Asianet Suvarna News Asianet Suvarna News

Punjab Elections 2022: ನಿಮಗೆಲ್ಲಾ ಸ್ವಾಗತ ಅಂತಾ ED ಅಧಿಕಾರಿಗಳಿಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದೇಕೆ?

ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸ್ವಾಗತ ಎಂದು ಹೇಳಿದ ದೆಹಲಿ ಸಿಎಂ
ಪಂಜಾಬ್ ಚುನಾವಣೆಗೂ ಮುನ್ನ ಸಚಿವ ಸತ್ಯೇಂದ್ರ ಜೈನ್ ಬಂಧನ ಸಾಧ್ಯತೆ
ಪಂಜಾಬ್ ಚುನಾವಣೆಗೂ ಕೆಲವೇ ದಿನಗಳ ಮುಂಚೆ ಇದು ನಡೆಯುವ ಸಾಧ್ಯತೆ ಇದೆ ಎಂದ ಅರವಿಂದ್ ಕೇಜ್ರಿವಾಲ್

Delhi Chief Minister Arvind Kejriwal Says ED Planning to Arrest Satyendar Jain Ahead of Punjab Polls san
Author
Bengaluru, First Published Jan 23, 2022, 8:37 PM IST

ನವದೆಹಲಿ (ಜ. 23): ಪಂಜಾಬ್ ಚುನಾವಣೆಗೆ (Punjab Elections ) ಕೆಲ ದಿನಗಳಿರುವಾಗ ದೆಹಲಿಯ ಆಮ್ ಆದ್ಮಿ ಪಕ್ಷದ (Aam Admi Party) ಸಚಿವ ಸತ್ಯೇಂದ್ರ ಜೈನ್ (Satyendar Jain) ಅವರನ್ನು ಜಾರಿ ನಿರ್ದೇಶನಾಲಯ (Enforcement Department) ಬಂಧಿಸಬಹುದು ಎಂದು ದೆಹಲಿಯ ಮುಖ್ಯಮಂತ್ರಿ (Delhi Chief Minister) ಅರವಿಂದ್ ಕೇಜ್ರಿವಾಲ್  (Arvind Kejriwal)ಹೇಳಿದ್ದಾರೆ. ಖಚಿತ ಮೂಲಗಳಿಂದ ತಮಗೆ ಈ ಮಾಹಿತಿ ಸಿಕ್ಕಿದ್ದು, ಇವರೆಲ್ಲರಿಗೂ ಆಪ್(AAP) ಈಗಿನಿಂದಲೇ ಸ್ವಾಗತ ಕೋರುತ್ತದೆ ಎಂದು ಕೇಜ್ರಿವಾಲ್ ಕಿಚಾಯಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯ ನಾಯಕರು ಈವರೆಗೂ ಯಾವುದೇ ತಪ್ಪು ಮಾಡಿಲ್ಲ ಹಾಗಾಗಿ ಇಂಥ ಏಜೆನ್ಸಿಗಳಿಗೆ ಹೆದರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

"ಮುಂಬರುವ ಕೆಲವೇ ದಿನಗಳಲ್ಲಿ ಪಂಜಾಬ್ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಇಡಿ ಸತ್ಯೇಂದ್ರ ಜೈನ್ (ದೆಹಲಿ ಆರೋಗ್ಯ ಮತ್ತು ಗೃಹ ಸಚಿವ) ಅವರನ್ನು ಬಂಧಿಸುವ ಗುರಿಯಲ್ಲಿದೆ ಎಂದು ನಮ್ಮ ಮೂಲಗಳಿಂದ ನಮಗೆ ತಿಳಿದಿದೆ, ಅವರಿಗೆ ಸ್ವಾಗತವಿದೆ. ಈ ಹಿಂದೆಯೂ ಸತ್ಯೇಂದ್ರ ಜೈನ್ ಮೇಲೆ ಕೇಂದ್ರವು ದಾಳಿ ನಡೆಸಿತ್ತು. ಆದರೆ ಏನೂ ಸಿಕ್ಕಿರಲಿಲ್ಲ ಎಂದು ಕೇಜ್ರಿವಾಲ್ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿಗೆ ಸೋಲುತ್ತಿದೆ ಎಂದು ಅರಿವಾದಾಗಲೆಲ್ಲ ಕೇಂದ್ರೀಯ ಸಂಸ್ಥೆಗಳನ್ನು ತನ್ನ ವಿರೋಧಿಗಳ ಮೇಲೆ ಹೇರುತ್ತದೆ ಎಂದು ಆರೋಪಿಸಿದರು. ಚುನಾವಣೆ ಇರುವುದರಿಂದ ದಾಳಿ ನಡೆಸಿ ಬಂಧಿಸಲಾಗುತ್ತದೆ. ನಾವು ಯಾವುದೇ ತಪ್ಪು ಮಾಡದ ಕಾರಣ ಇಂತಹ ದಾಳಿಗಳು ಮತ್ತು ಬಂಧನಗಳಿಗೆ ನಾವು ಹೆದರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಈ ಹಿಂದೆ ನನ್ನ ವಿರುದ್ಧ, ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಮನೆ, ಸತ್ಯೇಂದ್ರ ಜೈನ್ ಅವರ ನಿವಾಸ ಹಾಗೂ 21 ಆಪ್ ಶಾಸಕರ ಮನೆಯ ಮೇಲೂ ಇಡಿ ಹಾಗೂ ಆದಾಯ ತೆರಿಗೆ ಇಲಾಖೆಗಳು ದಾಳಿ ನಡೆಸಿದ್ದರು. ಅವರಿಗೆ ಅಂದು ಏನೂ ಸಿಗದೇ ವಾಪಸ್ ಹೋಗಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Punjab Election 2022 : ತಪ್ಪು ಮಾಡಿದೆ, ಆಗಲೇ ಕ್ರಮ ಕೈಗೊಳ್ಳಬೇಕಿತ್ತು ಅಂತಾ ಕ್ಯಾಪ್ಟನ್ ಅಮರೀಂದರ್ ಹೇಳಿದ್ದೇಕೆ?
ನಾವು ಯಾವುದೇ ತಪ್ಪು ಮಾಡಿಲ್ಲ ಹಾಗೂ ಪಂಜಾಬ್ ಮುಖ್ಯಮಂತ್ರಿ ಚರಂಜೀತ್ ಸಿಂಗ್ ಚನ್ನಿ (Charanjit Singh Channi ) ರೀತಿಯಲ್ಲಿ ಕೊರಗುವುದೂ ಇಲ್ಲ. ಚನ್ನಿ ಅವರು ತಪ್ಪು ಮಾಡಿದ್ದಾರೆ, ಅದನ್ನು ಮುಚ್ಚಿಡುವ ಕಾರಣಕ್ಕಾಗಿ ಕಂಗಾಲಾಗಿದ್ದಾರೆ. ಇನ್ನು ಕಳೆದ 111 ದಿನಗಳಲ್ಲಿ ಅವರು ಏನು ಮಾಡಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ. ಅಂಥ ಯಾವುದೇ ವಿಶೇಷಗಳು ನಮ್ಮಲ್ಲಿಲ್ಲ. ಕೇಂದ್ರದ ಏಜೆನ್ಸಿಗಳು ಸತ್ಯೇಂದ್ರ ಜೈನ್ ಮಾತ್ರವಲ್ಲ, ನನ್ನ ಸ್ಥಳ, ಮನೀಷ್ ಸಿಸೋಡಿಯಾ ಅವರ ಸ್ಥಳ ಎಲ್ಲದಕ್ಕೂ ನಾವು ಸ್ವಾಗತಿಸುತ್ತೇವೆ. ನೀವು ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಸಿಂಗ್ ಮಾನ್ ಅವರ ನಿವಾಸದ ಮೇಲೂ ದಾಳಿ ಮಾಡಬಹುದು ಎಂದರು.

Punjab Elections: ಜಲಂಧರ್‌ನಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ರಣತಂತ್ರ, ಕೈ ತತ್ತರ!
ಪಂಜಾಬ್ ಚುನಾವಣೆಯ ಸಮಯದಲ್ಲಿ ಹಳೆಯ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇತ್ತೀಚೆಗೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರ ಮನೆ ಮೇಲೆ ದಾಳಿ ನಡೆಸಿತು. ನನ್ನನ್ನು ಬೆದರಿಸಲು ಕೇಂದ್ರವು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಚನ್ನಿ ಆರೋಪಿಸಿದ್ದರು.
2017-18ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ಇಡಿ ರಾಡಾರ್‌ ನಲ್ಲಿದ್ದರು. ಜೈನ್ ಅವರು ಷೇರುದಾರರಾಗಿರುವ ನಾಲ್ಕು ಕಂಪನಿಗಳಿಂದ ಪಡೆದ ಹಣದ ಮೂಲವನ್ನು ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದ ಕಾರಣ ಸಿಬಿಐ ಪ್ರಕರಣವನ್ನು ದಾಖಲಿಸಿತ್ತು.ಈ ನಾಲ್ಕು ಕಂಪನಿಗಳು ಪ್ರಯಾಸ್ ಇನ್ಫೋ ಸೊಲ್ಯೂಷನ್ಸ್, ಅಕಿಂಚನ್ ಡೆವಲಪರ್ಸ್, ಮನಗಲ್ಯಾಟನ್ ಪ್ರಾಜೆಕ್ಟ್ಸ್ ಮತ್ತು ಇಂಡೋ-ಮೆಟಲ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್. ಜೈನ್ ಮತ್ತು ಅವರ ಪತ್ನಿ ಈ ಕಂಪನಿಗಳ ಮೂರನೇ ಒಂದು ಭಾಗದಷ್ಟು ಷೇರುಗಳನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

Follow Us:
Download App:
  • android
  • ios