ಕೊರೋನಾ ಮತ್ತಷ್ಟುಮಂದಿಗೆ ಹಬ್ಬದಂತೆ ತಡೆಯಲು ದೇಶಾದ್ಯಂತ ಶಾಲಾ-ಕಾಲೇಜುಗಳು ಬಂದ್| ಅನಗತ್ಯ ಸುತ್ತಾಟದಿಂದ ದೂರವಿರಿ

ನವದೆಹಲಿ[ಮಾ.17]: ಕೊರೋನಾ ಮತ್ತಷ್ಟುಮಂದಿಗೆ ಹಬ್ಬದಂತೆ ತಡೆಯಲು ದೇಶಾದ್ಯಂತ ಶಾಲಾ-ಕಾಲೇಜುಗಳು, ವಿಶ್ವ ವಿದ್ಯಾಲಯಗಳು, ಜಿಮ್‌, ವಸ್ತು ಸಂಗ್ರಹಾಲಯಗಳು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೇಂದ್ರಗಳು, ಸ್ವಿಮ್ಮಿಂಗ್‌ ಪೂಲ್‌ಗಳು ಹಾಗೂ ಥಿಯೇಟರ್‌ಗಳನ್ನು ಮಾ.31ರವರೆಗೆ ಬಂದ್‌ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

Add Asianetnews Kannada as a Preferred SourcegooglePreferred

ಅಲ್ಲದೆ ಅನಗತ್ಯ ಸುತ್ತಾಟದಿಂದ ದೂರವಿರುವಂತೆ ಜನಸಾಮಾನ್ಯರಿಗೆ ಸಲಹೆ ನೀಡಿದೆ.

ಖಾಸಗಿ ಕಂಪನಿಗಳು ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ರೆಸ್ಟೋರೆಂಟ್‌ಗಳಲ್ಲಿ ಕೈತೊಳೆಯುವ ಶಿಷ್ಟಾಚಾರ ಪಾಲನೆಯಾಗಲೇಬೇಕು. ರೆಸ್ಟೋರೆಂಟ್‌ ಸಿಬ್ಬಂದಿ ಗ್ರಾಹಕರ ಟೇಬಲ್‌ನಿಂದ 1 ಮೀಟರ್‌ ದೂರವಿರಬೇಕು. ಜೊತೆಗೆ, ಸ್ಥಳೀಯ ರಾಜಕೀಯ ಮುಖಂಡರು, ಧಾರ್ಮಿಕ ನಾಯಕರು ಹಾಗೂ ಇತರ ನಾಯಕರು ಬಹುವಾಗಿ ಸೇರಲ್ಪಡುವ ಜನಸಂದಣಿ ಕಾರ್ಯಕ್ರಮವನ್ನು ಏರ್ಪಡಿಸಬಾರದು ಅಥವಾ ಮುಂದೂಡಬೇಕು ಎಂದು ಅವರಿಗೆ ಸ್ಥಳೀಯ ಆಡಳಿತ ಸೂಚಿಸಬೇಕು ಎಂದು ಸೂಚಿಸಲಾಗಿದೆ.