ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ವಿರುದ್ಧ ಕೇಂದ್ರ ಸರ್ಕಾರದ ದ್ವೇಷದ ರಾಜಕೀಯದ ಬಗ್ಗೆ ಮಾತನಾಡಿದರು. 100 ದಿನಗಳ ಕೆಲಸದ ನಂತರ ಕೇಂದ್ರವು, ಬಾಂಗ್ಲಾ ಆವಾಸ್‌ ಯೋಜನೆಗೆ ಹಣ ಪಾವತಿಸುವುದನ್ನು ನಿಲ್ಲಿಸಿದೆ ಎಂದು ಅವರು ಹೇಳಿದ್ದಲ್ಲದೆ, ಯುಜಿಸಿಒ ವಿದ್ಯಾರ್ಥಿ ವೇತನವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. 

ಕೋಲ್ಕತ (ಜುಲೈ 9): ದಶಕದ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಪುಸ್ತಕ ಮೇಳವೊಂದರಲ್ಲಿ (Book Fair) ಮಾತನಾಡಿದ್ದ ಒಂದು ಮಾತು ದೊಡ್ಡ ವಿವಾದ ಸೃಷ್ಟಿ ಮಾಡಿತ್ತು. ಒಬ್ಬ ವ್ಯಕ್ತಿ ತನ್ನ ಪುಸ್ತಕಗಳನ್ನು ಮತ್ತು ಹೆಂಡತಿಯನ್ನು ಯಾರಿಗೂ ಸಾಲವಾಗಿ ನೀಡಬಾರದು ಎಂದು ಆಕೆ ಹೇಳಿದ್ದರು. ಹಾಗೇನಾದರೂ ಆದಲ್ಲಿ, ಮರುಪಾವತಿ ಲಭ್ಯವಿಲ್ಲ ಎಂದಿದ್ದರು.

ಅವರ ಈ ಹೇಳಿಕೆ ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಮಹಿಳಾ ಸಂಘಟನೆಗಳು ಮಮತಾ ಬ್ಯಾನರ್ಜಿ ಈ ಹೇಳಿಕೆಯನ್ನು ವಾಪಾಸ್‌ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಆದರೆ, ಇದಾದ ಇಷ್ಟು ವರ್ಷಗಳ ಬಳಿಕ ಗುರುವಾರ ಮತ್ತೊಮ್ಮೆ ಇಂಥದ್ದೇ ಹೇಳಿಕೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?: ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು 'ಯಾರಿಗೂ ಜ್ಞಾನ, ಬುದ್ಧಿಶಕ್ತಿ ಮತ್ತು ಗೃಹಿಣಿಯನ್ನು ಕೊಡಬೇಡಿ. ನೀಡಿದರೆ, ಮರುಪಾವತಿ ಲಭ್ಯವಿಲ್ಲ" ಎನ್ನುವ ವಿವಾದಿತ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಬಿಜೆಪಿಯ (BJP Leaders) ನಾಯಕರು ಮಮತಾ ಬ್ಯಾನರ್ಜಿ ವಿರುದ್ಧ ಮುಗಿಬಿದ್ದಿದ್ದಾರೆ. 

Scroll to load tweet…


ಪಶ್ಚಿಮ ಬಂಗಾಳದ ವಿರುದ್ಧ ಕೇಂದ್ರ ಸರ್ಕಾರದ ದ್ವೇಷದ ರಾಜಕೀಯದ ಬಗ್ಗೆ ಮಾತನಾಡುತ್ತಾ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು. 100 ದಿನಗಳ ಕೆಲಸದ ನಂತರ ಕೇಂದ್ರವು, ಬಾಂಗ್ಲಾ ಅಬಾಸ್ ಯೋಜನೆಗೆ ಹಣ ಪಾವತಿಸುವುದನ್ನು ನಿಲ್ಲಿಸಿದೆ ಎಂದು ಅವರು ಹೇಳಿದರು.

ಅಗ್ನಿಪಥ ಹೆಸರಲ್ಲಿ ಶಸ್ತ್ರಸಜ್ಜಿತ ಪಡೆ ಸೃಷ್ಟಿಗೆ ಬಿಜೆಪಿ ಯತ್ನ: ಮಮತಾ ಗಂಭೀರ ಆರೋಪ

ಯುಜಿಸಿಒ ವಿದ್ಯಾರ್ಥಿ ವೇತನವನ್ನು ಸರಿಯಾಗಿ ನೀಡುತ್ತಿಲ್ಲ. ಮಮತಾ ಪ್ರಕಾರ, ಬಂಗಾಳದ ವಿರುದ್ಧ ಆರ್ಥಿಕ ದಿಗ್ಬಂಧನವನ್ನು ರಚಿಸಲಾಗಿದೆ. ಆದ್ದರಿಂದ, ಮಮತಾ ಗುಪ್ತಚರ ವಿಷಯವನ್ನು ಸಂದರ್ಭಕ್ಕೆ ತಂದರು. ಕೇಂದ್ರ ಹಣ ನೀಡದಿದ್ದರೂ ರಾಜ್ಯ ಸರ್ಕಾರ ಸರಿಯಾಗಿಯೇ ಕೆಲಸ ಮಾಡುತ್ತಿದೆ ಎಂದು ಮಮತಾ ತಿಳಿಸಲು ಬಯಸಿದ್ದಾರೆ. ಅದರ ಆಧಾರದಲ್ಲಿ ವಿದ್ಯೆ, ಬುದ್ಧಿ, ಗೃಹಿಣಿಯನ್ನು ಯಾರಿಗೂ ಸಾಲವಾಗಿ ನೀಡಬಾರದು ಎನ್ನುವ ವಿವಾದಿತ ಹೇಳಿಕೆಯನ್ನು ಮಮತಾ ಬ್ಯಾನರ್ಜಿ ನೀಡಿದ್ದಾರೆ.

ರಾಷ್ಟ್ರವ್ಯೂಹದ ಭವಿಷ್ಯ ನಿರ್ಧರಿಸಲಿದೆ ರಾಷ್ಟ್ರಪತಿ ಚುನಾವಣೆ

ಮಮತಾ ಬ್ಯಾನರ್ಜಿ ಹೇಳಿಕೆಗೆ ಟೀಕೆ ಮತ್ತು ಬೆಂಬಲ: ಹತ್ತು ವರ್ಷಗಳ ಹಿಂದೆ ಪುಸ್ತಕ ಮೇಳದಲ್ಲಿ ಮಮತಾ ಹೇಳಿಕೆಯ ಸಂದರ್ಭದಲ್ಲಿ ಅನೇಕ ವಿಮರ್ಶಕರು, ಗೃಹಿಣಿಯರೆಂದರೆ ಸ್ಥಿರಾಸ್ತಿಯೇ? ಅವರನ್ನು ಸಾಲವಾಗಿ ನೀಡಬಹುದೇ? ಇಂತಹ ಹೇಳಿಕೆಗಳು ಒಟ್ಟಾರೆಯಾಗಿ ಮಹಿಳೆಯರ ಘನತೆಗೆ ಧಕ್ಕೆ ತರುತ್ತವೆ ಎಂದು ಟೀಕಿಸಿದ್ದರು. ಇದೇ ಮಾತನನ್ನು ಬಿಜೆಪಿಯ ನಾಯಕ ಅಮಿತ್‌ ಮಾಳವಿಯಾ ಪುನರುಚ್ಚರಿಸಿದ್ದಾರೆ. ಇನ್ನೂ ಅನೇಕರ ಪ್ರಕಾರ, ಅದರ ಬಗ್ಗೆ ವಿವಾದಾತ್ಮಕ ಏನೂ ಇಲ್ಲ. ಎಲ್ಲಾ ಗಾದೆಗಳೂ ಇರುವುದು ಅದೇ ರೀತಿ ಎಂದು ಹೇಳಿದ್ದಾರೆ.