Asianet Suvarna News Asianet Suvarna News

ಗುಜರಾತಲ್ಲಿ ದಿಲ್ಲಿ ಸಿಎಂ ಕೇಜ್ರಿ ಮೇಲೆ ಬಾಟಲ್‌ ದಾಳಿ

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮೇಲೆ ಪ್ಲಾಸ್ಟಿಕ್‌ ಬಾಟಲ್‌ ಎಸೆದ ಘಟನೆ ಶನಿವಾರ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

Bottle attack on Delhi CM Kejriwal in Gujarat akb
Author
First Published Oct 3, 2022, 7:22 AM IST

ರಾಜ್‌ಕೋಟ್‌: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮೇಲೆ ಪ್ಲಾಸ್ಟಿಕ್‌ ಬಾಟಲ್‌ ಎಸೆದ ಘಟನೆ ಶನಿವಾರ ಇಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿದ ಆಮ್‌ ಆದ್ಮಿ ಪಕ್ಷದ ನಾಯಕರು ಬಾಟಲಿ ಕೇಜ್ರಿವಾಲ್‌ ತಲೆಯ ಮೇಲ್ಭಾಗದಲ್ಲಿ ಹಾದು ಹೊಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಭದ್ರತಾ ಸಿಬ್ಬಂದಿಗಳು ಮತ್ತು ಆಪ್‌ ನಾಯಕರೊಂದಿಗೆ ಜನದಟ್ಟನೆಯ ಮಧ್ಯೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಹಿಂದೆ ಕೇಜ್ರಿ ಮೇಲೆ ಇಂಕ್‌(Ink), ಚಪ್ಪಲಿ ಎಸೆದ, ಕಪಾಳಮೋಕ್ಷ ಮಾಡಿದ ಘಟನೆಗಳು ನಡೆದಿದ್ದವು.

 

 

Follow Us:
Download App:
  • android
  • ios