Asianet Suvarna News Asianet Suvarna News

ಮತದಾರರಿಗೆ ಈರುಳ್ಳಿ ಹಂಚಲು ತ.ನಾಡಲ್ಲಿ ಯತ್ನ?: 21 ಟನ್‌ ಜಪ್ತಿ!

ಮತದಾರರಿಗೆ ಈರುಳ್ಳಿ ಹಂಚಲು ತ.ನಾಡಲ್ಲಿ ಯತ್ನ?: 21 ಟನ್‌ ಜಪ್ತಿ| ಸೂಕ್ತ ದಾಖಲೆಗಳನ್ನು ತೋರಿಸಲು ಚಾಲಕ ವಿಫಲ

21 tonnes of onions seized by election commission flying squad in Tamil Nadu
Author
Bangalore, First Published Dec 23, 2019, 8:56 AM IST

ನಾಗಪಟ್ಟಿಣಂ[ಡಿ.23]: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮ ತಡೆಗಟ್ಟಲು ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಬರೋಬ್ಬರಿ 21 ಟನ್‌ ಈರುಳ್ಳಿಯನ್ನು ಇಲ್ಲಿ ವಶ ಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಿಂದ ಲಾರಿ ಮೂಲಕ ತರಲಾಗುತ್ತಿದ್ದ ಈರುಳ್ಳಿ ಇದಾಗಿದ್ದು, ಸೂಕ್ತ ದಾಖಲೆಗಳನ್ನು ತೋರಿಸಲು ಚಾಲಕ ವಿಫಲವಾದ ಕಾರಣ ಲಾರಿ ಸಮೇತ ಈರುಳ್ಳಿಯನ್ನು ಚುನಾವಾಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಡಿ.27ರಂದು ನಡೆಯುವ ಸ್ಥಳೀಯ ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ಭಾರಿ ಹಣ ಹಾಗೂ ವಸ್ತುಗಳನ್ನು ಸಾಗಿಸಲಾಗುತ್ತಿದೆ ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಈರುಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

Follow Us:
Download App:
  • android
  • ios