MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • Photos: 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!

Photos: 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!

ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅವರು ಆರು ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕಾಲೋನಿಗೆ ಆಗಮಿಸಿದ್ದು, ಕಾಲೋನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. 

2 Min read
Ravi Janekal
Published : Dec 12 2025, 06:08 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತದಿಂದಲೇ ನಮ್ಮ ಬೌದ್ಧ ಸಂಸ್ಕೃತಿ ಬೆಳೆಯುತ್ತ ಬಂದಿದೆ: ದಲಾಯಿ ಲಾಮಾ
Image Credit : Asianet News

ಭಾರತದಿಂದಲೇ ನಮ್ಮ ಬೌದ್ಧ ಸಂಸ್ಕೃತಿ ಬೆಳೆಯುತ್ತ ಬಂದಿದೆ: ದಲಾಯಿ ಲಾಮಾ

ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅವರು ಆರು ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕಾಲೋನಿಗೆ ಆಗಮಿಸಿದ್ದು, ಕಾಲೋನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಕ್ಯಾಂಪ್ ನಂ. 6ರ ಗೊಮಾಂಗ್ ಮೊನಾಸ್ಟರಿಯ ಕಾರ್ಯಕ್ರಮದಲ್ಲಿ ಬೌದ್ಧ ಭಿಕ್ಷುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಬೌದ್ಧ ಸಂಸ್ಕೃತಿಯು ನಮ್ಮ ಭಾರತ ದೇಶದಿಂದಲೇ ಬೆಳೆಯುತ್ತಾ ಬಂದಿದೆ.

26
ಮುಂಡಗೋಡದ ಟಿಬೆಟಿಯನ್ ಕಾಲೋನಿಯಲ್ಲಿ ಹಬ್ಬದ ವಾತಾವರಣ
Image Credit : Asianet News

ಮುಂಡಗೋಡದ ಟಿಬೆಟಿಯನ್ ಕಾಲೋನಿಯಲ್ಲಿ ಹಬ್ಬದ ವಾತಾವರಣ

ಇಡೀ ವಿಶ್ವದಲ್ಲಿ ಬೌದ್ಧ ಧರ್ಮದ ವಿಚಾರಗಳು ಹೆಚ್ಚು ಗಮನ ಸೆಳೆಯುತ್ತಿವೆ ಮತ್ತು ಚೀನಾದಲ್ಲಿಯೂ ಬೌದ್ಧ ಧರ್ಮದ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದರು. ಮುಂಡಗೋಡದ ಟಿಬೆಟಿಯನ್ ಕಾಲೋನಿಯಲ್ಲಿ ಬೌದ್ಧ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಚೆನ್ನಾಗಿ ಉಳಿಸಿಕೊಂಡು ಬಂದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟಿಬೆಟಿಯನ್ ಹಿರಿಯ ಬೌದ್ಧ ಭಿಕ್ಷುಗಳು ಗುರು ದಲಾಯಿ ಲಾಮಾ ಅವರಿಗೆ ಸನ್ಮಾನ ಮಾಡಿದರು.

Related Articles

Related image1
ಬೌದ್ಧ ಧರ್ಮವನ್ನು ಬೋಧಿಸುವ ಸ್ವಾತಂತ್ರ್ಯ ಭಾರತದಲ್ಲಿ ಮಾತ್ರವಿದೆ ಹೊರತು ಚೀನಾದಲ್ಲಿ ಅಲ್ಲ:ದಲೈ ಲಾಮಾ
Related image2
ನಮ್ಮ ಸಂಬಂಧಗಳಲ್ಲಿ ಟಿಬೆಟ್ ವಿಷಯ ಯಾವುತ್ತೂ ಮುಳ್ಳೆ, ದಲೈ ಲಾಮಾ ವಿಷಯ ನಿಮಗೆ ಬೇಡ: ಭಾರತಕ್ಕೆ ಚೀನಾ ಎಚ್ಚರಿಕೆ!
36
 130 ವರ್ಷಗಳ ಕಾಲ ಬಾಳಿ ಧರ್ಮ, ಜನ ಸೇವೆ ಮಾಡುವೆ ಎಂದ ದಲಾಯಿ ಲಾಮಾ
Image Credit : Asianet News

130 ವರ್ಷಗಳ ಕಾಲ ಬಾಳಿ ಧರ್ಮ, ಜನ ಸೇವೆ ಮಾಡುವೆ ಎಂದ ದಲಾಯಿ ಲಾಮಾ

ದಲಾಯಿ ಲಾಮಾ, ತಾವು 130 ವರ್ಷಗಳ ಕಾಲ ಬಾಳಿ ಧರ್ಮ ಹಾಗೂ ಜನರ ಸೇವೆ ಮಾಡುವುದಾಗಿ ತಿಳಿಸಿದರು. ಅವರ ಈ ಹೇಳಿಕೆಯನ್ನು ಕೇಳಿ ಅಲ್ಲಿ ನೆರೆದಿದ್ದ ಬೌದ್ಧ ಸನ್ಯಾಸಿಗಳು ಸಂತೋಷದಿಂದ ತಲೆಬಾಗಿ ಚಪ್ಪಾಳೆ ತಟ್ಟಿದರು. 

46
45 ದಿನಗಳ ಕಾಲ ಮುಂಡಗೋಡ ಟಿಬೆಟಿಯನ್ ಕ್ಯಾಂಪ್‌ ವಾಸ್ತವ್ಯ
Image Credit : Asianet News

45 ದಿನಗಳ ಕಾಲ ಮುಂಡಗೋಡ ಟಿಬೆಟಿಯನ್ ಕ್ಯಾಂಪ್‌ ವಾಸ್ತವ್ಯ

ದಲಾಯಿ ಲಾಮಾ ಅವರು ಮುಂಬರುವ 45 ದಿನಗಳ ಕಾಲ ಮುಂಡಗೋಡ ಟಿಬೆಟಿಯನ್ ಕ್ಯಾಂಪ್‌ನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಅವರು ಈ ಬಾರಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. 2019ರ ಡಿಸೆಂಬರ್ 12 ರಂದು ಆಗಮಿಸಿದ್ದಾಗ 12 ದಿನಗಳ ಕಾಲ ವಿವಿಧ ಚರ್ಚಾ ಕಾರ್ಯಕ್ರಮಗಳು ಮತ್ತು ಪದವಿ ಪ್ರದಾನದಲ್ಲಿ ಪಾಲ್ಗೊಂಡಿದ್ದರು. ಆದರೆ, ಈ 45 ದಿನಗಳ ವಾಸ್ತವ್ಯ ಕೇವಲ ವಿಶ್ರಾಂತಿಗಾಗಿ ಮಾತ್ರ ಎಂದು ತಿಳಿದುಬಂದಿದೆ.

56
ದಲಾಯಿ ಲಾಮಾ ಆಗಮನ ಹಿನ್ನೆಲೆ ಬಿಗಿ ಭದ್ರತೆ
Image Credit : Asianet News

ದಲಾಯಿ ಲಾಮಾ ಆಗಮನ ಹಿನ್ನೆಲೆ ಬಿಗಿ ಭದ್ರತೆ

ಟಿಬೆಟಿಯನ್ ಧರ್ಮಗುರು ಆಗಮನದ ಹಿನ್ನೆಲೆಯಲ್ಲಿ ಪೊಲೀಸರಿಂದ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸುಮಾರು 400 ಪೊಲೀಸರನ್ನು ನಿಯೋಜಿಸಲಾಗಿದ್ದು, ಟಿಬೆಟಿಯನ್ನರು ಸಹ ಲಾಮಾ ಅವರಿಗೆ ಸುರಕ್ಷತೆ ಒದಗಿಸುವಲ್ಲಿ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.

66
ಪಾಸ್ ಇದ್ದವರಿಗೆ ಮಾತ್ರ ಟಿಬೇಟಿಯನ್ ಕಾಲೋನಿ ಪ್ರವೇಶ
Image Credit : Asianet News

ಪಾಸ್ ಇದ್ದವರಿಗೆ ಮಾತ್ರ ಟಿಬೇಟಿಯನ್ ಕಾಲೋನಿ ಪ್ರವೇಶ

ಭದ್ರತೆಯ ದೃಷ್ಟಿಯಿಂದ, ಟಿಬೆಟಿಯನ್ ಕ್ಯಾಂಪ್‌ನ ಒಳಗಡೆ ತೆರಳುವ ಎಲ್ಲಾ ವಾಹನಗಳಿಗೆ ಪಾಸ್ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಜೊತೆಗೆ, ಪಾಸ್ ಹೊಂದಿರುವ ಸಾರ್ವಜನಿಕರಿಗೆ ಮಾತ್ರ ಟಿಬೆಟಿಯನ್ ಕಾಲೋನಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಮತ್ತು ಕ್ಯಾಂಪ್‌ನ ಎರಡು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಉತ್ತರ ಕನ್ನಡ
ದಲೈ ಲಾಮ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!
Recommended image2
ಸರ್ಕಾರಿ ಶಾಲೆಗಳ ಆಘಾತಕಾರಿ ಬೆಳವಣಿಗೆ, ಮಕ್ಕಳ ದಾಖಲಾತಿ 17 ಲಕ್ಷ ಕುಸಿತ ನಿಜವೆಂದು ಒಪ್ಪಿಕೊಂಡ ಸರ್ಕಾರ!
Recommended image3
ರೈತರಿಗೆ ಹೆಣ್ಣು ಸಿಗ್ತಿಲ್ಲ; ಬಾಸಿಂಗ ತೊಟ್ಟು, ತಾಂಬೂಲ ಹಿಡಿದು ಡಿಸಿ ಆಫೀಸಿಗೆ ಹೆಣ್ಣು ಕೇಳಲು ಬಂದ ಯುವಕರು!
Related Stories
Recommended image1
ಬೌದ್ಧ ಧರ್ಮವನ್ನು ಬೋಧಿಸುವ ಸ್ವಾತಂತ್ರ್ಯ ಭಾರತದಲ್ಲಿ ಮಾತ್ರವಿದೆ ಹೊರತು ಚೀನಾದಲ್ಲಿ ಅಲ್ಲ:ದಲೈ ಲಾಮಾ
Recommended image2
ನಮ್ಮ ಸಂಬಂಧಗಳಲ್ಲಿ ಟಿಬೆಟ್ ವಿಷಯ ಯಾವುತ್ತೂ ಮುಳ್ಳೆ, ದಲೈ ಲಾಮಾ ವಿಷಯ ನಿಮಗೆ ಬೇಡ: ಭಾರತಕ್ಕೆ ಚೀನಾ ಎಚ್ಚರಿಕೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved