Asianet Suvarna News Asianet Suvarna News

ಹಾಸನದಲ್ಲೊಂದು ಸಾವಿನ ರಹದಾರಿ..!

ಹಾಸನದಲ್ಲೊಂದು ಸಾವಿನ ರಹದಾರಿ ಇದೆ. ಇಲ್ಲಿರುವ 40 ಕಿ.ಮೀ ಉದ್ದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟು ಅಪಾಯಕ್ಕೆ ಆಹ್ವಾನ ನೀಡುವಂತಿದೆ. 

Full Of Potholes on National Highway in Hassan
Author
Bengaluru, First Published Nov 6, 2019, 12:10 PM IST

ಹಾಸನ [ನ.06] : ಹಾಸನ ಜಿಲ್ಲೆಯಲ್ಲಿ ಇದೆ ಒಂದು ಸಾವಿನ ರಹದಾರಿ..! ಇದೇನಿದು ಅಚ್ಚರಿ ಎಂದರೆ ಹೌದು ಇಲ್ಲೊಂದು ಡೇಂಜರಸ್ ದಾರಿ ಇದೆ. 

ಹಾಸನ ಜಿಲ್ಲೆಯ ಸಕಲೇಶಪುರದ ಬಾಳ್ಳುಪೇಟೆಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸ್ಥಳೀಯರು ಸಾವಿನ ರಹದಾರಿ ಎಂದು ಬೋರ್ಡ್ ಹಾಕಿದ್ದಾರೆ. 

ಜಯಕರ್ನಾಟಕ ಸಂಗಟನೆ ವತಿಯಿಂದ ಈ ಬೋರ್ಡ್ ಹಾಕಲಾಗಿದ್ದು, ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಅಪಾಯಕ್ಕೆ ಆಹ್ವಾನ ನೀಡುವಂತೆ ಇರುವುದೇ ಇದಕ್ಕೆ ಕಾರಣವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಒಟ್ಟು 40 ಕಿಲೋ ಮೀಟರ್ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಆದರೆ ಈ ಬಗ್ಗೆ ಯಾವುದೇ ಮುಖಂಡರು ಕೂಡ ತಲೆಕೆಡಿಸಿಕೊಂಡಿಲ್ಲ. 

ಕಳೆದ ತಿಂಗಳು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಯ ಡಾಂಬರ್ ಸಂಪೂರ್ಣ ಕಿತ್ತು ಹೋಗಿದ್ದು, ಗುಂಡಿ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಸರಿಪಡಿಸದ್ದಕ್ಕೆ ಆಕ್ರೊಶ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios