ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಮದುವೆಗೆ ಬಂದ ಅತಿಥಿಗಳಿಗೆ ಸಿಗರೇಟ್, ಬೀಡಿ ಮತ್ತು ಗುಟ್ಕಾಗಳನ್ನು ನೀಡಿ ಸ್ವಾಗತಿಸಲಾಗುತ್ತಿದೆ. ಈ ವಿಚಿತ್ರ ಪದ್ಧತಿಯು ಭಾರತದ ಕೆಲವು ಗ್ರಾಮೀಣ ಭಾಗಗಳಲ್ಲಿ,   ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಆತಿಥ್ಯದ ಸಂಕೇತವೆಂದು ಪರಿಗಣಿಸಲಾಗಿದೆ.

ಭಾರತವು ಸಂಪ್ರದಾಯಗಳ ತವರು. ಅದರಲ್ಲಿಯೂ ಹತ್ತಾರು ಕಿಲೋಮೀಟರ್‌ ಅಳತೆಯಲ್ಲಿಯೇ ವಿಭಿನ್ನ ಭಾಷೆ, ವಿಭಿನ್ನ ಸಂಸ್ಕೃತಿ, ವಿಭಿನ್ನ ಸಂಪ್ರದಾಯ. ಅದರಲ್ಲಿಯೂ ಮದುವೆಯ ವಿಷಯಕ್ಕೆ ಬಂದರೆ, ಸಾವಿರಾರು ಬಗೆಯ ಸಂಪ್ರದಾಯಗಳು ಇವೆ. ಇವುಗಳಲ್ಲಿ ಕೆಲವೊಂದು ವಿಚಿತ್ರ ಎನ್ನಿಸಿದರೆ, ಮತ್ತೆ ಕೆಲವು ನಂಬಲು ಸಾಧ್ಯವಿಲ್ಲದ್ದು ಎನ್ನಿಸುತ್ತದೆ. ಇಂಥ ಸಂಪ್ರದಾಯಗಳು ಯಾಕೆ ಬಂದವು, ಇದರ ಹಿನ್ನೆಲೆ ಏನು ಎಂದು ತಿಳಿಯುವುದು ಕೂಡ ಕಷ್ಟವೇ, ಜೊತೆಗೆ ಕಲ್ಪನೆಯೂ ಕಷ್ಟವೇ. ಅಂಥದ್ದೊಂದು ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಚಿತ್ರ ಸ್ಟಾರ್ಟರ್‌

ಇದರಲ್ಲಿ, ಒಂದು ವಿಚಿತ್ರ ಮದುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಿಎ ವಂಶಿಕಾ ಎನ್ನುವವರು ಈ ವಿಡಿಯೋ ಶೇರ್‌ ಮಾಡಿದ್ದು, ಇದಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಇದನ್ನು ನೋಡಿದ್ದಾರೆ. ಅಷ್ಟಕ್ಕೂ ಈ ಸಾಮಾಜಿಕ ಮಾಧ್ಯಮವನ್ನು ರಂಜಿಸಿದೆ ಮತ್ತು ಜೊತೆಗೇನೇ ಗೊಂದಲಕ್ಕೀಡು ಮಾಡಿದೆ, ಇದಕ್ಕೆ ಅಲಂಕಾರ ಅಥವಾ ನೃತ್ಯ ಪ್ರದರ್ಶನ ಅಲ್ಲ, ಬದಲಾಗಿ ಅತಿಥಿಗಳಿಗೆ ನೀಡುತ್ತಿರುವ ಸ್ಟಾರ್ಟರ್‌ಗಳ ಮೂಲಕ.

ಸಿಗರೇಟ್, ಬೀಡಿ ಮತ್ತು ಗುಟ್ಕಾ

ಸಾಮಾನ್ಯವಾಗಿ ಮದುವೆಗೆ ಬಂದ ಅತಿಥಿಗಳಿಗೆ ತಂಪು, ಬಿಸಿ ಪಾನೀಯ ಕೊಡುತ್ತಾರೆ. ಕೆಲವರು ಸ್ವೀಟ್‌ ಕೊಡುತ್ತಾರೆ. ಮತ್ತೆ ಕೆಲವರು ಹೂವು ನೀಡಿ ಸ್ವಾಗತಿಸುತ್ತಾರೆ. ಆದರೆ ವೈರಲ್‌ ಆಗಿರೋ ಈ ವಿಡಿಯೋದಲ್ಲಿ, ಸಿಗರೇಟ್, ಬೀಡಿ ಮತ್ತು ಗುಟ್ಕಾ ಪ್ಯಾಕೆಟ್‌ ನೀಡುತ್ತಿರುವುದನ್ನು ನೋಡಬಹುದು. ಮದುವೆ ಬಂದಿರುವ ಅತಿಥಿಗಳಿಗೆ ನೀಡಲು ಟ್ರೇಗಳಲ್ಲಿ ಇವುಗಳನ್ನು ಇಟ್ಟಿರುವುದನ್ನು ಅದರಲ್ಲಿ ಕಾಣಬಹುದಾಗಿದೆ.

ತಂಬಾಕಿನ ಟ್ರೇ

ವೈರಲ್‌ ಆಗಿರುವ ಈ ಕ್ಲಿಪ್‌ನಲ್ಲಿ, ಒಬ್ಬ ಸಪ್ಲೈಯರ್‌ ತಂಬಾಕು ಉತ್ಪನ್ನಗಳಿಂದ ತುಂಬಿದ ದೊಡ್ಡ ಟ್ರೇ ಅನ್ನು ಹೊತ್ತೊಯ್ಯುತ್ತಿರುವುದನ್ನು ತೋರಿಸುತ್ತದೆ, ಅತಿಥಿಗಳು ಆಕಸ್ಮಿಕವಾಗಿ ಸುತ್ತಲೂ ಒಟ್ಟುಗೂಡುತ್ತಾರೆ ಮತ್ತು ಅವರು ಬೇಕಾದುದನ್ನು ಆರಿಸಿಕೊಳ್ಳುತ್ತಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ಕಮೆಂಟ್‌ಗಳ ವಿಭಾಗದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವು ಬಳಕೆದಾರರು ಆಘಾತದಿಂದ ಪ್ರತಿಕ್ರಿಯಿಸಿದರೂ, ಇನ್ನೂ ಅನೇಕರು ಕೆಲವು ಗ್ರಾಮೀಣ ವಿವಾಹಗಳಲ್ಲಿ ಈ ಪದ್ಧತಿ ಅಸಾಮಾನ್ಯವಲ್ಲ ಎಂದು ಹೇಳಿದ್ದಾರೆ. ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ ಮತ್ತು ಗರ್ವಾಲ್ ಪ್ರದೇಶದ ಕೆಲವು ಭಾಗಗಳಲ್ಲಿ ಇಂತಹ ಪದ್ಧತಿಗಳು ಇನ್ನೂ ಕಂಡುಬರುತ್ತವೆ ಎಂದು ಹಲವರು ತಿಳಿಸಿದ್ದಾರೆ. ಅಲ್ಲಿ ಅತಿಥಿಗಳಿಗೆ ತಂಬಾಕು ಉತ್ಪನ್ನಗಳನ್ನು ನೀಡುವುದು ಆತಿಥ್ಯದ ಸೂಚಕವೆಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.

View post on Instagram