ಎಲ್ಲೆಲ್ಲೂ ವ್ಯಾಪಿಸಿದೆ ಕೊರೋನಾ ವೈರಸ್| ಭಾರತಕ್ಕೂ ಲಗ್ಗೆ ಇಟ್ಟ ಕೊರೋನಾ| ಕೊರೋನಾ ಓಡಿಸಲು ಕೇಂದ್ರ ಸಚಿವರ ಮಂತ್ರ

,ಮುಂಬೈ[ಮಾ.11]: ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮುಂಬೈನಲ್ಲಿ ಚೀನಾದ ಕಾನ್ಸುಲ್ ಜನರಲ್ ತಾಂಗ್ ಗುವೋಕಾಯ್ ಹಾಗೂ ಬೌದ್ಧ ಬಿಕ್ಷುಗಳ ಜೊತೆಗೂಡಿ ಕೊರೋನಾ ವೈರಸ್ ವಿರುದ್ಧ 'ಗೋ ಕೊರೋನಾ ಗೋ ಕೊರೋನಾ' ಎಂಬ ಘೋಷಣೆ ಕೂಗಿದ್ದಾರೆ. ಪ್ರಾರ್ಥನಾ ಸಭೆಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಚೀನಾದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ಮತ್ತಷ್ಟು ವ್ಯಾಪಿಸದಂತೆ ಕೋರಿ ಗೇಟ್‌ ವೇ ಆಫ್ ಇಂಡಿಯಾ ಬಳಿ ಈ ಪ್ರಾರ್ಥನಾ ಸಭೆ ಆಯೋಜಿಸಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಸದ್ಯ ಜಗತ್ತನ್ನೇ ಕಂಗೆಡಿಸಿರುವ ಕೊರೋನಾ ವೈರಸ್ ಮೊದಲ ಬಾರಿ 2019ರ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡಿತ್ತು. ಸದ್ಯ ಇದು ಭಾರತ ಸೇರಿದಂತೆ 100ಕ್ಕೂ ಅಧಿಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಈ ಮಾರಕ ವೈರಸ್‌ಗೆ 3 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಇದು ಅರ್ಥ ವ್ಯವಸ್ಥೆಯ ಮೇಲು ಭಾರೀ ಪರಿಣಾಮ ಬೀರಿದೆ.

Scroll to load tweet…

ಸದ್ಯ ಕೇಂದ್ರ ಸಚಿವರ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಟ್ರೋಲಿಗರ ಪಾಲಿಗೆ ಆಹಾರವಾಗಿದೆ.