ಶೇ.50ರಷ್ಟು ಅಪಘಾತ ತಗ್ಗಿಸುವ ಗುರಿ ಮುಟ್ಟಲು ವಿಫಲ: ಕೇಂದ್ರ ಸಚಿವ ನಿತಿನ್ ಗಡ್ಕರಿ
2024ರ ಗುರಿ ಅನ್ವಯ ನಾವು ರಸ್ತೆ ಅಪಘಾತವನ್ನು ಶೇ.50ರಷ್ಟು ಕಡಿಮೆ ಮಾವುವ ಗುರಿ ತಲುಪುವುದು ಸಂದೇಹಾಸ್ಪದ. ಇದಕ್ಕೆ ಪ್ರಮುಖ ಕಾರಣವೆಂದರೆ ಸರ್ಕಾರದ ನ್ಯೂನತೆ ಹಾಗೂ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳುತ್ತಿರುವ ಕಂಪನಿಗಳು’ ಎಂದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ
ನವದೆಹಲಿ(ಜೂ.09): 2024ರ ವೇಳೆಗೆ ಭಾರತದಲ್ಲಿ ರಸ್ತೆ ಅಪಘಾತವನ್ನು ಶೇ.50ರಷ್ಟುಕಡಿಮೆ ಮಾಡುವ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಷಾದಿಸಿದ್ದಾರೆ.
ಗುರುವಾರ ಮಾತನಾಡಿದ ಅವರು,‘2024ರ ಗುರಿ ಅನ್ವಯ ನಾವು ರಸ್ತೆ ಅಪಘಾತವನ್ನು ಶೇ.50ರಷ್ಟು ಕಡಿಮೆ ಮಾವುವ ಗುರಿ ತಲುಪುವುದು ಸಂದೇಹಾಸ್ಪದ. ಇದಕ್ಕೆ ಪ್ರಮುಖ ಕಾರಣವೆಂದರೆ ಸರ್ಕಾರದ ನ್ಯೂನತೆ ಹಾಗೂ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳುತ್ತಿರುವ ಕಂಪನಿಗಳು’ ಎಂದರು.
ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!
‘ರಸ್ತೆ ನಿರ್ಮಾಣ ಮಾಡಲು ತಯಾರಿಸುವ ಡಿಪಿಆರ್ನಲ್ಲಿ ಕಂಪನಿಗಳು ಹಣ ಉಳಿಸುವ ಉದ್ದೇಶವನ್ನು ಹೊಂದಿವೆಯೆ ಹೊರತು ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಹೊಂದಿಲ್ಲ’ ಎಂದೂ ವಿಷಾದಿಸಿದರು. ಇದರಿಂದಾಗಿ ದೇಶದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಸಂಭವಿಸುತ್ತಿದೆ. ಇದರಲ್ಲಿ 2 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರೆ, 3 ಲಕ್ಷ ಮಂದಿ ತೀವ್ರವಾಗಿ ಗಾಯಗೊಳ್ಳುತ್ತಿದ್ದಾರೆ ಎಂದು ಬೇಸರಿಸಿದರು.