ದೆಹಲಿ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ| ಆಪ್ 57 ಕ್ಷೇತ್ರಗಳಲ್ಲಿ, ಬಿಜೆಪಿ 13 ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಮುನ್ನಡೆ| ಕೇಜ್ರಿ ಮನೆಗೆ ಬಂದ ಜ್ಯೂನಿಯರ್ ಕೇಜ್ರಿ| ಅರವಿಂದ್ ಕೇಜ್ರಿವಾಲ್ ವೇಷ ತೊಟ್ಟು ಗಮನ ಸೆಳೆದ ಪುಟ್ಟ ಕಂದ| ಮಗುವನ್ನು ಮುದ್ದಾಡಿದ ದೆಹಲಿ ಸಿಎಂ ಕೇಜ್ರಿವಾಲ್| ಅರವಿಂದ್ ಕೇಜ್ರಿವಾಲ್’ಗೆ ಶುಭ ಕೋರಿದ ಮಕ್ಕಳ ಗುಂಪು| 

ನವದೆಹಲಿ(ಫೆ.11): ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕ್ರಿಯೆ ಆರಂಭಗೊಂಡಿದ್ದು, ಮತದಾನ ಎಣಿಕೆ ಕಾರ್ಯ ಆರಂಭವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಆಡಳಿತಾರೂಢ ಆಪ್ 57 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 13 ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Scroll to load tweet…

ಇನ್ನು ಮತ ಎಣಿಕೆ ಕಾರ್ಯ ಆರಂಭಕ್ಕೂ ಮೊದಲು ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ಪುಟ್ಟ ಮಕ್ಕಳ ಗುಂಪೊಂದು ಭೇಟಿ ನೀಡಿದ್ದು, ಪುಟ್ಟ ಕಂದನೋರ್ವ ಅರವಿಂದ್ ಕೇಜ್ರಿವಾಲ್ ವೇಷ ತೊಟ್ಟು ಗಮನ ಸೆಳೆದಿದ್ದಾನೆ.

ಬಿಜೆಪಿ 55 ಸೀಟು ಗೆದ್ರೆ ಅಚ್ಚರಿಪಡಬೇಡಿ: ಮನೋಜ್ ತಿವಾರಿ!

ಕೇಜ್ರಿವಾಲ್ ಮನೆಗೆ ಬಂದ ಮಕ್ಕಳಲ್ಲಿ ತಮ್ಮಂತೆ ವೇಷ ತೊಟ್ಟ ಮಗುವನ್ನು ಕಂಡು ಹರ್ಷಗೊಂಡ ಅರವಿಂದ್ ಕೇಜ್ರವಾಲ್, ಮಗುವನ್ನು ಎತ್ತಿ ಮುದ್ದಾಡಿದರು.

Scroll to load tweet…

ವಿಧಾನಸಭೆ ಚುನಾವಣೆಯಲ್ಲಿ ಆಪ್ ಮುನ್ನಡೆ ಸಾಧಿಸುತ್ತಿರುವುದನ್ನು ಸಂಭ್ರಮಿಸಿದ ಈ ಮಕ್ಕಳು, ಅರವಿಂದ್ ಕೇಜ್ರಿವಾಲ್ ಅವರಿಗೆ ಧನ್ಯವಾದ ಹೇಳಿ ಮನೆಯತ್ತ ಹೆಜ್ಜೆ ಹಾಕಿದರು.