ಕೇಂದ್ರ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಜೊತೆಗಿನ ಮಾತುಕತೆ ವಿಫಲವಾಗುತ್ತಿದೆ. ಇದರ ನಡುವೆ ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿದೆ. ಇದೀಗ ಬಂದ್ಗೆ ಹಲವು ಸಂಘಟನೆಗಳ ಜೊತೆ ಕೆಲ ಪಕ್ಷಗಳು ಬೆಂಬಲ ಘೋಷಿಸಿದೆ.
ನವದೆಹಲಿ(ಡಿ.05): ಕೃಷಿ ಮಸೂದೆಯನ್ನು ಹಿಂಪಡೆಯಲು ರೈತರು ನಡೆಸುತ್ತಿರುವ ಪ್ರತಿಭಟನೆ ಕಾವು ತಣ್ಣಗಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಇದರ ಸತತ ಮಾತುಕತೆಗಳು ಫಲಪ್ರದವಾಗುತ್ತಿಲ್ಲ. ಪ್ರತಿಭಟನಾ ನಿರತ ರೈತ ಸಂಘಟನೆಗಳು ಡಿಸೆಂಬರ್ 8 ರಂದು ಭಾರತ್ ಬಂದ್ಗೆ ಕರೆ ನೀಡಿದೆ. ಇದಕ್ಕೆ ಎಡಪಕ್ಷಗಳು ಬೆಂಬಲ ಘೋಷಿಸಿದೆ.
ಭಾರತ್ ಬಂದ್ಗೆ ಕರೆ ನೀಡಿದ ರೈತ ಸಂಘಟನೆ, ದೇಶವ್ಯಾಪಿ ಪ್ರತಿಭಟನೆ ಕಿಚ್ಚು!
ರೈತ ಸಂಘಟನೆ ಕರೆ ನೀಡಿದ ಭಾರತ್ ಬಂದ್ಗೆ 5 ಪಕ್ಷಗಳು ಬೆಂಬಲ ನೀಡಿದೆ. ಎಡಪಕ್ಷಗಳಾದ ಅಖಿಲ ಭಾರತ ಸಮಾಜವಾದಿ ಪಕ್ಷ, ಭಾರತೀಯ ಕಮ್ಯುನಿಸ್ಟ್ ಪಕ್ಷ, ಮಾಕ್ಸ್ ವಾದಿ ಭಾರತೀಯ ಕಮ್ಯೂನಿಸ್ಟ್ ಸೇರಿದಂತೆ ಪ್ರಮುಕ 5 ಪಕ್ಷಗಳು ಬಂದ್ಗೆ ಬೆಂಬಲ ಘೋಷಿಸಿದೆ. ಇದರ ಜೊತೆ ಕೆಲ ಸಂಘಟನೆಗಳಲ್ಲಿ ಎಡಪಕ್ಷಗಳು ಬೆಂಬಲ ಸೂಚಿಸಲು ಮನವಿ ಮಾಡಿದೆ.
ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ. ಇದು ಕೇಂದ್ರ ಸರ್ಕಾರ ಅಂತ್ಯಕ್ಕೆ ಕಾರಣವಾಗಲಿದೆ. ರೈತರ ಬೇಡಿಕೆಯನ್ನು ಕೇಂದ್ರ ಸರ್ಕಾರ ಪೂರೈಸಬೇಕು. ಇದಕ್ಕಾಗಿ ಡಿಸೆಂಬರ್ 8 ರಂದು ರೈತರ ಭಾರತ್ ಬಂದ್ಗೆ ಎಡಪಕ್ಷಗಳು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 5, 2020, 5:58 PM IST