MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಸಾವು ಗೆದ್ದ 'ವಿಜಯ'ಪುರದ ಸಾತ್ವಿಕ್, ಜೀವ ಉಳಿಸಿದವರಿಗೆ ಕೋಟಿ ನಮನ

ಸಾವು ಗೆದ್ದ 'ವಿಜಯ'ಪುರದ ಸಾತ್ವಿಕ್, ಜೀವ ಉಳಿಸಿದವರಿಗೆ ಕೋಟಿ ನಮನ

ಬರೋಬ್ಬರಿ 20 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು, ವಿಜಯಪುರದ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕನನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. 

1 Min read
Santosh Naik
Published : Apr 04 2024, 02:16 PM IST| Updated : Apr 04 2024, 03:57 PM IST
Share this Photo Gallery
  • FB
  • TW
  • Linkdin
  • Whatsapp
112

ಬುಧವಾರ ಸಂಜೆಯ ವೇಳೆ ವಿಜಯಪುರದ ಇಂಡಿಯಲ್ಲಿ ತಲೆಕೆಳಗಾಗಿ ಬಿದ್ದಿದ್ದ 2 ವರ್ಷದ ಬಾಲಕನನ್ನು ಗುರುವಾರ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
 

212

ಬುಧವಾರ ಸಂಜೆ 5-6 ಗಂಟೆಯ ಸುಮಾರಿಗೆ ಹೊಲದಲ್ಲಿ ಹೊಸದಾಗಿ ತೆಗೆಸಲಾಗಿದ್ದ ಬೋರ್‌ವೆಲ್‌ನಲ್ಲಿ ಸಾತ್ವಿಕ್‌ ತಲೆಕೆಳಗಾಗಿ ಬಿದ್ದಿದ್ದ.

312

ಅಂದಾಜು 20 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಗುರುವಾರ ಮಧ್ಯಾಹ್ನ ಅಂದಾಜು 2 ಗಂಟೆಯ ವೇಳೆಗೆ 3 ವರ್ಷದ ಬಾಲಕ ಸಾತ್ವಿಕ್‌ನನ್ನು ರಕ್ಷಣೆ ಮಾಡಲಾಗಿದೆ.
 

412

ಎಸ್‌ಡಿಎಆರ್‌ಎಫ್‌, ಅಗ್ನಿಶಾಮಕ ಸೇರಿದಂತೆ ವಿವಿಧ ರಕ್ಷಣಾ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕೊಳವೆ ಬಾವಿಯಿಂದ ಮಗು ಹೊರಬಂದ ಬೆನ್ನಲ್ಲಿಯೇ ಸ್ಥಳದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

512

ಹೊರಗೆ ಬಂದ ಮಗುವನ್ನು ತಕ್ಷಣವೇ ಆಂಬುಲೆನ್ಸ್‌ನಲ್ಲಿ ಇಂಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.
 

612

ಅಹೋರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ರಕ್ಷಣಾ ಸಿಬ್ಬಂದಿಗೆ ಇಂದು ಬೆಳಗ್ಗೆಯ ವೇಳೆ ಬೋರ್‌ವೆಲ್‌ನ ಒಳಗಿನಿಂದ ಮಗುವಿನ ಅಳುವಿನ ಶಬ್ದ ಕೇಳಿಸಿತ್ತು.

712

ಕೊಳವೆ ಬಾವಿಯಿಂದ ಮಗುವನ್ನು ರಕ್ಷಿಸಿ ಸ್ಟ್ರೆಚರ್‌ನಲ್ಲಿ ಹಾಕುವ ವೇಳೆ ಲಚ್ಯಾಣ ಗ್ರಾಮದ ಗ್ರಾಮಸ್ಥರು ರಕ್ಷಣಾ ಸಿಬ್ಬಂದಿಗೆ ಜೈಕಾರ ಕೂಗಿದರು.

812

2 ವರ್ಷದ ಮಗು ಸಾತ್ವಿಕ್‌  ಕೊಳವೆ  ಬಾವಿಯಿಂದ ಜೀವಂತವಾಗಿ ಹೊರಬರಲಿ ಎಂದು ಹಾರೈಸಿ ಲಚ್ಯಾಣ ಗ್ರಾಮದ ಜನರು, ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನೂ ಮಾಡಿದ್ದರು. 

912

ಹೊಲದಲ್ಲಿ ನಿಂಬೆ ಬೆಳೆ ಬೆಳೆದಿದ್ದ ಸತೀಶ್‌ ಮುಜುಗೊಂಡ, ನೀರಿನ ಸಲುವಾಗಿ ಏಪ್ರಿಲ್‌ 2 ರಂದು ಬೋರ್‌ವೆಲ್‌ ಕೊರೆಸಿದ್ದರು. ಆದರೆ, ನೀರು ಸಿಕ್ಕಿರಲಿಲ್ಲ.

1012

ಬುಧವಾರ ಬೋರ್‌ವೆಲ್‌ ಬಳಿ ಅಟವಾಡುತ್ತಿದ್ದ ಸಾತ್ವಿಕ್‌ ಇದರ ಒಳಗೆ ತಲೆಕೆಳಗಾಗಿ ಬಿದ್ದಿದ್ದ. ಮಗುವನ್ನು ಹುಡುಕುತ್ತಾ ಬಂದ ತಾಯಿ ಪೂಜಾಗೆ ಮಗು ಬೋರ್‌ವೆಲ್‌ ಒಳಗೆ ಬಿದ್ದಿದ್ದು ಕಂಡಿದೆ. 

1112

ಕಳೆದ 20 ಗಂಟೆಗಳಿಂದ ಮಗು ಕೊಳವೆ ಬಾವಿಯಲ್ಲಿ ಅನ್ನ-ನೀರು ಇಲ್ಲದೇ ಅಳುತ್ತಾ ಇತ್ತು.  ಆದರೆ, ಮಗುವಿನ ಆರೋಗ್ಯ ಸ್ಥಿರವಾಗಿತ್ತು ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದರು.

1212

ರಕ್ಷಣಾ ಕಾರ್ಯಾಚರಣೆಯ ವೇಳೆ ಕಲ್ಲು ಬಂಡೆಗಳು ಅಡ್ಡಿಯಾಗಿದ್ದರಿಂದ ಕಾರ್ಯಾಚರಣೆಗೆ 20 ಗಂಟೆ ಆಯಿತು ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ವಿಜಯಪುರ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved