ಜನತಾ ಕರ್ಫ್ಯೂಗೆ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಬೆಂಬಲ| ಪುರಿ ಸಮುದ್ರ ತೀರದಲ್ಲಿ ಸುಂದರವಾದ ಸ್ಯಾಂಡ್ ಆರ್ಟ್|  ಮನೆಯಲ್ಲಿರಿ, ಸುರಕ್ಷಿತರಾಗಿರಿ. ಮನೆಯಲ್ಲಿದ್ದು ಈ ಮಹಾಮಾರಿಯಿಂದ ನಮ್ಮ ಸಮಾವನ್ನು ಸುರಕ್ಷಿತವಾಗಿಟ್ಟುಕೊಳ್ಳೋಣ

ದೇಶದಾದ್ಯಂತ ವಿಧಿಸಲಾಗಿರುವ ಜನತಾ ಕರ್ಫ್ಯೂಗೆ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಬೆಂಬಲ ನೀಡಿ, ಪುರಿ ಸಮುದ್ರ ತೀರದಲ್ಲಿ ಸುಂದರವಾದ ಸ್ಯಾಂಡ್ ಆರ್ಟ್ ನಿರ್ಮಿಸಿದ್ದಾರೆ. 

ತಾವು ನಿರ್ಮಿಸಿರುವ ಮರಳು ಶಿಲ್ಪದ ಫೋಟೋ ಟ್ವೀಟ್ ಮಾಡಿರುವ ಸುದರ್ಶನ್ ಪಟ್ನಾಯಕ್ 'ಮನೆಯಲ್ಲಿರಿ, ಸುರಕ್ಷಿತರಾಗಿರಿ. ಮನೆಯಲ್ಲಿದ್ದು ಈ ಮಹಾಮಾರಿಯಿಂದ ನಮ್ಮ ಸಮಾವನ್ನು ಸುರಕ್ಷಿತವಾಗಿಟ್ಟುಕೊಳ್ಳೋಣ' ಎಂದಿದ್ದಾರೆ. 

Scroll to load tweet…

ಇನ್ನು ಕೊರೋನಾ ವಿರುದ್ಧದ ಸಮರದ ಕುರಿತಾಗಿ ಪಿಎಂ ನರೇಂದ್ರ ಮೋದಿ ಮಾರ್ಚ್ 22 ರಂದು ದೇಶದಾದ್ಯಂತ ಜನತಾ ಕರ್ಫ್ಯೂ ನಡೆಸು ಮನವಿ ಮಾಡಿಕೊಂಡಿದ್ದರು. ಇದರ ಅನ್ವಯ ದೇಶದದಾದ್ಯಂತ ಜನರು ಈ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ.