Asianet Suvarna News Asianet Suvarna News

Hijab Row: ಬಿಕಿನಿ, ಶಾಲು, ಜೀನ್ಸ್, ಹಿಜಾಬ್: ಮಹಿಳೆಯರಿಗೆ ತಮ್ಮಿಷ್ಟದ ಬಟ್ಟೆ ಧರಿಸುವ ಹಕ್ಕಿದೆ: ಪ್ರಿಯಾಂಕಾ!

* ದೇಶಾದ್ಯಂತ ಸದ್ದು ಮಾಡುತ್ತಿದೆ ಹಿಜಾಬ್ ವಿವಾದ

* ಹಿಜಾಬ್‌- ಕೇಸರಿ ಶಾಲು ವಿಚಾರವಾಗಿ ಪ್ರಿಯಾಂಕಾ ಟ್ವೀಟ್

* ಹೆಣ್ಮಕ್ಕಳ ಹಕ್ಕಿನ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕಿ

Bikini ghoonghat jeans Priyanka Gandhi bats for ladki hoon on hijab row pod
Author
Bangalore, First Published Feb 9, 2022, 10:52 AM IST

ನವದೆಹಲಿ(ಫೆ.09): ಉಡುಪಿ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ಹಾಗೂ ಕೆಸರಿ ಶಾಲು ವಿವಾದ ಸದ್ಯ ಬಹುತೇಕ ಇಡೀ ರಾಜ್ಯಕ್ಕೆ ವ್ಯಾಪಿಸಿದೆ. ಒಂದೆಡೆ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಸರ್ಕಾರ ಮೂರು ದಿನಗಳ ರಜೆ ಘೋಷಿಸಿದೆ. ಹೀಗಿರುವಾಗ ಪ್ರಿಯಾಂಕಾ ಗಾಂಧಿ ಕೂಡ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸಂವಿಧಾನವೇ ಹೇಳಿದಂತೆ ತಮ್ಮ ಇಚ್ಛೆಯ ಪ್ರಕಾರ ಮಹಿಳೆಯರಿಗೆ ಬಟ್ಟೆ ಧರಿಸುವ ಹಕ್ಕಿದೆ ಎಂದು ಬರೆದಿದ್ದಾರೆ. ಟ್ವೀಟ್‌ನ ಕೊನೆಯಲ್ಲಿ, ಪ್ರಿಯಾಂಕಾ ತಮ್ಮ ಅಭಿಯಾನದ ಹ್ಯಾಶ್‌ಟ್ಯಾಗ್ 'ಐ ಕ್ಯಾನ್ ಫೈಟ್' ಅನ್ನು ಸಹ ಹಾಕಿದ್ದಾರೆ.

ಪ್ರಿಯಾಂಕಾ ಗಾಂಧಿ ತಮ್ಮ ಟ್ವೀಟ್‌ನಲ್ಲಿ, 'ಅದು ಬಿಕಿನಿಯಾಗಿರಲಿ, ಮುಸುಕಾಗಿರಲಿ ಅಥವಾ ಜೀನ್ಸ್ ಅಥವಾ ಹಿಜಾಬ್ ಆಗಿರಲಿ. ಏನು ಧರಿಸಬೇಕೆಂದು ಮಹಿಳೆ ನಿರ್ಧರಿಸಬೇಕು. ಈ ಹಕ್ಕನ್ನು ಅವರಿಗೆ ಭಾರತದ ಸಂವಿಧಾನ ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದಿದ್ದಾರೆ.

ಧಾರ್ಮಿಕ ಉಡುಗೆಯನ್ನು ನಿಷೇಧಿಸುವ ಆದೇಶದ ನಂತರ ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಗಲಭೆ ಆರಂಭವಾಗಿದೆ ಎಂಬುವುದು ಉಲ್ಲೇಖನೀಯ. ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಗುಂಪುಗಳು ಮುಖಾಮುಖಿಯಾಗಿವೆ. ಕಲ್ಲು ತೂರಾಟದ ಘಟನೆಗಳೂ ನಡೆದಿವೆ. ಹಿಜಾಬ್ ನಿಷೇಧದ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೆ, ಅನೇಕ ಹಿಂದೂ ವಿದ್ಯಾರ್ಥಿಗಳು ಕೇಸರಿ ಕೈಗವಸು ಮತ್ತು ದುಪಟ್ಟಾ ಧರಿಸಿ ಕ್ಯಾಂಪಸ್‌ನಲ್ಲಿ ಘೋಷಣೆಗಳನ್ನು ಎತ್ತುತ್ತಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು 3 ದಿನಗಳ ಕಾಲ ಶಾಲಾ-ಕಾಲೇಜುಗಳನ್ನು ಮುಚ್ಚಿದೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ

ಕರ್ನಾಟಕ ಹೈಕೋರ್ಟ್‌ನಲ್ಲೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಿಜಾಬ್ ಧರಿಸುವ ಹಕ್ಕನ್ನು ಮರುಸ್ಥಾಪಿಸುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ಇಂದು ಮುಂದುವರಿಯಲಿದೆ. ಆದರೆ ವಿದ್ಯಾರ್ಥಿನಿಯರ ವಕೀಲರ ವಿರುದ್ಧ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ವಿದ್ಯಾರ್ಥಿನಿಯರ ವಕೀಲರು ಕಾಂಗ್ರೆಸ್ ನಾಯಕರು ಎಂದು ಬಿಜೆಪಿ ಹೇಳುತ್ತಿದ್ದು, ಈ ವಿವಾದವನ್ನು ಹುಟ್ಟು ಹಾಕುವಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂಬುದು ಸಾಬೀತಾಗಿದೆ.

ಯುಪಿ ಚುನಾವಣೆಯಲ್ಲಿ ಹಿಜಾಬ್ ವಿವಾದದ ಪ್ರತಿಧ್ವನಿ

ಕರ್ನಾಟಕದ ಹಿಜಾಬ್ ವಿವಾದ ಯುಪಿಯ ಚುನಾವಣಾ ರಾಜಕೀಯಕ್ಕೂ ಪ್ರವೇಶಿಸಿದೆ. ಈ ವಿಚಾರದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಬಿಜೆಪಿ ಮುಖಾಮುಖಿಯಾಗಿದೆ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಮುಂಬೈನಲ್ಲೂ ಪ್ರತಿಭಟನೆಗಳು ಆರಂಭವಾಗಿವೆ. ಮುಂಬೈನಲ್ಲಿ ಸಮಾಜವಾದಿ ಪಕ್ಷವು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಸಹಿ ಅಭಿಯಾನವನ್ನು ನಡೆಸುತ್ತಿದೆ.

Follow Us:
Download App:
  • android
  • ios