Asianet Suvarna News Asianet Suvarna News

ಕೊರೋನಾಕ್ಕೆ ಔಷಧಿ ಕಂಡುಹಿಡಿದೆವು ಎಂದು ಬೀಗುತ್ತಿದ್ದ ಪತಂಜಲಿಗೆ ಆಯುಷ್ ಶಾಕ್!

ಪತಂಜಲಿ ಕೊರೋನಾ ಔಷಧಕ್ಕೆ ಆಯುಷ್ ಇಲಾಖೆ ಬ್ರೇಕ್/ ಪತಂಜಲಿ ಔಷಧಿ ತಯಾರಿಸಿರುವ ಬಗ್ಗೆ ಮಾಹಿತಿ ಇಲ್ಲ/  ಸರ್ಕಾರಕ್ಕೆ ಮಾಹಿತಿ ನೀಡುವಂತೆ  ಉತ್ತಾರಖಂಡ ಸರ್ಕಾರಕ್ಕೆ ಸೂಚನೆ/ 

AYUSH ministry orders Patanjali to stop advertising its COVID drug until examined
Author
Bengaluru, First Published Jun 23, 2020, 8:09 PM IST

ನವದೆಹಲಿ(ಜೂ.23) ಪತಂಜಲಿ ಕೊರೊನಾ ಮದ್ದಿಗೆ ಆಯುಷ್ ಇಲಾಖೆ ರೆಡ್ ಸಿಗ್ನಲ್  ನೀಡಿದೆ.  ಪತಂಜಲಿ  ಉತ್ಪನ್ನದ ಬಗ್ಗೆ ಆಯುಷ್ ಇಲಾಖೆ ಗೆ ಮಾಹಿತಿ ಇಲ್ಲ ಎಂದು ತಿಳಿಸಿದೆ.

ಪರೀಕ್ಷೆ ನಡೆಸಿ ಫಲಿತಾಂಶ ಬರುವವರೆಗೂ ಈ ಔಷಧಿಯಿಂದ ಕೊರೋನಾ ದೂರವಾಗುತ್ತದೆ ಎಂಬ ಸಲಹೆ ನೀಡುವುದನ್ನು ಮೊದಲು ನಿಲ್ಲಿಸಿ ಎಂದು ಆಯುಷ್ ಇಲಾಖೆ ಪತಂಜಲಿಗೆ ತಿಳಿಸಿದೆ.

ಕೊರೋನಾ ವೈರಸ್‌ಗೆ ಲಸಿಕೆ ಹಾಗೂ ಔಷಧ ಕಂಡುಹಿಡಿಯಲು ವಿಶ್ವದಾದ್ಯಂತ ಪ್ರಯತ್ನಗಳು ನಡೆದಿರುವ ನಡುವೆಯೇ, ಈ ವ್ಯಾಧಿಗೆ ಔಷಧ ಕಂಡುಹಿಡಿದಿರುವುದಾಗಿ ಯೋಗಗುರು ಬಾಬಾ ರಾಮದೇವ್‌ ಅವರ ಪತಂಜಲಿ  ಹೇಳಿಕೊಂಡಿತ್ತು. ಈ ಸುದ್ದಿ ದೊಡ್ಡ ಮಟ್ಟದ ಪ್ರಚಾರವನ್ನು ಪಡೆದುಕೊಂಡಿತ್ತು.

ಸುದ್ದಿಗಾರರ ಜತೆ ಮಾತನಾಡಿದ್ದ ಪತಂಜಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಚಾರ್ಯ ಬಾಲಕೃಷ್ಣ, ‘ನೂರಾರು ಕೊರೋನಾ ಪೀಡಿತರ ಮೇಲೆ ಈ ಔಷಧ ಪ್ರಯೋಗಿಸಲಾಗಿದೆ. ಇದು ಶೇ.100ರಷ್ಟುಉತ್ತಮ ಫಲಿತಾಂಶ ನೀಡಿದೆ. 5 ರಿಂದ 14 ದಿನ ಅವಧಿಯಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ’ ಎಂದಿದ್ದರು.

ಮುಂಬೈನಲ್ಲಿ ಕೊರೋನಾ ವಿರುದ್ಧ ಹೋರಾಟ ಮಾಡಬಲ್ಲ ಮಾತ್ರೆಯೊಂದನ್ನು ತಯಾರಿಸಲಾಗಿದೆ ಎಂದು ಹೇಳಲಾಗಿತ್ತು. ವೈಜ್ಞಾನಿಕವಾಗಿ ಯಾವುದು ದೃಢಿಕರಣವಾಗುವ ಮುನ್ನ ಇಂಥ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಆಯುಷ್ ಇಲಾಖೆ ತಿಳಿಸಿದೆ. 

Follow Us:
Download App:
  • android
  • ios