Asianet Suvarna News Asianet Suvarna News

Uttar Pradesh: ಗ್ರೇಟರ್‌ ನೊಯ್ಡಾ ಅರಣ್ಯದಲ್ಲಿ BSP ನಾಯಕನ ಪುತ್ರನ ಶವ ಪತ್ತೆ, ಕೊಲೆ ಶಂಕೆ!

* ಉತ್ತರ ಪ್ರದೇಶದ ನೊಯ್ಡಾದ ಅರಣ್ಯದಲ್ಲಿ ಮೃತದೇಹ

* BSP ನಾಯಕನ ಪುತ್ರನ ಶವ ಪತ್ತೆ, ಕೊಲೆ ಶಂಕೆ

* ಮೃತರನ್ನು ರಾಹುಲ್ ಭಾಟಿ ಎಂದು ಗುರುತಿಸಲಾಗಿದೆ

BSP leader son dead body found in Greater Noida pod
Author
Bangalore, First Published Feb 12, 2022, 10:01 AM IST | Last Updated Feb 12, 2022, 10:06 AM IST

ನೊಯ್ಡಾ(ಫೆ.12): ಉತ್ತರ ಪ್ರದೇಶದ ಗೌತಮ್ ಬುಧ್ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದ ಸೂರಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ಬಿಎಸ್‌ಪಿ ನಾಯಕನ ಮಗನ ಶವ ಪತ್ತೆಯಾಗಿದೆ. ಯುವಕನನ್ನು ಕೊಂದ ನಂತರ ದಾಳಿಕೋರರು ಶವವನ್ನು ರಸ್ತೆ ಬದಿಯ ಪೊದೆಗೆ ಎಸೆದು ಪರಾರಿಯಾಗಿದ್ದಾರೆ. ಯುವಕನ ತಲೆಯಲ್ಲಿ ಗಾಯದ ಗುರುತು ಪತ್ತೆಯಾಗಿದ್ದು, ಈ ಕಾರಣದಿಂದ ಗುಂಡು ಹಾರಿಸಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇಡೀ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೃತರನ್ನು ರಾಹುಲ್ ಭಾಟಿ ಎಂದು ಗುರುತಿಸಲಾಗಿದೆ. ರಾಹುಲ್ ಭಾಟಿ ಬಿಎಸ್‌ಪಿಯ ಮೀರತ್ ಸಂಯೋಜಕರಾಗಿರುವ ಪಲ್ಲಾ ಗ್ರಾಮದ ಹರಗೋವಿಂದ್ ಭಾಟಿ ಅವರ ಪುತ್ರ.

ಶುಕ್ರವಾರ ಬೆಳಗ್ಗೆ 9:30ರ ಸುಮಾರಿಗೆ ರಾಹುಲ್ ಮನೆಯಿಂದ ಬೈಕ್ ಸಮೇತ ತೆರಳಿದ್ದರು ಎಂದು ನೋಯ್ಡಾ ಕೇಂದ್ರ ವಲಯ-2 ಡಿಸಿಪಿ ಹರೀಶ್ ಚಂದ್ರ ತಿಳಿಸಿದ್ದಾರೆ. ಮಧ್ಯಾಹ್ನ ಜುನ್‌ಪತ್ ಗ್ರಾಮದ ಬಳಿ ರಸ್ತೆ ಬದಿಯ ಪೊದೆಯಲ್ಲಿ ಯುವಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಘಟನೆಯ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಘೋಷಿಸಿದ್ದಾರೆ.

ಯುವಕನ ತಲೆಯ ಮೇಲೆ ಗಾಯದ ಗುರುತು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪಳ್ಳ ಗ್ರಾಮದ ಗೇಟ್ ಮತ್ತು ಸ್ಥಳದ ನಡುವೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವೀಕ್ಷಿಸಲಾಗಿದ್ದು, ದಾಳಿಕೋರರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆಂದು ತಿಳಿಸಿದ್ದಾರೆ. ಪೊಲೀಸರಿಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ, ಘಟನೆಯನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.

ರಾಹುಲ್ ತುಂಬಾ ಸ್ನೇಹಮಯಿ ಹುಡುಗನಾಗಿದ್ದನು ಮತ್ತು ಅವನ ಮತ್ತು ಅವನ ಕುಟುಂಬವು ಗ್ರಾಮದಲ್ಲಿ ಯಾರೊಂದಿಗೂ ಯಾವುದೇ ಜಗಳ ಅಥವಾ ವಿವಾದವನ್ನು ಹೊಂದಿಲ್ಲ ಎಂದು ಪಲ್ಲಾ ಗ್ರಾಮದ ಜನರು ಹೇಳುತ್ತಾರೆ. ಆದರೆ, ವಹಿವಾಟಿನ ಹಿನ್ನೆಲೆಯಲ್ಲಿ ರಾಹುಲ್‌ನನ್ನು ಕೊಲೆ ಮಾಡಿರಬಹುದು ಎನ್ನುತ್ತಾರೆ ಗ್ರಾಮಸ್ಥರು. ರಾಹುಲ್‌ ಕೆಲವರ ಜತೆ ಹಣದ ವ್ಯವಹಾರ ನಡೆಸುತ್ತಿದ್ದ ವೇಳೆ ಅದೇ ವ್ಯಕ್ತಿಗಳೊಂದಿಗೆ ಜಗಳ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios