Asianet Suvarna News Asianet Suvarna News

2012ರ ಗಲಭೆ ಕೇಸ್‌: ರೈತ ರ‍್ಯಾಲಿಯಂದೇ ಟಿಕಾ​ಯತ್‌ ಬಂಧನ?

ಮಾ.8ರಂದು ಜನಾಂದೋ​ಲ​ನ​ಕ್ಕಾಗಿ ಸಿದ್ಧತೆ ನಡೆ​ಸಿ​ರುವ ಭಾರ​ತೀಯ ಕಿಸಾನ್‌ ಯೂನಿ​ಯ​ನ್‌​(​ಬಿಕೆ​ಯು) ಮುಖಂಡ ರಾಕೇಶ್‌ ಟಿಕಾ​ಯತ್‌| 2012ರ ಗಲಭೆ ಕೇಸ್‌| ರೈತ ರಾರ‍ಯಲಿಯಂದೇ ಟಿಕಾ​ಯತ್‌ ಬಂಧನ?

BKU leader Rakesh Tikait may be arrested on March 8 as MP court issues arrest warrant pod
Author
Bangalore, First Published Feb 26, 2021, 3:03 PM IST

ಭೋಪಾ​ಲ್(ಫೆ.26)‌: ಕೇಂದ್ರದ ಕೃಷಿ ಕಾಯ್ದೆ​ಗಳ ವಿರುದ್ಧ ಮಧ್ಯ​ಪ್ರ​ದೇ​ಶ​ದಲ್ಲಿ ಮಾ.8ರಂದು ಜನಾಂದೋ​ಲ​ನ​ಕ್ಕಾಗಿ ಸಿದ್ಧತೆ ನಡೆ​ಸಿ​ರುವ ಭಾರ​ತೀಯ ಕಿಸಾನ್‌ ಯೂನಿ​ಯ​ನ್‌​(​ಬಿಕೆ​ಯು) ಮುಖಂಡ ರಾಕೇಶ್‌ ಟಿಕಾ​ಯತ್‌ ಅವರು ಅಂದಿನ ದಿನವೇ ರಾಜ್ಯ ಪೊಲೀ​ಸ​ರಿಂದ ಬಂಧ​ನ​ವಾ​ಗುವ ಸಾಧ್ಯ​ತೆ​ಯಿದೆ.

ಮಾ.8ರಂದು ಇಲ್ಲಿನ ಶಿಯೋ​ಪುರ, ರೇವಾ ಮತ್ತು ದೇವಾ​ಸ್‌​ನಲ್ಲಿ ರೈತರ ರಾರ‍ಯಲಿ​ಗ​ಳ​ನ್ನು​ದ್ದೇ​ಶಿಸಿ ರಾಕೇಶ್‌ ಟಿಕಾ​ಯತ್‌ ಭಾಷಣ ಮಾಡ​ಬೇ​ಕಿ​ದೆ. ಏತ​ನ್ಮಧ್ಯೆ, 2012ರ ಹತ್ಯೆ ಮತ್ತು ಗಲ​ಭೆಗೆ ಯತ್ನಿ​ಸಿ​ದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಮಧ್ಯ​ಪ್ರ​ದೇ​ಶದ ನ್ಯಾಯಾ​ಲ​ಯ​ವೊಂದು ಟಿಕಾ​ಯತ್‌ ಅವ​ರಿಗೆ ಬಂಧ​ನದ ವಾರಂಟ್‌ ಜಾರಿ ಮಾಡಿದೆ.

ಹೀಗಾಗಿ ಅಂದಿನ ದಿನವೇ ಟಿಕಾಯತ್‌ ಬಂಧ​ನ​ವಾ​ಗಬಹುದು ಎನ್ನ​ಲಾ​ಗಿದೆ.

Follow Us:
Download App:
  • android
  • ios