ವ್ಯಕ್ತಿಯ ಕರುಳಿನೊಳಗೆ ಸೇರಿದ್ದ ಲೋಟ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು ಬಿಹಾರದ ಮುಜಾಫರ್‌ಪುರದಲ್ಲಿ ಘಟನೆ

ಮುಜಾಫರ್‌ಪುರ (ಬಿಹಾರ): ತೀವ್ರ ಮಲಬದ್ಧತೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರಿಗೆ ಭಾನುವಾರ ಬಿಹಾರದ(Bihar) ಮುಜಾಫರ್‌ಪುರದಲ್ಲಿ(Muzaffarpur) ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಅವರ ಕರುಳಿನಿಂದ ಗ್ಲಾಸೊಂದನ್ನು ಹೊರತೆಗೆದಿದ್ದಾರೆ. ಆದರೆ ಈ ಗ್ಲಾಸ್ ಅಲ್ಲಿಗೆ ತಲುಪಿದ್ದಾದರೂ ಹೇಗೆ ಎಂದು ಪಟ್ಟಣದ ಮಾದಿಪುರ (Madipur) ಪ್ರದೇಶದ ಆಸ್ಪತ್ರೆ ಹಾಗೂ ವೈದ್ಯಕೀಯ ತಜ್ಞರು ಮತ್ತು ಸಾಮಾನ್ಯ ಜನರೂ ಈಗ ಕುತೂಹಲ ಹಾಗೂ ಅಚ್ಚರಿಯಿಂದ ನೋಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಸ್ತ್ರಚಿಕಿತ್ಸಕರ ತಂಡದ ನೇತೃತ್ವದ ವಹಿಸಿದ್ದ ಡಾ. ಮಖ್ದುಲುಲ್ ಹಕ್ (Makhdulul Haq) ಅವರ ಪ್ರಕಾರ, ರೋಗಿಯು ಪಕ್ಕದ ವೈಶಾಲಿ ಜಿಲ್ಲೆಯ(Vaishali district) ಮಹುವಾದ (Mahua) ನಿವಾಸಿಯಾಗಿದ್ದು, ಆತನನ್ನು ತಪಾಸಣೆಗೆ ಒಳಪಡಿಸಿ ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ಮಾಡಿದ ನಂತರ ಬಂದ ವರದಿಯಲ್ಲಿ ಆತನ ಕರುಳಿನಲ್ಲಿ ಏನೋ ಗಂಭೀರ ಹಾಗೂ ದೋಷಪೂರಿತವಾದುದು ಇದೆ ಎಂಬುದು ತಿಳಿದು ಬಂದಿತ್ತು. ಶಸ್ತ್ರಚಿಕಿತ್ಸೆಯ ವೀಡಿಯೊ ತುಣುಕನ್ನು ಮತ್ತು ಕಾರ್ಯಾಚರಣೆಯ ಮೊದಲು ತೆಗೆದ ಎಕ್ಸ್-ರೇ ಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಡಾ ಹಕ್, ಗ್ಲಾಸ್ ಒಳಗೆ ಹೇಗೆ ಹೋಯಿತು ಎಂಬುದು ಪ್ರಸ್ತುತ ನಿಗೂಢವಾಗಿದೆ ಎಂದು ಹೇಳಿದರು.

ಮಹಿಳೆಯ ದೇಹದಿಂದ 47 ಕೆಜಿ ತೂಕದ ಬೃಹತ್‌ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದ ವೈದ್ಯರು

ನಾವು ವಿಚಾರಿಸಿದಾಗ, ರೋಗಿಯು ಚಹಾ ಕುಡಿಯುವಾಗ ಗ್ಲಾಸ್‌ನ್ನು ನುಂಗಿದೆ ಎಂದು ಹೇಳಿದರು. ಆದರೆ, ಅದು ನಂಬುವಂತಹ ವಿಚಾರವಲ್ಲ. ಏಕೆಂದರೆ ಮನುಷ್ಯನ ಆಹಾರ ಚಲಿಸುವ ಕರುಳು ಅಷ್ಟು ದೊಡ್ಡ ವಸ್ತುವನ್ನು ತೂರಿಸಿಕೊಳ್ಳುವಷ್ಟು ಹಿಡಿದಿಟ್ಟುಕೊಳ್ಳುವಷ್ಟು ದೊಡ್ಡದಾಗಿಲ್ಲ ಎಂದು ಅವರು ಹೇಳಿದರು. ಆರಂಭದಲ್ಲಿ ಎಂಡೋಸ್ಕೋಪಿಕ್ ವಿಧಾನದ ಮೂಲಕ ಗುದನಾಳದಿಂದ ಗ್ಲಾಸ್‌ನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು ಎಂದು ವೈದ್ಯರು ಹೇಳಿದರು. ಆದರೆ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಅವನ ಹೊಟ್ಟೆಯನ್ನು ಕತ್ತರಿಸಿ ಅವನ ಕರುಳಿನ ಗೋಡೆಯನ್ನು ಕತ್ತರಿಸಿ ನಂತರ ಗ್ಲಾಸ್‌ನ್ನು ಹೊರತೆಗೆಯಬೇಕಾಯಿತು ಎಂದು ಡಾ ಹಕ್ ಹೇಳಿದರು.

ಪ್ರಸ್ತುತ ರೋಗಿಯ ಆರೋಗ್ಯ ಸ್ಥಿರವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಕರುಳನ್ನು ಹೊಲಿಯಲಾಗುತ್ತದೆ ಮತ್ತು ಮಲವನ್ನು ಹೊರಹಾಕಲು ಫಿಸ್ಟುಲರ್ ತೆರೆಯುವಿಕೆಯನ್ನು ರಚಿಸಿರುವುದರಿಂದ ವ್ಯಕ್ತಿ ಹುಷಾರಾಗಲು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಡಾ ಹಕ್ ಹೇಳಿದರು. ಅವನ ಕರುಳು ಕೆಲವು ತಿಂಗಳುಗಳಲ್ಲಿ ಗುಣವಾಗುವ ನಿರೀಕ್ಷೆಯಿದೆ ನಂತರ ನಾವು ಫಿಸ್ಟುಲಾವನ್ನು ಮುಚ್ಚುತ್ತೇವೆ ಮತ್ತು ಅವನ ಕರುಳುಗಳು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು. ಶಸ್ತ್ರಚಿಕಿತ್ಸೆಯ ನಂತರ ರೋಗಿ ಪ್ರಜ್ಞೆಗೆ ಮರಳಿದ್ದರೂ, ಅವನಾಗಲಿ ಅವನ ಕುಟುಂಬ ಸದಸ್ಯರಾಗಲಿ ಮಾಧ್ಯಮಗಳೊಂದಿಗೆ ಮಾತನಾಡಲು ಸಿದ್ಧರಿಲ್ಲ.

Healing Temple: ಸರ್ವ ರೋಗ ನಿವಾರಕ, ವೈದ್ಯರಿಗೇ ವೈದ್ಯ ಈ ವೈದ್ಯನಾಥೇಶ್ವರ

ವೈದ್ಯರು ಅವರ ನಿಶ್ಚಲತೆಗೆ ಸಂಭವನೀಯ ವಿವರಣೆಯನ್ನು ನೀಡಿದರು. ಮಾನವ ಅಂಗರಚನಾಶಾಸ್ತ್ರದ ಬಗ್ಗೆ ನಮ್ಮ ತಿಳುವಳಿಕೆಯ ಪ್ರಕಾರ ಗ್ಲಾಸನ್ನು ಗುದದ್ವಾರದ ಮೂಲಕ ಅವನ ದೇಹಕ್ಕೆ ನೂಕಲಾಯಿತು. ಆದರೆ ನಿಜ ವಿಚಾರಗಳನ್ನು ಕೆದಕಿದರೆ ರೋಗಿಯು ಮಾಡಬಹುದಾದ ಕೆಟ್ಟ ಕೆಲಸಗಳು ಹೊರಗೆ ಬರಬಹುದು ಹೀಗಾಗಿ ಅವರು ಈ ವಿಚಾರವನ್ನು ಹಂಚಿಕೊಳ್ಳಲು ಸಿದ್ಧರಿಲ್ಲ. ವೈದ್ಯರಾಗಿ ನಾವು ಅವರ ವೈಯಕ್ತಿಕ ಗೌಪ್ಯತೆಯನ್ನು ರಕ್ಷಿಸಲು ಕರ್ತವ್ಯ ಬದ್ಧರಾಗಿದ್ದೇವೆ ಎಂದು ಡಾ ಹಕ್ ಹೇಳಿದರು.