ಬ್ರಾಹ್ಮಣರು ವಿದೇಶೀಯರು: ಛತ್ತೀಸ್ಗಢ ಸಿಎಂ ತಂದೆ ವಿವಾದಿತ ಹೇಳಿಕೆ
* ನಂದ ಕುಮಾರ್ ಬಾಘೇಲ್ ಅವರು ಸಮುದಾಯವೊಂದರ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ
* ಬ್ರಾಹ್ಮಣರು ವಿದೇಶೀಯರು ಛತ್ತೀಸ್ಗಢ ಸಿಎಂ ತಂದೆ ವಿವಾದಿತ ಹೇಳಿಕೆ
ರಾಯ್ಪುರ(ಫೆ.06): ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ತಂದೆ ನಂದ ಕುಮಾರ್ ಬಾಘೇಲ್ ಅವರು ಸಮುದಾಯವೊಂದರ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಭಾನುವಾರ ಸರ್ವ ಬ್ರಾಹ್ಮಣ ಸಮಾಜದ ದೂರಿನ ಅನ್ವಯ, ನಂದಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ವಿದೇಶಿಯರಾದ ಬ್ರಾಹ್ಮಣರನ್ನು ಬಹಿಷ್ಕರಿಸಬೇಕು. ಬ್ರಾಹ್ಮಣರನ್ನು ಗ್ರಾಮಗಳಿಗೆ ಬಿಟ್ಟುಕೊಳ್ಳಬಾರದು. ಅಲ್ಲದೆ ಅವರನ್ನು ದೇಶದಿಂದಲೇ ಹೊರಹಾಕಬೇಕು’ ಎಂದು ನಂದ ಕುಮಾರ್ ಬಾಘೇಲ್(86) ಅವರು ಜನರಿಗೆ ಕರೆ ನೀಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲದೆ’ ಎಂದು ಸರ್ವ ಬ್ರಾಹ್ಮಣ ಸಮಾಜ ದೂರಿದೆ.
ಈ ಬಗ್ಗೆ ಸಿಎಂ ಭೂಪೇಶ್ ಪ್ರತಿಕ್ರಿಯಿಸಿದ್ದು, ‘ಸಮುದಾಯವೊಂದರ ಕುರಿತಾಗಿ ತಮ್ಮ ತಂದೆ ನೀಡಿದ ಹೇಳಿಕೆಯಿಂದ ನೋವಾಗಿದ್ದು, ಅವರ ವಿರುದ್ಧ ನಮ್ಮ ಸರ್ಕಾರ ಮತ್ತು ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ’ ಎಂದಿದ್ದಾರೆ.
ಭೂಪೇಶ್ ಬಾಘೇಲ್ ಅವರ ತಂದೆ ಈ ಹಿಂದೆ ಶ್ರೀರಾಮನ ಕುರಿತಾಗಿಯೂ ಇದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.