Asianet Suvarna News Asianet Suvarna News

ಪಂಚ ರಾಜ್ಯ​ಗಳ ಚುನಾ​ವ​ಣೆ​ಯ​ಲ್ಲಿ ಬಿಜೆಪಿ ವಿರುದ್ಧ ರೈತರ ರಣ​ಕ​ಹ​ಳೆ!

ಪಂಚ ರಾಜ್ಯ​ಗಳ ಚುನಾ​ವ​ಣೆ​ಯ​ಲ್ಲಿ ಬಿಜೆಪಿ ವಿರುದ್ಧ ರೈತರ ರಣ​ಕ​ಹ​ಳೆ| ಕರ್ನಾ​ಟ​ಕಕ್ಕೂ ಎಸ್‌​ಕೆಎಂ ಮುಖಂಡರ ಭೇಟಿ, ಪ್ರಚಾ​ರ| ಬಿಜೆಪಿ ಸೋಲಿ​ಸುವ ಅನ್ಯ ಪಕ್ಷಕ್ಕೆ ಮತ ನೀಡಿ: ಎಸ್‌​ಕೆ​ಎಂ

Farm unions will campaign against BJP in poll bound States pod
Author
Bangalore, First Published Mar 3, 2021, 3:07 PM IST

ನವ​ದೆ​ಹ​ಲಿ(ಮಾ.03): ನೂತನ 3 ಕೃಷಿ ಕಾಯ್ದೆ​ಗ​ಳನ್ನು ಹಿಂಪ​ಡೆ​ಯದ ಕೇಂದ್ರ ಸರ್ಕಾ​ರದ ವಿರುದ್ಧ ಆಕ್ರೊಶಗೊಂಡಿರುವ ರೈತ ಹೋರಾ​ಟ​ಗಾ​ರರು, ಪಂಚ ರಾಜ್ಯ​ಗಳ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಬಿಜೆ​ಪಿ​ಯನ್ನು ಸೋಲಿ​ಸಲು ಕರೆ ನೀಡು​ವು​ದಾಗಿ ಗುಡು​ಗಿ​ದ್ದಾರೆ. ಏತ​ನ್ಮಧ್ಯೆ, ವಿವಿಧ ಬೆಳೆ​ಗ​ಳಿಗೆ 1000 ರು.ಗಿಂತ ಕಡಿಮೆ ಬೆಂಬಲ ಬೆಲೆ ನೀಡು​ತ್ತಿ​ರುವ ಕರ್ನಾ​ಟ​ಕಕ್ಕೂ ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡರು ಭೇಟಿ ನೀಡಿ, ಈ ಬಗ್ಗೆ ರೈತ​ರಿಗೆ ಅರಿವು ಮೂಡಿ​ಸ​ಲಿ​ದ್ದಾರೆ ಎಂದು ಸಂಯು​ಕ್ತ ಕಿಸಾನ್‌ ಮೋರ್ಚಾ(ಎಸ್‌​ಕೆ​ಎಂ) ಮುಖಂಡ ಯೋಗೇಂದ್ರ ಯಾದವ್‌ ತಿಳಿ​ಸಿ​ದ್ದಾರೆ.

ಈ ಸಂಬಂಧ ಮಂಗ​ಳ​ವಾರ ಮಾತ​ನಾ​ಡಿದ ಎಸ್‌​ಕೆ​ಎಂ ಮುಖಂಡ ರಾಜೇ​ವಾಲ್‌, ‘ಚುನಾವಣೆ ನಿಗ​ದಿ​ಯಾ​ಗಿ​ರುವ 5 ರಾಜ್ಯ​ಗ​ಳಿಗೆ ನಮ್ಮ ಪ್ರತಿ​ನಿ​ಧಿ​ಗ​ಳನ್ನು ಕಳು​ಹಿ​ಸು​ತ್ತೇವೆ. ಆದರೆ ನಾವು ಇಂಥದ್ದೇ ಪಕ್ಷಕ್ಕೆ ಮತ ಹಾಕು​ವಂತೆ ರೈತ​ರಿಗೆ ಕೋರಿ​ಕೊ​ಳ್ಳಲ್ಲ. ಬದ​ಲಾಗಿ ಬಿಜೆ​ಪಿ​ಯನ್ನು ಸೋಲಿ​ಸಲು ಸಮ​ರ್ಥ​ವಿ​ರುವ ಯಾವುದೇ ಪಕ್ಷದ ಅಭ್ಯ​ರ್ಥಿಗೆ ಮತ ಹಾಕು​ವಂತೆ ಕೇಳಿ​ಕೊ​ಳ್ಳು​ತ್ತೇವೆ. ತನ್ಮೂ​ಲಕ ರೈತ​ರಿಗೆ ಮರಣ ಶಾಸ​ನ​ವಾ​ಗ​ಲಿರುವ ನೂತನ 3 ಕೃಷಿ ಕಾಯ್ದೆ ಹಿಂಪ​ಡೆ​ಯದ ಕೇಂದ್ರದ ಬಿಜೆಪಿ ಸರ್ಕಾ​ರಕ್ಕೆ ಪಾಠ ಕಲಿ​ಸು​ವು​ದಾ​ಗಿ’ ಹೇಳಿ​ದ್ದಾರೆ.

ದಿಲ್ಲಿ ಗಡಿ​ಗ​ಳಲ್ಲಿ ರೈತರ ಪ್ರತಿ​ಭ​ಟ​ನೆಗೆ 100 ದಿನ ತುಂಬ​ಲಿ​ರುವ ಕಾರಣ ಮಾ.6ರಂದು ಕೆಎಂಪಿ ಹೆದ್ದಾ​ರಿ​ಯನ್ನು 5 ಗಂಟೆ​ಗಳ ಕಾಲ ತಡೆ​ಯ​ಲಾ​ಗು​ತ್ತದೆ. ಮಹಿಳಾ ದಿನಾ​ಚ​ರ​ಣೆ​ಯಾದ ಮಾ.8ರಂದು ಮಹಿಳಾ ಪ್ರತಿ​ಭ​ಟ​ನಾ​ಕಾ​ರರೇ ದಿಲ್ಲಿ ಗಡಿ​ಗ​ಳಲ್ಲಿ ಪ್ರತಿ​ಭ​ಟನೆ ನೇತೃತ್ವ ವಹಿ​ಸ​ಲಿ​ದ್ದಾರೆ. ಮಾ.12ರಂದು ರೈತ ಮುಖಂಡರು ಕೋಲ್ಕ​ತಾಗೆ ತೆರಳಿ ಬಿಜೆಪಿ ಮತ ಹಾಕ​ದಂತೆ ಪ್ರಚಾರ ನಡೆ​ಸ​ಲಿ​ದ್ದಾರೆ ಎಂದು ತಿಳಿ​ಸಿ​ದರು.

Follow Us:
Download App:
  • android
  • ios