Asianet Suvarna News Asianet Suvarna News

ಸರ್ದಾನ ಬೆನ್ನಲ್ಲೇ ಮತ್ತೊಂದು ಆಘಾತ; TV ನಿರೂಪಕಿ ಕಾನುಪ್ರಿಯಾ ಕೊರೋನಾಗೆ ಬಲಿ!

ಸುದ್ದಿವಾಹಿನಿಯ ಖ್ಯಾತ ನಿರೂಪಕ ರೋಹಿತ್ ಸರ್ದಾನಾ ನಿಧನ ಆಘಾತದ ಬೆನ್ನಲ್ಲೇ ಇದೀಗ ಮತ್ತೋರ್ವ ಟಿವಿ ನಿರೂಪಕಿ ಕೊರೋನಾಗೆ ಬಲಿಯಾಗಿದ್ದಾರೆ. ದೂರದರ್ಶನ ಹಾಗೂ ಬ್ರಹ್ಮಕುಮಾರಿ ಟಿವಿ ನಿರೂಪಕಿ ಕಾನುಪ್ರಿಯಾ ಕೊರೋನಾಗೆ ಬಲಿಯಾಗಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ.

Brahma Kumaris TV Doordarshan anchor Kanupriya passes away due to corona ckm
Author
Bengaluru, First Published May 1, 2021, 8:29 PM IST

ನವದೆಹಲಿ(ಮೇ.01): ಕೊರೋನಾ ಆತಂಕದ ನಡುವೆ ಮಾಧ್ಯಮಕ್ಕೆ ಮತ್ತೊಂದು ಬರಸಿಡಿಲು ಎರಗಿದೆ. ಆಜ್‌ತಕ್ ಸುದ್ದಿವಾಹಿನಿ ನಿರೂಪಕ, ಪತ್ರಕರ್ತ ರೋಹಿತ್ ಸರ್ದಾನ ನಿಧನದ ಬೆನ್ನಲ್ಲೇ, ಇದೀಗ ದೂರದರ್ಶನ ವಾಹನಿ , ಬ್ರಹ್ಮಕುಮಾರಿ ಟಿವಿ ನಿರೂಪಕಿ ಕಾನುಪ್ರಿಯಾ ಕೊರೋನಾಗೆ ಬಲಿಯಾಗಿದ್ದಾರೆ.

ಖ್ಯಾತ ಟಿವಿ ಪತ್ರಕರ್ತ ರೋಹಿತ್ ಸರ್ದಾನ ಕೋವಿಡ್‌ಗೆ ಬಲಿ: ಮೋದಿ ಸೇರಿ ಗಣ್ಯರ ಸಂತಾಪ!.

ಕಾನುಪ್ರಿಯ ಕೇವಲ ನ್ಯೂಸ್ ಆ್ಯಂಕರ್ ಮಾತ್ರವಲ್ಲ, ನಟಿ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಕೊರೋನಾದಿಂದ ಅಸ್ವಸ್ಥರಾಗಿದ್ದ ಕಾನುಪ್ರಿಯಾಳನ್ನು 11 ಸೆಕ್ಟರ್ ನೋಯ್ಡಾದಲ್ಲಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ(ಏ.30) ನಿಧನರಾಗಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by BK Shivani (@bkshivani)

ತನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರ ಪ್ರಾರ್ಥನೆ ಅಗತ್ಯ ಎಂದು ಕಾನುಪ್ರಿಯಾ ಎರಡು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಕೊರೋನಾ ಸೋಂಕು ಶ್ವಾಸಕೋಶಕ್ಕೆ ತಗುಲಿತ್ತು. ಹೀಗಾಗಿ ಕಡಿಮೆ ಆಮ್ಲಜನಕ ಮಟ್ಟ ಮತ್ತು ತೀವ್ರ ಜ್ವರದಿಂದಾಗಿ ಕಾನುಪ್ರಿಯಾ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಆಧ್ಯಾತ್ಮಿಕ ಗುರು ಮತ್ತು ಬ್ರಹ್ಮ ಕುಮಾರಿ ಸೋದರಿ ಬಿ.ಕೆ.ಶಿವಾನಿ ಕಾನುಪ್ರಿಯಾ ನಿಧನ ವಾರ್ತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೋವಿನಿಂದ ಹಂಚಿಕೊಂಡಿದ್ದಾರೆ.   

Follow Us:
Download App:
  • android
  • ios