ಮಧ್ಯ​ಪ್ರ​ದೇಶ ವಿಧಾ​ನ​ಸಭೆ ಚುನಾ​ವ​ಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾ​ರಕ್ಕೆ ಹಿರಿಯ ನಾಯಕಿ ಪ್ರಿಯಾಂಕಾ ವಾದ್ರಾ ಸೋಮ​ವಾರ ಚಾಲನೆ ನೀಡಿ​ದ್ದು, ‘ಬಿ​ಜೆಪಿ ವೈಫ​ಲ್ಯ​ಗಳ’ ವಿರುದ್ಧ ಹರಿ​ಹಾ​ಯ್ದಿ​ದ್ದಾರೆ.

ಜಬ​ಲ್ಪು​ರ: ಮಧ್ಯ​ಪ್ರ​ದೇಶ ವಿಧಾ​ನ​ಸಭೆ ಚುನಾ​ವ​ಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾ​ರಕ್ಕೆ ಹಿರಿಯ ನಾಯಕಿ ಪ್ರಿಯಾಂಕಾ ವಾದ್ರಾ ಸೋಮ​ವಾರ ಚಾಲನೆ ನೀಡಿ​ದ್ದು, ‘ಬಿ​ಜೆಪಿ ವೈಫ​ಲ್ಯ​ಗಳ’ ವಿರುದ್ಧ ಹರಿ​ಹಾ​ಯ್ದಿ​ದ್ದಾರೆ.

ಜಬ​ಲ್ಪು​ರ​ದಲ್ಲಿ ಪ್ರಚಾರ ಆರಂಭಿಸಿ ಮಾತ​ನಾ​ಡಿದ ಪ್ರಿಯಾಂಕಾ, ‘ಕೊಟ್ಟ ಭರ​ವ​ಸೆ​ಗ​ಳನ್ನು ಮಧ್ಯ​ಪ್ರ​ದೇಶ ಸರ್ಕಾರ ಈಡೇ​ರಿ​ಸಿ​ಲ್ಲ ಹಾಗೂ ಹಗ​ರ​ಣ​ದಲ್ಲಿ (scam) ನಿರ​ತ​ವಾ​ಗಿದೆ. 3 ವರ್ಷ​ದಲ್ಲಿ ಕೇವಲ 21 ಜನ​ರಿಗೆ ಸರ್ಕಾರಿ ನೌಕರಿ ನೀಡಿದೆ. ತನ್ನ ಈವ​ರೆ​ಗಿನ 220 ತಿಂಗಳ ಆಡ​ಳಿ​ತ​ದಲ್ಲಿ (ಶಿ​ವ​ರಾಜ್‌ ಸಿಂಗ್‌ರ ಎಲ್ಲ ಹಾಗೂ ಉಮಾ​ಭಾ​ರತಿ ಅವಧಿ ಸೇರಿ​) ಆದರೆ 225 ಹಗ​ರ​ಣ​ಗ​ಳನ್ನು ಮಾಡಿದೆ. ಅದರಲ್ಲಿ ವ್ಯಾಪಂ ಹಗ​ರಣ (Vyapam Scam), ಪಡಿ​ತರ ಹಗ​ರಣ (Ration scam) ಸೇರಿ​ವೆ’ ಎಂದು ಆರೋ​ಪಿ​ಸಿ​ದ​ರು.

‘ಮ​ಧ್ಯ​ಪ್ರ​ದೇಶ ಜನ​ರನ್ನು 18 ವರ್ಷದ ಆಡ​ಳಿ​ತ​ದಲ್ಲಿ ಬಿಜೆಪಿ ಬಳಸಿ ಬಿಸಾ​ಕಿದೆ. ಆದರೆ ಅವರ ಕನಸು ಈಡೇ​ರಿ​ಸಿಲ್ಲ. ಹೀಗಾ​ಗಿಯೇ ಕರ್ನಾ​ಟಕ ಹಾಗೂ ಹಿಮಾ​ಚ​ಲ​ದಲ್ಲಿ ಬಿಜೆ​ಪಿಗೆ ಜನ ದಿಟ್ಟಉತ್ತರ ನೀಡಿ​ದ್ದಾರೆ. ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾಡು​ತ್ತಿ​ರುವ ಅವ​ಮಾ​ನ​ಗಳ ಪಟ್ಟಿ​ಗಿಂತ, ಬಿಜೆಪಿ ಹಗ​ರ​ಣ​ಗಳ ಪಟ್ಟಿದೊಡ್ಡ​ದಿ​ದೆ’ ಎಂದ​ರು.

ಕಾಂಗ್ರೆ​ಸ್‌ನ ‘ಕರ್ನಾ​ಟಕ ಗ್ಯಾ​ರಂಟಿ​’​ಗಳ ಬಗ್ಗೆ ಕುಹ​ಕ​ವಾ​ಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾ​ಟೆಗೆ ತೆಗೆ​ದು​ಕೊಂಡ ಪ್ರಿಯಾಂಕಾ, ಮಧ್ಯ​ಪ್ರ​ದೇ​ಶ​ದಲ್ಲಿ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬಂದ​ರೆ ಮಹಿ​ಳೆ​ಯ​ರಿಗೆ ಮಾಸಿಕ 1500 ರು. ಭತ್ಯೆ, 100 ಯುನಿಟ್‌ ಉಚಿತ ವಿದ್ಯುತ್‌, 500 ರು.ಗೆ ಗ್ಯಾಸ್‌ ಸಿಲಿಂಡರ್‌, ರೈತ ಸಾಲ ಮನ್ನಾ, ಹಳೇ ಪಿಂಚಣಿ ಯೋಜನೆ ಜಾರಿ- ಈ 5 ಗ್ಯಾರಂಟಿ​ಗ​ಳನ್ನು ಈಡೇ​ರಿ​ಸು​ತ್ತೇವೆ ಎಂದ​ರು.

ಕರ್ನಾಟಕದಲ್ಲಿ 'ಕೈ' ದಿಗ್ವಿಜಯ ಬೆನ್ನಲ್ಲೇ ಮಧ್ಯ ಪ್ರದೇಶದಲ್ಲೂ ಗೆಲುವಿಗೆ ಪ್ಲ್ಯಾನ್‌: ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ

ಪ್ರಿಯಾಂಕಾ ಗಾಂಧಿ ಚುನಾ​ವಣಾ ಹಿಂದೂ 

ಈ ನಡುವೆ ಜಬ​ಲ್ಪು​ರ​ದಲ್ಲಿ ನರ್ಮದಾ ನದಿಗೆ ಪ್ರಿಯಾಂಕಾ ಆರತಿ ಮಾಡಿ​ದರು. ಹೀಗಾಗಿ ಅವ​ರನ್ನು 'ಚು​ನಾ​ವಣಾ ಹಿಂದೂ' ಎಂದು ಬಿಜೆಪಿ ಟೀಕಿ​ಸಿ​ದೆ.

ತೆಲಂಗಾಣ, ಮಧ್ಯ ಪ್ರದೇಶ ಚುನಾ​ವ​ಣೆ: ಪ್ರಿಯಾಂಕಾಗೆ ಹೆಚ್ಚು ಹೊಣೆ ಸಾಧ್ಯ​ತೆ