Asianet Suvarna News Asianet Suvarna News

ಹಳೇ ನಿಯಮದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯವಿಲ್ಲ; ಪರೋಕ್ಷ ಸೂಚನೆ ನೀಡಿದ ಮೋದಿ!

ರೈತರ ಪ್ರತಿಭಟನೆ ಭಾರತ ಮಾತ್ರವಲ್ಲ, ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿದೇಶಗಳಲ್ಲಿನ ಹೈಕಮಿಶನ್  ಮುಂದೆಯೂ ಪ್ರತಿಭಟನೆ ನಡೆಯುತ್ತಿದೆ. ರೈತರ ಪ್ರತಭಟನೆ ಇದೀಗ ಭಾರತ್ ಬಂದ್ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನಾ ನಿರತರಿಗೆ ಪರೋಕ್ಷ ಸೂಚನೆ ನೀಡಿದ್ದಾರೆ.

Cant build new century with old laws reforms need for development says PM Modi ckm
Author
Bengaluru, First Published Dec 7, 2020, 10:09 PM IST

ನವದೆಹಲಿ(ಡಿ.07):  ರೈತರ ಪ್ರತಿಭಟನೆ ಕಿಚ್ಚು ದೇಶವ್ಯಾಪಿ ಹಬ್ಬಿದೆ. ಡಿ.08ರಂದು ಭಾರತ್ ಬಂದ್ ಮೂಲಕ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲು ರೈತ ಸಂಘಟನೆಗಳು ಮುಂದಾಗಿದೆ. ರೈತರ ಪ್ರತಿಭಟನೆ ಹಿಂಪಡೆಯಲು ಕೇಂದ್ರ ಸರ್ಕಾರ ಹಲವು ಸುತ್ತಿನ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದೆ. ಆದರೆ ರೈತರ ತಮ್ಮ ಪಟ್ಟು ಬಿಟ್ಟಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಸೂಚನೆ ನೀಡಿದ್ದಾರೆ. 

ಭಾರತ್ ಬಂದ್: ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ ಜಾರಿ!

ಆಗ್ರಾ ಮೆಟ್ರೋ ರೈಲು ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಪರೋಕ್ಷವಾಗಿ ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಭಾರತ್ ಬಂದ್‌ ಕುರಿತು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ಹಳೇ ನಿಯಮ, ನೀತಿಗಳಿಂದ ಹೊಸ ಶತಮಾನ ನಿರ್ಮಾಣ ಸಾಧ್ಯವಿಲ್ಲ. ಹಳೇ ನಿಯಮಳು ಆಧುನಿಕ ಕಾಲಕ್ಕೆ ಸರಿಹೊಂದದೇ ಹೋಗಬಹುದು ಎಂದು ಕೃಷಿ ಮಸೂದೆಗಳನ್ನು ಮೋದಿ ಪರೋಕ್ಷವಾಗಿ ಸಮರ್ಥಿಸಿದ್ದಾರೆ.

ಭಾರತದ ಅಭಿವೃದ್ಧಿ, ಸುಧಾರಣೆಗಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು, ಮಸೂದೆಗಳನ್ನು ತರುತ್ತಿದೆ. ಪ್ರಯತ್ನದಲ್ಲಿ ಹಲವು ತಜ್ಞರಿಂದ ಮಾಹಿತಿ ಪಡೆದು ಹೊಸ ನೀತಿಗಳನ್ನು ತರಲಾಗುತ್ತಿದೆ. ಜಾರಿಯಾಗುವ ಹೊಸ ನಿಯಮಗಳ ಸರಿಯಾದ ಮಾಹಿತಿ ಪಡೆದು ಮುಂದೆ ಚಲಿಸಿದರೆ ಸಮಸ್ಯೆ ಎದುರಾಗುವುದಿಲ್ಲ ಎಂದಿದ್ದಾರೆ.

Follow Us:
Download App:
  • android
  • ios