ಲಾಕ್ಡೌನ್ ಎಫೆಕ್ಟ್: ಬಡವರ ಪರ ಧ್ವನಿ ಎತ್ತಲು ಕಾಂಗ್ರೆಸ್ನಿಂದ ಆನ್ಲೈನ್ ಅಭಿಯಾನ
ಬೆಂಗಳೂರು(ಮೇ.28): ಮಹಾಮಾರಿ ಕೊರೋನಾ ವೈರಸ್ ಹಾವಳಿಯಿಂದ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದೆ. ಇದರಿಂದ ದೇಶದ ಜನತೆ ಬಹಳಷ್ಟು ಕಷ್ಟ, ನಷ್ಟಗಳನ್ನ ಅನುಭವಿಸಿದ್ದಾರೆ. ಅದರಲ್ಲೂ ಬಡ ಜನರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಇನ್ನಿಲ್ಲದ ತೊಂದರೆಗಳನ್ನ ಎದುರಿಸಿದ್ದಾರೆ. ಹೀಗಾಗಿ ಜನರ ಪರ ಧ್ವನಿ ಎತ್ತಲು ಕಾಂಗ್ರೆಸ್ ಆನ್ಲೈನ್ ಅಭಿಯಾನ ಆರಂಭಿಸಿದೆ.
ಜನರ ಪರ ಧ್ವನಿ ಎತ್ತಲು ಕಾಂಗ್ರೆಸ್ನಿಂದ ಆನ್ಲೈನ್ ಅಭಿಯಾನ
ಇಂದು(ಗುರುವಾರ) ಬೆಳಿಗ್ಗೆ 11 ಗಂಟೆಗೆ ಆನ್ಲೈನ್ ಅಭಿಯಾನ ನಡೆಸಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ದೇಶದ ಎಲ್ಲಾ ಬಡವರಿಗೆ ಕೇಂದ್ರ ಸರ್ಕಾರದಿಂದ 10000 ರು. ವರ್ಗಾವಣೆಗೆ ಆಗ್ರಹಿಸಿ ಅಭಿಯಾನ
ನರೇಗಾ ಅಡಿ ವಾರ್ಷಿಕ 200 ದಿನ ಹೆಚ್ಚುವರಿ ಕೆಲಸ ನೀಡಲು ಸಿದ್ದರಾಮಯ್ಯ ಒತ್ತಾಯ
ಸಣ್ಣ ವ್ಯವಹಾರಗಳಿಗೆ ಸಾಲ ಬೇಡ, ಆರ್ಥಿಕ ನೆರವು ನೀಡಲು ಆಗ್ರಹ
ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ
ಲಾಕ್ಡೌನ್ನಿಂದ ಸಂಕಷ್ಟಗೀಡಾದ ಬಡವರ ಪರ ನಿಂತ ಕಾಂಗ್ರೆಸ್ ಪಕ್ಷ