MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ದತ್ತಮಾಲಾ ಅಭಿಯಾನ ಇಂದು ಭಿಕ್ಷಾಟನೆ, ನಾಳೆ ದತ್ತ ಪಾದುಕೆ ದರ್ಶನ ಕಾಫಿನಾಡಲ್ಲಿ ಖಾಕಿ ಸರ್ಪಗಾವಲು!

ದತ್ತಮಾಲಾ ಅಭಿಯಾನ ಇಂದು ಭಿಕ್ಷಾಟನೆ, ನಾಳೆ ದತ್ತ ಪಾದುಕೆ ದರ್ಶನ ಕಾಫಿನಾಡಲ್ಲಿ ಖಾಕಿ ಸರ್ಪಗಾವಲು!

ದಕ್ಷಿಣ ಭಾರತದ ವಿವಾದಿತ ಕೇಂದ್ರ ಇನಾಂ ದತ್ತಾತ್ರೇಯ ಬಾಬಬುಡನ್ ಸ್ವಾಮಿ ದರ್ಗಾದಲ್ಲಿ ಶ್ರೀರಾಮಸೇನೆಯ 21 ನೇ ದತ್ತಮಾಲಾ ಅಭಿಯಾನಕ್ಕೆ ಕ್ಷಣಗಣನೆ ಅರಂಭವಾಗಿದೆ. ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು  

2 Min read
Suvarna News
Published : Nov 09 2024, 07:29 PM IST
Share this Photo Gallery
  • FB
  • TW
  • Linkdin
  • Whatsapp
14

ದತ್ತಪಾದುಕೆ ದರ್ಶನ ಮುನ್ನ ದಿನ ಚಿಕ್ಕಮಗಳೂರು ನಗರದಲ್ಲಿ ಮಾಲಾಧಾರಿಗಳು ಪಡಿ ಸಂಗ್ರಹಿಸಿದ್ರು. ನಗರದ ವಿಜಯಪುರ ಬಡಾವಣೆಯ ಅದಿಭೂತಪ್ಪ ದೇವಸ್ಥಾನದ ಬೀದಿಯಲ್ಲಿ ಮನೆ ಮನೆಗೆ ತೆರಳಿ ಬಿಕ್ಷಾಟನೆ ನಡೆಸಿದ್ರು.ಮನೆಗೆ ಅಗಮಿಸಿದ ಮಾಲಾಧಾರಿಗಳಿಗೆ ಅಕ್ಕಿ, ಬೆಲ್ಲ,ವಿಲೈದೆಲೆ, ಕಾಯಿಗಳನ್ನ ನೀಡಿದ್ರು..ದತ್ತಭಜೆಯೊಂದಿಗೆ ಹಲವು ಮನೆಗಳಿಗೆ ತೆರಳಿ ಪಡಿಸಂಗ್ರಹಿಸಿದ್ರು.ಈ ಪಡಿಯನ್ನ ಈರುಮುಡಿ ರೂಪದಲ್ಲಿ ನಾಳೆ ದತ್ತಪಾದುಕೆ ದರ್ಶನ ಪಡೆಯೋ ಸಮಯದಲ್ಲಿ ದತ್ತಾತ್ರೇಯ ಸ್ವಾಮಿಗೆ ಅರ್ಪಿಸಲಿದ್ದಾರೆ ಮಾಲಾಧಾರಿಗಳು.

24

ಖಾಕಿ ಸರ್ಪಗಾವಲು : 

 ಜಿಲ್ಲೆಯಾಧ್ಯಂತ ಖಾಕೀ ಪಡೆ ಹದ್ದಿನ ಕಣ್ಣಿಟ್ಟಿದೆ.ಸುಮಾರು 1800 ಕ್ಕೂ ಪೊಲೀಸರ ಸರ್ಪಗಾವಲಿನಲ್ಲಿ ದತ್ತಮಾಲಾ ಅಭಿಯಾನ ನಡೆಸಲು ಸಿದ್ದತೆ ಮಾಡಿಕೊಂಡಿದೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ.ಪ್ರತಿ ವಾಹನಗಳ ಮೇಲೆ ನಿಗಾ.ಪೆಟ್ರೋಲ್ ಬಂಕ್ ಗಳಲ್ಲಿ ಬಾಟಲಿಗೆ ಪೆಟ್ರೋಲ್ ನೀಡದಂತೆ ಖಡಕ್ ಸೂಚನೆ ನೀಡಿದೆ..ಓರ್ವ ಎಸ್ಪಿ, ಓರ್ವ ಎಎಸ್ಪಿ. 7 ಡಿವೈಎಸ್ಪಿ, 15 ಇನ್ಸೆಪಕ್ಟರ್ , 90ಪಿಎಸೈ, 1500 ಕಾನ್ಸ್ ಟೇಬಲ್, 8ಕೆ ಎಸ್ ಅರ್ ಪಿ ತುಕ್ಕಡಿ, 11  ಡಿ ಆರ್ ನಿಯೋಜಿಸಿದ್ದು ಇನ್ನೂ ಅವಶ್ಯಕತೆ ಇದ್ದಲ್ಲಿ ಮತ್ತಷ್ಟು ಸಿಬ್ಬಂದಿ ಹೊರ ಜಿಲ್ಲೆಯಿಂದ ಕರೆಸಿಕೊಳ್ಳಲು ಮುಂದಾಗಿದೆ.

34

ದತ್ತಮಾಲಾ ಅಭಿಯಾನದ ಹಿನ್ನೆಲೆ ಕನಿಷ್ಟ 5 ಮನೆಗಳಲ್ಲಾದರೂ ಪಡಿ ಸಂಗ್ರಹ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಈ ಬಾರಿಯೂ ಮಾಲಾಧಾರಿಗಳು ಹತ್ತಾರು ಮನೆಗಳಿಗೆ ಹೋಗಿ ಪಡಿ ಸಂಗ್ರಹಿಸಿದರು. ಪಡಿ ಸಂಗ್ರಹದ ವೇಳೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಗುರುಗಳಿಗೆ ಪ್ರಿಯವಾದ ಪಡಿ ಸಂಗ್ರಹಣೆಯನ್ನು ಇಂದು ಮಾಡುತ್ತಿದ್ದೇವೆ. ದತ್ತಮಾಲೆ ಧಾರಣೆ ಮಾಡಿದ ಬಳಿಕ ಭಿಕ್ಷಾಟನೆ ಮಾಡಿ, ಪಡಿ ಸಂಗ್ರಹಿಸಿದಾಗ ನಮ್ಮ ಮನಸ್ಸಿನಲ್ಲಿರುವ ಲೋಭ, ಅಹಂಕಾರವೆಲ್ಲವೂ ನಿವಾರಣೆಯಾಗುತ್ತದೆ ಎಂಬುದು ಗುರುಗಳ ಅಭಿಪ್ರಾಯ. ಹೀಗಾಗಿ ನಾವೂ ದತ್ತಮಾಲೆ ಧರಿಸಿ, ಪಡಿ ಸಂಗ್ರಹಣೆ ಮಾಡಿದ್ದೇವೆ ಎಂದರು. ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶ್ರೀರಾಮ ಸೇನೆ ಕಾರ್ಯಕರ್ತರು ಪಡಿ ಸಂಗ್ರಹಣೆ ಮಾಡಿದ್ದಾರೆ. ನಾಳೆ ದತ್ತಪೀಠದಲ್ಲಿ ವಿಶೇಷ ಹೋಮ-ಹವನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಶ್ರೀರಾಮಸೇನೆ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು. 

44

ಮಾದವಿ ಲತಾ, ಪ್ರತಾಪ್ ಸಿಂಹ, ಸಿ.ಟಿ ರವಿ ಭಾಗಿ.

ನಾಳೆ ಸಾವಿರಾರು ದತ್ತಮಾಲಾಧಾರಿಗಳು ನಗರದಲ್ಲಿ ಬೃಹತ್ ಶೋಭಾಯಾತ್ರೆ, ಧರ್ಮಸಭೆ ನಡೆಸಿ ಇರುಮುಡಿ ಹೊತ್ತು ದತ್ತಾತ್ರೇಯ ಹಾಗೂ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ದಾಖಲೆಗಳ ಪ್ರಕಾರ ದತ್ತಪೀಠ ಹಿಂದೂ ಪೀಠವೇ ಆಗಿದೆ. ದತ್ತಪೀಠವೇ ಬೇರೆ, ದರ್ಗಾವೇ ಬೇರೆ. ಶೀಘ್ರವೇ ದತ್ತಪೀಠವನ್ನು ಹಿಂದುಗಳ ಪೀಠವೆಂದು ಘೋಷಿಸಬೇಕೆಂದು ಮಾಲಾಧಾರಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕಳೆದ ಏಳು ದಿನಗಳಿಂದ ನಡೆಯುತ್ತಿರೋ ದತ್ತಮಾಲಾ ಅಭಿಯಾನಕ್ಕೆ ನಾಳೆ ಅಂತಿಮ ತೆರೆ ಬೀಳಲಿದೆ. ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಹೈದಾರಬಾದ್ ನ ಮಾದವಿ ಲತಾ, ಮಾಜಿ ಸಂಸದ ಪ್ರತಾಪ್ ಸಿಂಹ, ಸಿ.ಟಿ ರವಿ ಸೇರಿದಂತೆ ಸ್ವಾಮೀಜಿ ಗಳು ಭಾಗಿಯಾಗಲಿದ್ದಾರೆ. 

About the Author

SN
Suvarna News
ಚಿಕ್ಕಮಗಳೂರು
ಪ್ರತಾಪ್ ಸಿಂಹ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved