ಟಿಎಂಸಿ ಮತ್ತೆ ಗೆದ್ದರೆ ಕಾಶ್ಮೀರವಾಗಲಿದೆ ಬಂಗಾಳ: ಸುವೇಂದು
ಚುನಾವಣಾ ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಗ್ದಾಳಿ| ಟಿಎಂಸಿ ಮತ್ತೆ ಗೆದ್ದರೆ ಕಾಶ್ಮೀರವಾಗಲಿದೆ ಬಂಗಾಳ| ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಇಲ್ಲದಿದ್ದರೆ, ಈ ದೇಶ ಇಸ್ಲಾಂ ದೇಶವಾಗಿರುತ್ತಿತ್ತು: ಸುವೇಂದು|
ಕೋಲ್ಕತಾ(ಮಾ.08): ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರಕ್ಕೇರಿದರೆ, ಪಶ್ಚಿ ಮ ಬಂಗಾಳವನ್ನು ಮತ್ತೊಂದು ಕಾಶ್ಮೀರವನ್ನಾಗಿ ಪರಿವರ್ತಿಸಲಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಬಿಜೆಪಿ ರಾರಯಲಿಯನ್ನುದ್ದೇಶಿಸಿ ಮಾತನಾಡಿದ ಸುವೇಂದು ಅಧಿಕಾರಿ, ‘ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಇಲ್ಲದಿದ್ದರೆ, ಈ ದೇಶ ಇಸ್ಲಾಂ ದೇಶವಾಗಿರುತ್ತಿತ್ತು. ಅಲ್ಲದೆ ನಾವೆಲ್ಲರೂ ಬಾಂಗ್ಲಾದೇಶದಲ್ಲಿರಬೇಕಿತ್ತು. ಇದೀಗ ಮತ್ತೊಮ್ಮೆ ಟಿಎಂಸಿ ಅಧಿಕಾರಕ್ಕೆ ಬಂದಲ್ಲಿ ಪಶ್ಚಿಮ ಬಂಗಾಳ ಕಾಶ್ಮೀರ ಆಗಲಿದೆ’ ಎಂದು ಹೇಳಿದ್ದಾರೆ.
ಫೆ.14ರಂದು ಜೈ ಬಾಂಗ್ಲಾ ಘೋಷ ವಾಕ್ಯದ ಮೂಲಕ ಪಶ್ಚಿಮ ಬಂಗಾಳವನ್ನು ಟಿಎಂಸಿ ಬಂಗ್ಲಾವನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆ ಎಂದಿದ್ದರು.