MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಹಾಸನ ಯುವತಿ ನಿಖಿತಾ ಕೇಸಲ್ಲಿ ಟ್ವಿಸ್ಟ್; ಪ್ರಿಯಕರನ ಮನೆಗೆ ಬಂದ 6ನೇ ದಿನವೇ ಜೀವಬಿಟ್ಟ ಇನ್‌ಸ್ಟಾಗ್ರಾಮ್ ಪ್ರೇಯಸಿ!

ಹಾಸನ ಯುವತಿ ನಿಖಿತಾ ಕೇಸಲ್ಲಿ ಟ್ವಿಸ್ಟ್; ಪ್ರಿಯಕರನ ಮನೆಗೆ ಬಂದ 6ನೇ ದಿನವೇ ಜೀವಬಿಟ್ಟ ಇನ್‌ಸ್ಟಾಗ್ರಾಮ್ ಪ್ರೇಯಸಿ!

ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ 6 ವರ್ಷಗಳ ಕಾಲ ಪ್ರೀತಿಸಿದರೂ, ಇಬ್ಬರೂ ಒಟ್ಟಾಗಿ 6 ದಿನವೂ ಇರಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿದ್ದ ಪ್ರೇಮಿ ರಾಘವೇಂದ್ರನ ಮನೆಗೆ ಹಾಸನದಿಂದ ಬಂದಿದ್ದ ಯುವತಿ ನಿಖಿತಾ, ಪ್ರೇಮಿಯ ಮನೆಯಲ್ಲಿಯೇ ಉಸಿರು ಚೆಲ್ಲಿದ್ದಾಳೆ.

2 Min read
Author : Sathish Kumar KH
Published : Jan 06 2026, 06:23 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Instagram

ಇನ್‌ಸ್ಟಾಗ್ರಾಮ್ ಮೂಲಕ ಪರಸ್ಪರ ಮೆಸೇಜ್ ಮಾಡಿಕೊಂಡು ಐದಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಯುವಕ-ಯುವತಿ ನಾವಿಬ್ಬರೂ ಇದೀಗ ಮೇಜರ್ ಎಂದು ತೀರ್ಮಾನಿಸಿ ಮದುವೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಹೊಸ ವರ್ಷಕ್ಕೆ ನಮ್ಮನೆಗೆ ಬಾ ಎಂದು ಕರೆಸಿಕೊಂಡಿದ್ದ ಯುವಕನ ಮನೆಯಲ್ಲಿಯೇ ಹಾಸನದಿಂದ ಬೆಂಗಳೂರಿಗೆ ಬಂದಿದ್ದ ನಿಖಿತಾ ಪ್ರೇಮಿಯ ಮನೆಯಲ್ಲಿಯೇ ಅನುಮಾನಾಸ್ಪದ ಶವವಾಗಿ ಪತ್ತೆಯಾಗಿದ್ದಾಳೆ.

28
Image Credit : Asianet News

ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ಪಿಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ನಿಖಿತಾ (19) ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದವಳಾಗಿದ್ದು, ಪ್ರೇಮಿಯ ಮನೆಗೆ ಬಂದಾಗ ದುರಂತವಾಗಿ ಅಂತ್ಯ ಕಂಡಿದ್ದಾಳೆ.

Related Articles

Related image1
ಲವ್ ಮಾಡ್ತಿದ್ದರೂ ಮದುವೆ ಮಾಡಿಕೊಳ್ಳದ ಬಾಯ್‌ಫ್ರೆಂಡ್ ಮನೆಗೆ ಹೋಗಿ ಪ್ರಾಣಬಿಟ್ಟ ಹಾಸನ ಯುವತಿ ನಿಖಿತಾ!
Related image2
ಹರೆಯದ ಹುಡುಗಿಗೆ ಪ್ರೀತಿ ಮಾಡೋದಾಗಿ ಕಿರುಕುಳ; ಹುಡುಗನ ಹುಚ್ಚಾಟಕ್ಕೆ ಜೀವಬಿಟ್ಟ ಅಪ್ರಾಪ್ತ ಬಾಲಕಿ!
38
Image Credit : Asianet News

ಇನ್‌ಸ್ಟಾಗ್ರಾಮ್ ಮೂಲಕ ಪರಿಚಿತವಾದ ರಾಘವೇಂದ್ರ ಮತ್ತು ನಿಖಿತಾ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಮಾಡುತ್ತಾ, ಸ್ನೇಹ ಬೆಳೆಸಿಕೊಂಡಿದ್ದಾರೆ. ನಂತರ, ಇಬ್ಬರ ಸ್ನೇಹ ಗಾಢವಾದ ನಂತರ ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಶೇರ್ ಮಾಡಿಕೊಂಡಿದ್ದಾರೆ.

48
Image Credit : Asianet News

ಇದಾಗಿ ಕೆಲವೇ ದಿನಗಳ ಅಂತರದಲ್ಲಿ ಇಬ್ಬರಿಗೂ ಪ್ರೀತಿ ಶುರುವಾಗಿದೆ. ಆದರೆ, ಯುವತಿ ನಿಖಿತಾಗೆ ಇನ್ನೂ ವಿವಾಹದ ವಯಸ್ಸಾಗಿರದ ಕಾರಣ ಚಾಟಿಂಗ್‌ಗೆ ಮಾತ್ರ ಪ್ರೀತಿ ಸೀಮಿತವಾಗಿತ್ತು. ಇತ್ತೀಚಿನ ಕೆಲವು ದಿನಗಳಿಂದ ಇಬ್ಬರೂ ಪರಸ್ಪರ ಭೇಟಿ ಮಾಡುವುದು, ಅಲ್ಲಲ್ಲಿ ಸುತ್ತಾಡುವುದು ಮುಂದುವರೆದಿದೆ. ಆದರೆ, ಒಟ್ಟಿಗೆ ಉಳಿದುಕೊಳ್ಳಲು ಅವಕಾಶ ಇರಲಿಲ್ಲ.

58
Image Credit : Asianet News

ಇನ್ನು ಯುವತಿಗೆ 19 ವರ್ಷಗಳಾಗುತ್ತಿದ್ದಂತೆ ಇಬ್ಬರೂ ಮೇಜರ್ ಎಂದು ತಿಳಿದ ನಂತರ ಯುವಕ ರಾಘವೇಂದ್ರ ಹುಡುಗಿಯ ಮನೆಯವರಿಗೆ ನಾನು ನಿಮ್ಮ ಮಗಳು ನಿಖಿತಾಳನ್ನು ಮದುವೆ ಮಾಡಿಕೊಳ್ಳಯತ್ತೇನೆ ಎಂದು ಭರವಸೆ ನೀಡಿದ್ದಾನೆ. ಇದಾದ ಬಳಿಕ ಮದುವೆಯಾಗುವ ಜೋಡಿಗೆ ಪ್ರೀತಿಗೆ ಮತ್ತು ಸಲುಗೆಗೆ ಮನೆಯವರೂ ಸ್ವತಂತ್ರ ನೀಡಿದ್ದಾರೆ.

68
Image Credit : Asianet News

ಇನ್ನು ಹೊಸ ವರ್ಷದ ಆಚರಣೆ ನಿಮಿತ್ತ ಜ.1ರಂದು ಅರಸೀಕೆರೆಯಿಂದ ಬೆಂಗಳೂರಿಗೆ ಬಂದಿದ್ದ ನಿಖಿತಾಳ ಜೊತೆಗೆ ರಾಘವೇಂದ್ರ 5 ದಿನ ಕಳೆದಿದ್ದಾನೆ. ನಂತರ, ನಿಖಿತಾ ನನಗೆ ನೀನು ತಾಳಿ ಕಟ್ಟಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾಳೆ. ಆದರೆ, ಇದಕ್ಕೆ ರಾಘವೇಂದ್ರ ಸಮಯ ಕೊಡುವಂತೆ ಕೇಳಿಕೊಂಡಿದ್ದಾನೆ.

78
Image Credit : Instagram

ಇದರಿಂದ ಬೇಸತ್ತ ನಿಖಿತಾ ತಾನು ಆತ್ಮ*ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆಯವರಿಗೆ ಕರೆ ಮಾಡಿ ಹೇಳಿದ್ದಾಳೆ. ಇದರಿಂದ ಕಂಗೆಟ್ಟ ಮನೆಮಂದಿ ವಾಪಸ್ ಕರೆ ಮಾಡುವ ವೇಳೆಗೆ ಆಕೆ ನೇಣಿಗೆ ಶರಣಾಗಿದ್ದಾಳೆ. ಒಟ್ಟಾರೆಯಾಗಿ ಇನ್‌ಸ್ಟಾಗ್ರಾಮ್‌ ಮೂಲಕ ಪ್ರೀತಿಸಿದ ಜೋಡಿ ಒಟ್ಟಿಗೆ ಇದ್ದಾಗ ಅವರ ಪ್ರೀತಿ ಕೇವಲ 6 ದಿನವೂ ಜೀವಂತವಾಗಿ ಉಳಿಯದೇ, ಹುಡುಗಿಯ ಸಾವಿನೊಂದಿಗೆ ಅಂತ್ಯವಾಗಿದೆ.

88
Image Credit : Asianet News

ಇದೀಗ ಯುವತಿ ಪೋಷಕರು ಆಕೆಯನ್ನು ಪ್ರೀತಿ ಮಾಡಿದ ಯುವಕನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿ ರಾಘವೇಂದ್ರನನ್ನ ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಇನ್‌ಸ್ಟಾಗ್ರಾಂ
ಪ್ರೀತಿ
ಹಾಸನ
ಬೆಂಗಳೂರು
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಸೋಡಾ ಬಾಟಲಿಯಲ್ಲಿ ಪೆಟ್ರೋಲ್, ಗನ್ ಮ್ಯಾನ್ ಪೈರಿಂಗ್": ಬಳ್ಳಾರಿಯಲ್ಲಿ ನಡೆದಿದ್ದು ಪಕ್ಕಾ ಫಿಲ್ಮ್ ಸ್ಟೈಲ್‌ನಲ್ಲಿ ರೆಡ್ಡಿ ಮರ್ಡರ್ ಪ್ಲಾನ್?
Recommended image2
ಬಳ್ಳಾರಿ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಿದ್ದಕ್ಕೆ ಸಚಿವ ಜಮೀರ್ ವಿರುದ್ಧ ದೂರು
Recommended image3
ಕೃಷ್ಣಾ ನದಿ ಹಿಪ್ಪರಗಿ ಬ್ಯಾರೇಜ್ ಗೇಟ್ ಕಟ್: ಸ್ಥಳಕ್ಕೆ ಆರ್.ಬಿ. ತಿಮ್ಮಾಪುರ ಭೇಟಿ, ನದಿಪಾತ್ರದಲ್ಲಿ ಆತಂಕ!
Related Stories
Recommended image1
ಲವ್ ಮಾಡ್ತಿದ್ದರೂ ಮದುವೆ ಮಾಡಿಕೊಳ್ಳದ ಬಾಯ್‌ಫ್ರೆಂಡ್ ಮನೆಗೆ ಹೋಗಿ ಪ್ರಾಣಬಿಟ್ಟ ಹಾಸನ ಯುವತಿ ನಿಖಿತಾ!
Recommended image2
ಹರೆಯದ ಹುಡುಗಿಗೆ ಪ್ರೀತಿ ಮಾಡೋದಾಗಿ ಕಿರುಕುಳ; ಹುಡುಗನ ಹುಚ್ಚಾಟಕ್ಕೆ ಜೀವಬಿಟ್ಟ ಅಪ್ರಾಪ್ತ ಬಾಲಕಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved