1600 ವರ್ಷ ಹಿಂದೆ ರಾತ್ರೋ ರಾತ್ರಿ ಮರೆಯಾಗಿದ್ದ ಚರ್ಚ್ ಲಾಕ್ಡೌನ್ ನಡುವೆ ಪ್ರತ್ಯಕ್ಷ!
ಇಡೀ ವಿಶ್ವದಲ್ಲಿ ಕೊರೋನಾ ವೈರಸ್ ಆತಂಕ ಸೃಷ್ಟಿಸಿದೆ. ಆದರೆ ಪ್ರಕೃತಿ ವಿಚಾರಕ್ಕೆ ಬಂದರೆ ಕೊರೋನಾ ನಿಯಂತ್ರಿಸಲು ಹೇರಲಾದ ಲಾಕ್ಡೌನ್ ಧನಾತ್ಮಕ ಪರಿಣಾಮ ಬೀರಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಕಾರ್ಯ ಸ್ಥಗಿತಗೊಳಿಸಿರುವುದರಿಂದ ನದಿ, ಉಸಿರಾಡುವ ಗಾಳಿ ಶುದ್ಧವಾಗಿದೆ. ಮಾಲಿನ್ಯ ನದಿಗಳೆಂದು ಕುಖ್ಯಾತಿ ಗಳಿಸಿದ ನದಿಗಳ ನೀರು ಕುಡಿಯಲು ಯೋಗ್ಯವಾಗುವಷ್ಟು ಶುದ್ಧವಾಗಿವೆ. ಸರ್ಕಾರ ನದಿಗಳನ್ನು ಶುದ್ಧಗೊಳಿಸಲು ರಾಶಿ ರಾಶಿ ಹಣ ಸುರಿದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಲಾಕ್ಡೌನ್ ನಡುವೆ ಟರ್ಕಿಯಲ್ಲೊಂದು ಅಚ್ಚರಿ ನಡೆದಿದದೆ. ಇಲ್ಲಿ 1600 ವರ್ಷಗಳ ಹಿಂದೆ ರಾತ್ರೋ ರಾತ್ರಿ ಮುಳುಗಿದ್ದ ಚರ್ಚ್ ತನ್ನಿಂತಾನಾಗೇ ಮೇಲೆ ಬಂದಿದೆ.

<p>1600 ವರ್ಷದ ಹಿಂದೆ ಟರ್ಕಿಯ ಇಜನಿಕ್ ಸರೋವರದಲ್ಲಿ ಈ ಚರ್ಚ್ ಮುಳುಗಿತ್ತು, ಆದರೆ ಕೆರೆಯಲ್ಲಿದ್ದ ಮಲಿನದಿಂದ ಇದು ಮರೆಯಾಗಿತ್ತು.</p>
1600 ವರ್ಷದ ಹಿಂದೆ ಟರ್ಕಿಯ ಇಜನಿಕ್ ಸರೋವರದಲ್ಲಿ ಈ ಚರ್ಚ್ ಮುಳುಗಿತ್ತು, ಆದರೆ ಕೆರೆಯಲ್ಲಿದ್ದ ಮಲಿನದಿಂದ ಇದು ಮರೆಯಾಗಿತ್ತು.
<p>ಆದರೆ ಕೊರೋನಾ ನಿಯಂತ್ರಿಸಲು ಹೇರಲಾದ ಲಾಕ್ಡೌನ್ನಿಂದ ಈ ಸರೋವರ ಸಂಪೂರ್ಣವಾಗಿ ಶುದ್ಧಗೊಂಡಿದೆ. </p>
ಆದರೆ ಕೊರೋನಾ ನಿಯಂತ್ರಿಸಲು ಹೇರಲಾದ ಲಾಕ್ಡೌನ್ನಿಂದ ಈ ಸರೋವರ ಸಂಪೂರ್ಣವಾಗಿ ಶುದ್ಧಗೊಂಡಿದೆ.
<p>1600 ವರ್ಷಗಳ ಬಳಿಕ ಈ ಸರೋವರ ಶುಭ್ರಗೊಂಡಿದ್ದು, ನೀರಿನೊಳಗೆ ಮುಳುಗಿದ್ದ ಚರ್ಚ್ ಸ್ಪಷ್ಟವಾಗಿ ಕಾಣಿಸಿಕೊಳ್ಳಲಾರಂಭಿಸಿದೆ.</p>
1600 ವರ್ಷಗಳ ಬಳಿಕ ಈ ಸರೋವರ ಶುಭ್ರಗೊಂಡಿದ್ದು, ನೀರಿನೊಳಗೆ ಮುಳುಗಿದ್ದ ಚರ್ಚ್ ಸ್ಪಷ್ಟವಾಗಿ ಕಾಣಿಸಿಕೊಳ್ಳಲಾರಂಭಿಸಿದೆ.
<p>ಈ ಸ್ಥಳ ಇತಿಹಾಸದ ಅತ್ಯಂತ ಪುರಾತನವಾದುದಾಗಿದೆ ಹಾಗೂ ಕ್ರಿಶ್ಚಿಯನ್ನರ ಪ್ರಮುಖ ಸ್ಥಳಗಳಲ್ಲಿ ಒಂದು.</p>
ಈ ಸ್ಥಳ ಇತಿಹಾಸದ ಅತ್ಯಂತ ಪುರಾತನವಾದುದಾಗಿದೆ ಹಾಗೂ ಕ್ರಿಶ್ಚಿಯನ್ನರ ಪ್ರಮುಖ ಸ್ಥಳಗಳಲ್ಲಿ ಒಂದು.
<p>ಈ ಚರ್ಚ್ 390ನೇ ಇಸವಿಯಲ್ಲಿ ನಿರ್ಮಾಣಗೊಂಡಿತ್ತು. ಇನ್ನು ಭೂಕಂಪದಿಂದಾಗಿ ಈ ಚರ್ಚ್ ಕಣ್ಮರೆಯಾಗಿತ್ತೆಂಬುವುದು ಪುರಾತತ್ವ ಇಲಾಖೆ ಅಧಿಕಾರಿಗಳ ಮಾತಾಗಿದೆ.</p>
ಈ ಚರ್ಚ್ 390ನೇ ಇಸವಿಯಲ್ಲಿ ನಿರ್ಮಾಣಗೊಂಡಿತ್ತು. ಇನ್ನು ಭೂಕಂಪದಿಂದಾಗಿ ಈ ಚರ್ಚ್ ಕಣ್ಮರೆಯಾಗಿತ್ತೆಂಬುವುದು ಪುರಾತತ್ವ ಇಲಾಖೆ ಅಧಿಕಾರಿಗಳ ಮಾತಾಗಿದೆ.
<p>ಭೂಕಂಪದಿಂದಾಗಿ ಈ ಚರ್ಚ್ ನಾಶಗೊಂಡಿತ್ತು ಎಂಬುವುದು ಅಧಿಕಾರಿಗಳ ವಾದವಾಗಿತ್ತು.</p>
ಭೂಕಂಪದಿಂದಾಗಿ ಈ ಚರ್ಚ್ ನಾಶಗೊಂಡಿತ್ತು ಎಂಬುವುದು ಅಧಿಕಾರಿಗಳ ವಾದವಾಗಿತ್ತು.
<p>ಆದರೀಗ 1600 ವರ್ಷಗಳ ಬಳಿಕ ಇದು ಮತ್ತೆ ಗೋಚರಿಸಿರುವುದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.</p>
ಆದರೀಗ 1600 ವರ್ಷಗಳ ಬಳಿಕ ಇದು ಮತ್ತೆ ಗೋಚರಿಸಿರುವುದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
<p>ಸದ್ಯ ಈ ಫೋಟೋವನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ.</p>
ಸದ್ಯ ಈ ಫೋಟೋವನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ