MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಎಚ್‌ಡಿಕೆ ಡಿಸ್ಚಾರ್ಜ್; ಆಪತ್ತಿಗಾದ ಆಪ್ತ ಸಹಾಯಕನಿಗೆ ಧನ್ಯವಾದ ತಿಳಿಸಿದ ಕುಮಾರಣ್ಣ

ಎಚ್‌ಡಿಕೆ ಡಿಸ್ಚಾರ್ಜ್; ಆಪತ್ತಿಗಾದ ಆಪ್ತ ಸಹಾಯಕನಿಗೆ ಧನ್ಯವಾದ ತಿಳಿಸಿದ ಕುಮಾರಣ್ಣ

 ಅನಾರೋಗ್ಯದಿಂದಾಗಿ ಕಳೆದ ನಾಲ್ಕು ದಿನಗಳಿಂದ ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.

1 Min read
Ravi Janekal
Published : Sep 03 2023, 04:41 PM IST| Updated : Sep 04 2023, 05:52 PM IST
Share this Photo Gallery
  • FB
  • TW
  • Linkdin
  • Whatsapp
14

ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, ದೇವರು, ರಾಜ್ಯದ ಜನರು ಹಾಗೂ ತಂದೆ ತಾಯಿಯ ಆಶೀರ್ವಾದ, ವೈದ್ಯರ ಆರೈಕೆಯಿಂದ ನನಗೆ ಮೂರನೇ ಜನ್ಮ ಸಿಕ್ಕಿದೆ ಎಂದು ಅವರು ಕೃತಜ್ಞತಾಪೂರ್ವಕ ಮಾತುಗಳನ್ನು ಹೇಳಿದರು. ಇದೇ ವೇಳೆ ಕಳೆದ ಹತ್ತು ವರ್ಷಗಳಿಂದ ಕುಮಾರಸ್ವಾಮಿಯವರ ನೆರಳಿನಂತೆ ಕಾಯುತ್ತಿರುವ ಆಪ್ತ ಸಹಾಯಕನ ಸಹಾಯ, ಆತನ ಸಮಯಪ್ರಜ್ಞೆಯಿಂದ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರುವಂತೆ ಆಗಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. 

24

ಆಪ್ತ ಸಹಾಯಕನೇ ಆಪ್ತರಕ್ಷಕ

ಸತೀಶ್, ಕಳೆದ ಹತ್ತು ವರ್ಷಗಳಿಂದ ಎಚ್‌ಡಿ ಕುಮಾರಸ್ವಾಮಿಯವರ ಆಪ್ತಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಎಚ್‌ಡಿಕೆ ಬೇಕುಬೇಡಗಳನ್ನು ವಿಚಾರಿಸಿಕೊಳ್ಳುವುದೇ ಆತನ ಕಾಯಕ.

ಅಂದು ರಾತ್ರಿ ದಿಢೀರನೇ ಎಚ್‌ಡಿಕೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಾಗ ಆಳು ಕಾಳು ಯಾರೂ ಇರಲಿಲ್ಲ. ಕಾರಿನ ಡ್ರೈವರ್ ಕೂಡ ತನ್ನ ಕೆಲಸ ಮುಗಿಸಿ ಹೊರಟುಹೋಗಿದ್ದ. ಎಚ್‌ಡಿಕೆ ಜತೆಗೆ ಇದ್ದದ್ದು ಆಪ್ತ ಸಹಾಯಕ ಸತೀಶ್. ಇಂಥ ಆಪತ್ತಿನ ವೇಳೆ ಸಮಯಪ್ರಜ್ಞೆ ಬಹಳ ಮುಖ್ಯ. ಸ್ವಲ್ಪವೂ ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಸರಿಯಾದ ಸಮಯಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದ ಸಹಾಯಕ ನಿಜಕ್ಕೂ ಆಪ್ತ ರಕ್ಷಕ.

34

ಕುಮಾರಸ್ವಾಮಿಯವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸುತ್ತಿದ್ದ ಹಾಗೇ ಎಚ್ಚೆತ್ತುಕೊಂಡ ಆಪ್ತ ಸಹಾಯಕ ಸತೀಶ್. ಏಕಾಏಕಿ ಅನಾರೋಗ್ಯಕ್ಕೀಡಾದ ಎಚ್‌ಡಿಕೆ. ನಡುರಾತ್ರಿಯಲ್ಲಿ ಸ್ವಲವೂ ವಿಚಲಿತರಾಗದೇ ಮೊದಲು ಕರೆ ಮಾಡಿದ್ದು  ಡಾ ಮಂಜುನಾಥ್‌ಗೆ. ವೈದ್ಯರಿಗೆ ಕರೆ ಮಾಡಿ ಮೊದಲು ಮಾಹಿತಿ ತಿಳಿಸಿದ ಸತೀಶ್, ತಕ್ಷಣವೇ ತೋಟದಲ್ಲಿ ಇದ್ದ ಮತ್ತೊಬ್ಬ ಡ್ರೈವರ್ ಗೆ ಕರೆ ಮಾಡಿ ಶೀಘ್ರ ಬರಲು ಸೂಚನೆ ನೀಡಿದ್ದ ಸತೀಶ್

44

ಬಿಡದಿಯಿಂದ ಜಯನಗರದ ಅಪೋಲೋ ಆಸ್ಪತ್ರೆಗೆ ಕೇವಲ 20 ನಿಮಿಷದಲ್ಲಿ ಕರೆ ತರಲಾಗಿತ್ತು.ಇಂಥ ಸಮಯದಲ್ಲಿ ಸಮಯಪ್ರಜ್ಞೆ ಬಹಳ ಮುಖ್ಯವಾದುದ್ದು. ಆಪ್ತ ಸಹಾಯಕ ಸತೀಸ್ ಅಂತಹ ಸಮಯಪ್ರಜ್ಞೆ ಮೆರೆದಿದ್ದ. ನಿಜಕ್ಕೂ ಆತ ಇಲ್ಲದಿದ್ರೆ  ಕಥೆ ಬೇರೆಯೇ ಆಗ್ತಿತ್ತು. 
 

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಬೆಂಗಳೂರು
ಹೆಚ್.ಡಿ. ಕುಮಾರಸ್ವಾಮಿ
ಆರೋಗ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved