ಬಡವರ ಹಸಿವು ನೀಗಿಸುತ್ತಿದೆ 'ಕೊಡೋಣ' ತಂಡ!
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾದ ಪರಿಣಾಮ ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರ ಹಸಿವು ನಿಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗಾಯಕ ನವೀನ್ ಸಜ್ಜು, ನಿರ್ದೇಶಕ ಸಹನಾಮೂರ್ತಿ, ವರುಣ್ ಕುಮಾರ್ ಸೇರಿದಂತೆ ಹತ್ತು ಮಂದಿ ಸಮಾನ ಮನಸ್ಕ ಗೆಳೆಯರು ಈ ‘ಕೊಡೋಣ’ ತಂಡ ಕಟ್ಟಿಕೊಂಡು ಮಾ.22ರಿಂದಲೂ ಪ್ರತಿದಿನ ನಗರದ ವಿವಿಧ ಪ್ರದೇಶಗಳಲ್ಲಿ 500 ಜನರಿಗೆ ಉಚಿತವಾಗಿ ಮಧ್ಯಾಹ್ನದ ಊಟ ವಿತರಣೆ ಮಾಡುತ್ತಿದೆ. ಈ ಕೊಡೋಣ ತಂಡದ ಜೊತೆ ಕೈಜೋಡಿಸಲು ಬಯಸುವವರು ಹೆಚ್ವಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 96324 01199 ಸಂಪರ್ಕಿಸಬಹುದು.
ಈ 'ಕೊಡೋಣ' ತಂಡ ಬೆಂಗಳೂರಿನ ನಾಗರಭಾವಿಯಲ್ಲಿ ಕೇವಲ ಇಬ್ಬರಿಂದ ಶುರುವಾಗಿತ್ತು. ಈಗ 10 ಜನರ ತಂಡವಾಗಿ ಬೆಳೆದಿದೆ. ಮಾರ್ಚ್ 22ರಿಂದ ಈ ತಂಡ ಪ್ರಾರಂಭವಾಗಿದ್ದು, ಬಡವರ ಹೊಟ್ಟೆ ತುಂಬಿಸುತ್ತಿದೆ.
ಈ 'ಕೊಡೋಣ' ತಂಡ ಬೆಂಗಳೂರಿನ ನಾಗರಭಾವಿಯಲ್ಲಿ ಕೇವಲ ಇಬ್ಬರಿಂದ ಶುರುವಾಗಿತ್ತು. ಈಗ 10 ಜನರ ತಂಡವಾಗಿ ಬೆಳೆದಿದೆ. ಮಾರ್ಚ್ 22ರಿಂದ ಈ ತಂಡ ಪ್ರಾರಂಭವಾಗಿದ್ದು, ಬಡವರ ಹೊಟ್ಟೆ ತುಂಬಿಸುತ್ತಿದೆ.
ಇನ್ನು, ಈ ಕೊಡೋಣ ತಂಡ ಬಡವರಿಗೆ ಕೇವಲ ಊಟ ಮಾತ್ರವಲ್ಲದೇ, ಸುರಕ್ಷತೆಯ ದೃಷ್ಟಿಯಿಂದ ಜನರಿಗೆ ಉಚಿತವಾಗಿ ಸ್ಯಾನಿಟೈಸರ್ ನೀಡುತ್ತಿದ್ದಾರೆ. ಜೊತೆಗೆ ಬಿಸ್ಕೆಟ್, ನೀರನ್ನೂ ಸಹ ಕೊಡುತ್ತಿದ್ದಾರೆ. ಇದುವರೆಗೂ ಸುಮಾರು 10 ಸಾವಿರ ಜನರಿಗೆ ಕೊಡೋಣ ತಂಡ ಊಟ ನೀಡಿ ಹೊಟ್ಟೆ ತಣ್ಣಗಾಗಿಸಿದೆ.
ಅಂದಹಾಗೆ ಪ್ರತಿದಿನ ಬಡವರ ಹೊಟ್ಟೆ ತುಂಬಿಸುತ್ತಿರುವ ಈ ತಂಡದ ಪರಿಚಯವನ್ನೂ ಕೂಡ ಮಾಡಿಕೊಡಬೇಕಿದೆ. ಈ ತಂಡದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಇದ್ದಾರೆ.
ನಾಗರಭಾವಿಯ ಹೋಟೆಲ್ವೊಂದರಲ್ಲಿ ಮತ್ತು ಗೆಳೆಯರ ಮನೆಗಳಲ್ಲಿ ಅಡುಗೆ ಸಿದ್ದ ಮಾಡಲಾಗುತ್ತದೆ. ಬಳಿಕ ವಾಹನದಲ್ಲಿ ಪಾರ್ಸೆಲ್ ತೆಗೆದುಕೊಂಡು ನಗರದ ವಿವಿಧೆಡೆ ಸಂಚರಿಸಿ ಊಟ ವಿತರಣೆ ಮಾಡಲಾಗುತ್ತಿದೆ. ಊಟದ ಜೊತೆಗೆ ಅಕ್ಕಿ, ಬೇಳೆ, ಎಣ್ಣೆಯನ್ನೂ ಸಹ ವಿತರಿಸುತ್ತಿದ್ದಾರೆ.
ಪೊಲೀಸರ ಅನುಮತಿ ಪಡೆದುಕೊಂಡೇ ಇಂತಹ ಉತ್ತಮ ಕಾರ್ಯ ಮಾಡುತ್ತಿದೆ ಕೊಡೋಣ ತಂಡ. ಲಾಕ್ ಡೌನ್ ಮುಗಿಯುವವರೆಗೂ ಅಂದರೆ ಏಪ್ರಿಲ್ 14ರವರೆಗೂ ಸಹ ಕೊಡೋಣ ತಂಡ ಉಚಿತ ಊಟ, ದಿನಸಿ ಪದಾರ್ಥಗಳನ್ನು ಬಡವರಿಗೆ ನೀಡಲಿದೆ.