Asianet Suvarna News Asianet Suvarna News

Global Technology Summit 2023: ಹೊಸಕಾಲದ ಯುದ್ಧಗಳಲ್ಲಿ ಟೆಕ್ನಾಲಜಿಯೇ ಗೇಮ್‌ ಚೇಂಜರ್‌ ಎಂದ ರಾಜನಾಥ್‌ ಸಿಂಗ್‌

ಕಾರ್ನೆಗೀ ಇಂಡಿಯಾ ಆಯೋಜಿಸಿದ್ದ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ 2023ರಲ್ಲಿ ಮಾತನಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಹೊಸ ಕಾಲದ ಯುದ್ಧದಲ್ಲಿ ಟೆಕ್ನಾಲಜಿಯೇ ಗೇಮ್‌ ಚೇಂಜರ್‌ ಪಾತ್ರವನ್ನು ವಹಿಸುತ್ತಿದೆ. ರಷ್ಯಾ-ಉಕ್ರೇನ್‌, ಇಸ್ರೇಲ್‌-ಹಮಾಸ್‌ ನಡುವಿನ ಸಂಘರ್ಷದಲ್ಲಿ ಇದನ್ನು ಕಂಡಿದ್ದೆವೆ ಎಂದು ತಿಳಿಸಿದ್ದಾರೆ.

Defense Minister Rajnath Singh says Technology is playing the role of game changer in war Global Technology Summit 2023 san
Author
First Published Dec 5, 2023, 3:29 PM IST

ನವದೆಹಲಿ (ಡಿ.5): ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌,  ಕಾರ್ನೆಗೀ ಇಂಡಿಯಾ ಆಯೋಜಿಸಿದ್ದ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ 2023 ಅನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಂದು ತಂತ್ರಜ್ಞಾನ ಕೂಡ ಒಂದು ದೇಶದ ದೊಡ್ಡ ಬಲ ಎನಿಸಿಕೊಳ್ಳಲಿದೆ ಎಂದು ಹೇಳಿದರು. ಇಂದು ಒಬ್ಬ ಶಿಕ್ಷಕ ಆನ್‌ಲೈನ್ ಮಾಧ್ಯಮದ ಮೂಲಕ ಹಾಜರಿರುತ್ತಾರೆ ಮತ್ತು ದೇಶ ಮತ್ತು ಪ್ರಪಂಚದ ವಿವಿಧ ಸ್ಥಳಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತಾರೆ. ಟೆಲಿಮೆಡಿಸಿನ್ ವ್ಯವಸ್ಥೆಯಲ್ಲಿ, ದೇಶದ ದೊಡ್ಡ ನಗರದಲ್ಲಿ ಕುಳಿತುಕೊಳ್ಳುವ ವೈದ್ಯರು ದೂರದ ಸ್ಥಳದಲ್ಲಿ ಕುಳಿತು ರೋಗಿಗೆ ಚಿಕಿತ್ಸೆ ನೀಡುತ್ತಾರೆ. ಇದೆಲ್ಲವೂ ಟೆಕ್ನಾಲಜಿಯಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಇಂದು ತಂತ್ರಜ್ಞಾನವು ತಲುಪದ ಮತ್ತು ಮಾನವ ಜೀವನವನ್ನು ಸುಲಭಗೊಳಿಸದ ಯಾವುದೇ ಕ್ಷೇತ್ರವಿಲ್ಲ. ಶಿಕ್ಷಣ ಮತ್ತು ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಲ್ಲದೆ, ಸಾರ್ವಜನಿಕ ಸೇವೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ ಹೆಚ್ಚಿದೆ: ರಕ್ಷಣಾ ವಲಯದಲ್ಲಿ ತಂತ್ರಜ್ಞಾನವು ಶಕ್ತಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ನಾವು ನಮ್ಮ ಸುತ್ತಮುತ್ತ ಕಾಣುತ್ತಿರುವ ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರವು ಇನ್ನಷ್ಟು ಹೆಚ್ಚುತ್ತಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸೇನೆಯಲ್ಲಿ ತಂತ್ರಜ್ಞಾನ ಎಷ್ಟು ಪ್ರಮುಖವಾಗಿ ಅನ್ನೋದನ್ನು ರಷ್ಯಾ-ಉಕ್ರೇನ್‌ ಯುದ್ಧ, ಇಸ್ರೇಲ್‌-ಹಮಾಸ್‌ ಸಂಘರ್ಷದ ಸಮಯದಲ್ಲಿ ಕಾಣಬಹುದು. ಈ ಎರಡೂ ಯುದ್ಧಗಳಲ್ಲಿ ತಂತ್ರಜ್ಞಾನ ವಹಿಸಿದ ಪಾತ್ರವನ್ನೂ ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಉಪಗ್ರಹ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಗಳು, ಡ್ರೋನ್‌ಗಳು, ಗೈಡೆಡ್‌ ಕ್ಷಿಪಣಿಗಳು ಮತ್ತು ರಾಡಾರ್‌ಗಳಂತಹ ಸುಧಾರಿತ ತಂತ್ರಜ್ಞಾನಗಳು ಯುದ್ಧದ ಸನ್ನಿವೇಶವನ್ನು ಬದಲಿಸಿದ ವಿಧಾನವನ್ನು ನಾವೆಲ್ಲರೂ ನೋಡುತ್ತಿದ್ದೇವೆ ಎಂದಿದ್ದಾರೆ.

ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ 2023 ರಲ್ಲಿ, ಭಾರತದ G20 ಶೆರ್ಪಾ ಅಮಿತಾಭ್ ಕಾಂತ್ ಕೂಡ ಮಾತನಾಡಿದ್ದು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಚೌಕಟ್ಟನ್ನು ರೂಪಿಸುವಲ್ಲಿ ಭಾರತವು ಹೇಗೆ ಮುಂದಾಳತ್ವ ವಹಿಸಿದೆ ಮತ್ತು ಇದರಲ್ಲಿ ತಂತ್ರಜ್ಞಾನವು ಹೇಗೆ ದೊಡ್ಡ ಪಾತ್ರವನ್ನು ವಹಿಸುತ್ತಿದೆ ಎನ್ನುವ ಬಗ್ಗೆ ವಿವರಿಸಿದರು. ಭಾರತದ G20 ಅಧಿಕಾರಾವಧಿಯು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಚೌಕಟ್ಟನ್ನು ನೀಡಿದೆ ಎಂದು ಅವರು ಹೇಳಿದರು. ಸ್ಟಾರ್ಟಪ್‌ಗಳು ರಾಷ್ಟ್ರೀಯ ಆಸ್ತಿ ಎಂದು ಅಮಿತಾಬ್ ಕಾಂತ್ ಹೇಳಿದ್ದಾರೆ. ಭಾರತವು ತಾಂತ್ರಿಕವಾಗಿ ಈ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತಿದೆ ಎಂದಿದ್ದಾರೆ.

ಬ್ರೆಜಿಲ್‌ನ ಭವಿಷ್ಯದ ಸೇತುವೆಗಳು: ದೇಶವು ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ನಿರ್ಮಾಣ ಮಾಡುತ್ತಿದೆ?

ಬಯೋಟೆಕ್ನಾಲಜಿಗೆ ಶ್ರೇಷ್ಠ ಸಮಯ ಎಂದ ಕಿರಣ್‌ ಮಜುಂದಾರ್‌ ಶಾ: ಬಯೋಕಾನ್ ಕಾರ್ಯಕಾರಿ ಅಧ್ಯಕ್ಷೆ ಕಿರಣ್ ಶಾ ಅವರು ಜೈವಿಕ ತಂತ್ರಜ್ಞಾನಕ್ಕೆ ಇದು ಬಹಳ ಶ್ರೇಷ್ಠ ಹಾಗೂ ರೋಮಾಂಚಕ ಸಮಯ ಎಂದು ಹೇಳಿದರು. ಮಾಹಿತಿ ತಂತ್ರಜ್ಞಾನ ಮತ್ತು AI ದೊಡ್ಡ ಬದಲಾವಣೆಯನ್ನು ತಂದಿದೆ. ಜೈವಿಕ ತಂತ್ರಜ್ಞಾನದಲ್ಲಿ, ಮುಂಚಿತವಾಗಿ ಊಹಿಸಬಹುದಾದ ಅಲ್ಗಾರಿದಮ್‌ಗಳಲ್ಲಿಎಲ್ಲಾ ಕೆಲಸವನ್ನು ಮಾಡಬಹುದು. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ನಿಯಂತ್ರಕರು ನಿಧಾನವಾಗಿದ್ದಾರೆ ಎಂದು ಕಿರಣ್ ಶಾ ಹೇಳಿದರು. ತಂತ್ರಜ್ಞಾನದ ಶಕ್ತಿಯ ಬಗ್ಗೆ ಯೋಚಿಸಲು ನಾವು ನೀತಿ ನಿರೂಪಕರು ಮತ್ತು ನಿಯಂತ್ರಕರನ್ನು ಒತ್ತಾಯಿಸಬೇಕಾಗಿದೆ. ನೀತಿ ನಿರೂಪಕರು ಸುಧಾರಣೆಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಇಂದು ಭಾರತವೂ ಅದನ್ನೇ ಮಾಡುತ್ತಿದೆ ಎಂದಿದ್ದಾರೆ.

Global Technology Summit: ಬಯೋಕಾನ್ ಮುಖ್ಯಸ್ಥೆ ಜತೆ ಪುಲಿಟ್ಜರ್ ವಿಜೇತ ಸಿದ್ಧಾರ್ಥ ಮುಖರ್ಜಿ ಚರ್ಚೆ

 

Follow Us:
Download App:
  • android
  • ios