MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ದುಬಾರೆ ಸಾಕಾನೆ ಶಿಬಿರ: ಹಲವು ದಶಕಗಳ ತೂಗು ಸೇತುವೆ ಬೇಡಿಕೆ ಈಡೇರುವುದು ಯಾವಾಗ?

ದುಬಾರೆ ಸಾಕಾನೆ ಶಿಬಿರ: ಹಲವು ದಶಕಗಳ ತೂಗು ಸೇತುವೆ ಬೇಡಿಕೆ ಈಡೇರುವುದು ಯಾವಾಗ?

 ದುಬಾರೆ ಅಂದ್ರೆ ನೆನೆಪಾಗುವುದು ವಿಶ್ವ ಪ್ರಸಿದ್ಧ ಸಾಕಾನೆ ಶಿಬಿರ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರು ಬೋಟ್ ಮೂಲಕವೋ ಇಲ್ಲ, ಬೇಸಿಗೆಯಲ್ಲಿ ಹೊಳೆಯಲ್ಲಿಯೇ ನಡೆದುಕೊಂಡೋ ಸಾಕಾನೆ ಶಿಬಿರಕ್ಕೆ ಹೋಗಿ ಅಲ್ಲಿರುವ ಹತ್ತಾರು ಆನೆಗಳನ್ನು ಕಣ್ತುಂಬಿಕೊಂಡು ಖುಷಿ ಪಡುತ್ತಾರೆ. ಆದರೆ ಶಿಬಿರದಿಂದ ತುಸುವೇ ದೂರದಲ್ಲಿರುವ ಆದಿವಾಸಿ ಬುಡಕಟ್ಟು ಕುಟುಂಬಗಳ ಯಾತನಾಮಯ ಬದುಕು ಮಾತ್ರ ಕಾಣುವುದಿಲ್ಲ.  

2 Min read
Suvarna News
Published : Dec 27 2024, 10:48 PM IST
Share this Photo Gallery
  • FB
  • TW
  • Linkdin
  • Whatsapp
14
ದುಬಾರೆ ಸಾಕಾನೆ ಶಿಬಿರ

ದುಬಾರೆ ಸಾಕಾನೆ ಶಿಬಿರ

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರ ಎಲ್ಲರನ್ನು ಆಕರ್ಷಿಸಿದರೆ ಹಾಡಿಯ ಜನರ ಕಣ್ಣೀರು ಕಾವೇರಿ ಹೊಳೆಯ ಪಾಲಾಗುತ್ತಿದೆ. ಅದಕ್ಕೆ ಕಾರಣ ಅವರಿಗೆ ಇಂದಿಗೂ ವಾಹನಗಳ ಓಡಾಡುವ ಮಾತಿರಲಿ, ನಡೆದುಕೊಂಡು ಹೋಗುವುದಕ್ಕೂ ರಸ್ತೆ ಅಥವಾ ತೂಗು ಸೇತುವೆ ಇಲ್ಲ. ಬದಲಾಗಿ ವರ್ಷದ ಏಳೆಂಟು ತಿಂಗಳ ಕಾಲ ತುಂಬಿ ಹರಿಯುವ ಕಾವೇರಿ ನದಿಯಲ್ಲೇ ನಡೆಯಬೇಕು. ಇಲ್ಲವೇ ಅರಣ್ಯ ಇಲಾಖೆ ಚಲಾಯಿಸುವ ಬೋಟುಗಳನ್ನು ಆಶ್ರಯಿಸಬೇಕು. 
 

24
ದುಬಾರೆ ಸಾಕಾನೆ ಶಿಬಿರ

ದುಬಾರೆ ಸಾಕಾನೆ ಶಿಬಿರ

ಆದರೆ ಸಂಜೆ ಆರು ಗಂಟೆಯಾಯಿತ್ತೆಂದರೆ ಈ ಬೋಟುಗಳು ಕೂಡ ಬಂದ್ ಆಗುತ್ತವೆ. ಅಲ್ಲಿಗೆ ಅವರು ಬದುಕನ್ನು ಸಂಪೂರ್ಣ ಜೈಲು ಬಂಧಿಗಳಂತೆ ಅನುಭವಿಸಬೇಕು. 40 ಕ್ಕೂ ಹೆಚ್ಚು ಕುಟುಂಬಗಳಿರುವ ಆದಿವಾಸಿ ಬುಡಕಟ್ಟು ಜನರು ಯಾವುದೇ ಅಗತ್ಯ ವಸ್ತುಗಳ ಕೊಳ್ಳಬೇಕಾದರೂ ನದಿಯನ್ನು ದಾಟಲೇಬೇಕು. ಅದೂ ಕೂಡ ರಾತ್ರಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾರೆಂದರೆ ಅಲ್ಲಿಗೆ ಮುಗಿದೇ ಹೋಯಿತು. ಬೆಳಗಾಗುವವರೆ ಈ ಹಾಡಿಯಲ್ಲೇ ನರಳಬೇಕು. ಇಲ್ಲವೆ 25 ಕಿಲೋ ಮೀಟರ್ ದೂರದಲ್ಲಿ ಇರುವ ಸಿದ್ದಾಪುರ ಅಥವಾ ಮಾಲ್ದಾರೆ ಭಾಗದ ಯಾರಿಗಾದರೂ ಕರೆ ಮಾಡಿ ಬಾಡಿಗೆಗೆ ವಾಹನ ಮಾಡಿಕೊಳ್ಳಬೇಕು. 

ಒಂದು ವೇಳೆ ವಾಹನವನ್ನು ಬಾಡಿಗೆಗೆ ಮಾಡಿಕೊಳ್ಳೋಣ ಎಂದರೂ ಆ ವಾಹನ ಮಾಲ್ದಾರೆಯ ದಟ್ಟಾರಣ್ಯದ ಕಾಡಿನೊಳಗೆ ಕಾಡು ದಾರಿಯಲ್ಲಿ ಬರಬೇಕು. ಹೀಗಾಗಿ ಯಾರೂ ಬಾಡಿಗೆಗೂ ಬರುವುದಿಲ್ಲ. ಇದರಿಂದ ಏನೇ ಆದರೂ ಬೆಳಿಗ್ಗೆ ಅರಣ್ಯ ಇಲಾಖೆಯ ಬೋಟುಗಳು ಚಾಲೂ ಆಗುವವರೆಗೆ ಸಾವು ಬದುಕಿನ ನಡುವೆ ಹೋರಾಡಲೇಬೇಕು. ಯಾರಾದರೂ ಗರ್ಭಿಣಿಯರಿದ್ದರೆ ಅಂತಹವರ ಕುಟುಂಬ ಪಡುವ ಪಾಡು ಅಷ್ಟಿಷ್ಟಲ್ಲಾ. ಇಲ್ಲಿ ಕಿರಿಯ ಪ್ರಾಥಮಿಕ ಶಾಲೆಯೊಂದಿದ್ದು ಹಾಡಿಯ ಬಹುತೇಕ ಮಕ್ಕಳು 5 ನೇ ತರಗತಿಯವರೆಗೆ ದುಬಾರೆಯಲ್ಲಿ ಶಾಲೆಗೆ ಹೋಗುತ್ತಾರೆ. ಐದನೇ ತರಗತಿ ಮುಗಿದ ಬಳಿಕ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ತೀರಾ ಕಡಿಮೆ. ಕಾರಣ ಆರನೇ ತರಗತಿಗೆ ಹೋಗಬೇಕೆಂದರೆ ನದಿಯನ್ನು ದಾಟಿ ನಂಜರಾಯಪಟ್ಟಣ ಶಾಲೆಗೆ ಹೋಗಬೇಕು. ಇದು ದುಸ್ಥರದ ಸಂಗತಿ. 
 

34
ದುಬಾರೆ ಸಾಕಾನೆ ಶಿಬಿರ

ದುಬಾರೆ ಸಾಕಾನೆ ಶಿಬಿರ

ಮಳೆಗಾಲದಲ್ಲಂತೂ ಕಾವೇರಿ ನದಿ ಭೋರ್ಗರೆದು ಅಪಾಯದ ಮಟ್ಟ ಮೀರಿ ಹರಿಯುವುದರಿಂದ ಅರಣ್ಯ ಇಲಾಖೆಯ ಬೋಟುಗಳು ಓಡಾಡುವುದಿಲ್ಲ. ಇದರಿಂದ ದುಬಾರೆಯಿಂದ ನಂಜರಾಯಪ್ಪಣದ ಶಾಲೆಗೆ ಹೋಗುವ ಹಾಡಿಯ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವೇ ಇಲ್ಲದಂತೆ ಆಗುತ್ತದೆ. ಹೀಗೆ ಸಮಸ್ಯೆಗಳಲ್ಲೇ  ಹಲವು ದಶಕಗಳಿಂದ ಬದುಕು ದೂಡುತ್ತಾ ತಮಗೂ ಒಂದು ತೂಗು ಸೇತುವೆಯನ್ನಾದರೂ ಮಾಡಿ ಎನ್ನುವ ಇವರ ಕೂಗಿಗೆ ಬೆಲೆ ಬಂದಿಲ್ಲ. 

44
ದುಬಾರೆ ಸಾಕಾನೆ ಶಿಬಿರ

ದುಬಾರೆ ಸಾಕಾನೆ ಶಿಬಿರ

ಕಳೆದ ಒಂದುವರೆ ದಶಕದ ಹಿಂದೆ ತೂಗು ಸೇತುವೆಯೊಂದನ್ನು ಮಾಡಲು ಸರ್ಕಾರ ಮುಂದಾಗಿತ್ತು. ಆದರೆ ಕೆಲವರ ಹಿತಾಸಕ್ತಿ ಆ ಸೇತುವೆಯನ್ನು ಗುಡ್ಡೆಹೊಸೂರು ಸಮೀಪದ ತೆಪ್ಪದಕಂಡಿಯಲ್ಲಿ ಮಾಡಿದರು. ಆದಾದ ಬಳಿಕ ದುಬಾರೆಗೂ ಒಂದು ತೂಗು ಸೇತುವೆ ಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇದ್ದರೂ ಅದನ್ನು ಮಾಡಿಲ್ಲ. ಇದೀಗ ಮಡಿಕೇರಿ ಶಾಸಕ ಮಂತರ್ ಗೌಡ ಅವರು ಮತ್ತೆ ಇಲ್ಲಿಗೆ ತೂಗು ಸೇತುವೆ ಮಾಡಲು ಸರ್ಕಾರಕ್ಕೆ ಯೋಜನಾ ವರದಿ ಸಲ್ಲಿಸಿದ್ದು, ಅದಕ್ಕೆ 7 ಕೋಟಿ ಅನುದಾನಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈಗಲಾದರೂ ಸರ್ಕಾರ ಕೂಡಲೇ ತೂಗು ಸೇತುವೆಯನ್ನು ಮಾಡಿ ನಮ್ಮವರ ಕಣ್ಣೀರಿಗೆ ಕೊನೆ ಆಡಿ ಎಂದು ಜನರು ಆಗ್ರಹಿಸುತ್ತಿದ್ದಾರೆ.

About the Author

SN
Suvarna News
ಕೊಡಗು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved