಯೋಗಿಕ ವಿಧಾನ ಇದ್ದರೆ ಮಾತ್ರ ಶಿಕ್ಷಣದ ಗುರಿ ಮುಟ್ಟವುದು ಸಾಧ್ಯ. ಆ ಮೂಲಕ ವಿದ್ಯಾರ್ಥಿಗಳು ಕಲಿಯುವ ಜೊತೆಗೆ ವಿಷಯದ ಅನುಭವವನ್ನು ಕೂಡಾ ಪಡೆಯುತ್ತಾರೆ.

ಪಾದೂರಿನ ಹಿಂದೂಸ್ತಾನ್ ಇಂಟರ್ನ್ಯಾಷನಲ್ ಸ್ಕೂಲ್ (HIS) ವಿದ್ಯಾರ್ಥಿಗಳು ಕಳೆದ ಗುರುವಾರದಂದು (ನ.14) "Spectacular 2019" ವಿಜ್ಞಾನ, ಕಲೆ, ಕರಕುಶಲ, ರೋಬೋಟಿಕ್ಸ್ ಮತ್ತು ICT ಪ್ರದರ್ಶನವನ್ನು ಆಯೋಜಿಸಿದ್ದರು.

ಇದನ್ನೂ ಓದಿ | ಹಿಂದುಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ‘ಕೊರಿಯನ್ ದಿವಸ’ ಆಚರಣೆ... :

ಮಕ್ಕಳ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಬಾಲ ವಿಜ್ಞಾನಿಗಳು ತಮ್ಮ ಸೃಜನಶೀಲತೆ ಮತ್ತು ವೈಜ್ಞಾನಿಕ ಕೌಶಲ್ಯಗಳನ್ನು ಪ್ರದರ್ಶಿಸಿದರು. ಆ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಂಶೋಧನಾ ಆಸಕ್ತಿ ಮತ್ತು ಕಲಾ ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಯತ್ನ ಇದಾಗಿತ್ತು.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ, ಇಸ್ರೋದಲ್ಲಿ ಕೆಲಸ ಮಾಡಿದ ಅನುಭವವಿರುವ, ಮತ್ತು GSLV ಪ್ರಾಜೆಕ್ಟ್ ನ ಅಸೋಸಿಯೇಟ್ ಡೈರೆಕ್ಟರ್ ಆಗಿ ನಿವೃತ್ತಿ ಹೊಂದಿರುವ ಆರ್. ದೊರೈರಾಜ್ ಅವರು ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ವಿದ್ಯಾರ್ಥಿಗಳ ಕಲೆ ಮತ್ತು ವೈಜ್ಞಾನಿಕ ಪ್ರಯೋಗಗಳಿಗೆ ಮುಖ್ಯ ಅತಿಥಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೀವನಕ್ಕೆ ಅರ್ಥವಿರಬೇಕು, ಏನನ್ನು ಇಷ್ಟ ಪಡುತ್ತೀರೋ ಅದನ್ನೇ ಮಾಡಿ, ಏನು ಮಾಡ್ತೀರೋ ಅದನ್ನ ಇಷ್ಟ ಪಡಿ, ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.