MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಬೆಂಗಳೂರು ದರೋಡೆ ಕೇಸ್: ಹೊಸಕೋಟೆ ಕೆರೆ ಬಳಿ ಹಣ ಇರಿಸಿ ಎಸ್ಕೇಪ್ ಆಗಿತ್ತು ಗ್ಯಾಂಗ್!

ಬೆಂಗಳೂರು ದರೋಡೆ ಕೇಸ್: ಹೊಸಕೋಟೆ ಕೆರೆ ಬಳಿ ಹಣ ಇರಿಸಿ ಎಸ್ಕೇಪ್ ಆಗಿತ್ತು ಗ್ಯಾಂಗ್!

ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ, ಕದ್ದ ಹಣವನ್ನು ಹೊಸಕೋಟೆಯ ಪಾಳು ಮನೆಯಲ್ಲಿ ಬಚ್ಚಿಡಲಾಗಿತ್ತು. ಸಿಎಂಎಸ್ ಉದ್ಯೋಗಿ ಹಾಗೂ ನಿರುದ್ಯೋಗಿ ಯುವಕರ ಜೊತೆ ಸೇರಿ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಅಣ್ಣಪ್ಪನೇ ಈ ದರೋಡೆಯ ಸೂತ್ರಧಾರಿಯಾಗಿದ್ದನು.

1 Min read
Mahmad Rafik
Published : Nov 23 2025, 11:38 AM IST
Share this Photo Gallery
  • FB
  • TW
  • Linkdin
  • Whatsapp
15
ಹೊಸಕೋಟೆಯಲ್ಲಿತ್ತು ಹಣ
Image Credit : Asianet News

ಹೊಸಕೋಟೆಯಲ್ಲಿತ್ತು ಹಣ

ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದ ಮಾಹಿತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಹೊಸಕೋಟೆ ಕೆರೆ ಬಳಿಯಲ್ಲಿ ಹಣ ತುಂಬಿಸಲಾಗುವ ಪೆಟ್ಟಿಗೆಗಳನ್ನು ಎಸೆಯಲಾಗಿತ್ತು. ಹಣವನ್ನು ಹೊಸಕೋಟೆ ಬಳಿ ಪಾಳು ಮನೆಯಲ್ಲಿ ಇರಿಸಲಾಗಿತ್ತು. ಅನುಮಾನದ ಮೇಲೆ ಮನೆ ಬಳಿ ಹೋಗಿ ಬಾಗಿಲು ತೆರೆದು ನೋಡಿದಾಗ ಹಣ ಸಿಕ್ಕಿದೆ.

25
ಚಿತ್ತೂರಿನತ್ತ ಪ್ರಯಾಣ
Image Credit : Asianet News

ಚಿತ್ತೂರಿನತ್ತ ಪ್ರಯಾಣ

ಕಾರ್ ತೆಗೆದುಕೊಂಡು ಹೊಸಕೋಟೆ ಟೋಲ್‌ಗೆ ಹೋಗದೇ ಕೆರೆ ಬಳಿ ಹೋಗಿದ್ದರು. ಕೆರೆ ಬಳಿ ಹಣ ಬಚ್ಚಿಟ್ಟ ಗ್ಯಾಂಗ್ ಚಿತ್ತೂರು ಕಡೆ ಹೋಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹೊಸಕೋಟೆಯ ಪಾಳು ಮನೆಯಲ್ಲಿ ಹಣ ಇಟ್ಟಿರೋದಾಗಿ ಬಾಯಿ ಬಿಟ್ಟಿದ್ದರು.

Related Articles

Related image1
ಬೆಂಗಳೂರು: ರಾಬರಿ ಪ್ರಕರಣ, ಹೈದರಾಬಾದ್‌ನಲ್ಲಿ ಮತ್ತೆ ಮೂವರ ಬಂಧನ, ಹೇಗಿತ್ತು ಗೊತ್ತಾ ದರೋಡೆಗೆ ಸ್ಕೆಚ್?
Related image2
ಬೆಂಗಳೂರು ದರೋಡೆ: ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ಸವಾಲಾಗಿದ್ದ ಅಂಶವೇನು?
35
ಕೆಲಸವಿಲ್ಲದೇ ಕುಳಿತಿದ್ದ ಗ್ಯಾಂಗ್
Image Credit : Asianet News

ಕೆಲಸವಿಲ್ಲದೇ ಕುಳಿತಿದ್ದ ಗ್ಯಾಂಗ್

ದರೋಡೆ ಗುಂಪಿನಲ್ಲಿದ್ದ ಬಹುತೇಕರಿಗೆ ಕೆಲಸವೇ ಇರಲಿಲ್ಲ. ಸಿಎಂಎಸ್ ಉದ್ಯೋಗಿಯಾಗಿದ್ದ ಗೋಪಿಗೆ ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಸಿಗುತ್ತಿತ್ತು. ದಿನನಿತ್ಯ ಕೋಟಿ ಕೋಟಿ ಹಣ ನೋಡುತ್ತಿದ್ದ ಗೋಪಿಗೆ, ಹೇಗಾದ್ರು ಮಾಡಿ ಒಂದಿಷ್ಟು ಹಣ ಲಪಟಾಯಿಸಬೇಕೆಂಬ ದುರಾಸೆ ಬಂದಿತ್ತು. ಎಟಿಎಂ ಹಣ ಸಾಗಣೆ ವಿಚಾರ ತಿಳಿದಿದ್ದ ಗೋಪಿ ಮತ್ತು ಕ್ಸೇವಿಯರ್ ಜೊತೆಯಾಗಿ ದರೋಡೆಗೆ ಪ್ಲಾನ್ ಮಾಡುವಂತೆ ಕಾನ್ಸ್‌ಟೇಬಲ್‌ ಅಣ್ಣಪ್ಪನಿಗೆ ಹೇಳಿದ್ದರು.

45
ಅಣ್ಣಪ್ಪ ಪವರ್ ಸೆಂಟರ್
Image Credit : Asianet News

ಅಣ್ಣಪ್ಪ ಪವರ್ ಸೆಂಟರ್

ಬರೋಬ್ಬರಿ 15 ದಿನ ತೆಗೆದುಕೊಂಡು ದರೋಡೆಗೆ ಕಾನ್ಸ್‌ಟೇಬಲ್‌ ಅಣ್ಣಪ್ಪ ಪ್ಲಾನ್ ಮಾಡಿದ್ದನು. ಕೆಲಸವಿಲ್ಲದ ಕುಳಿತಿದ್ದ ರವಿ, ರಾಕೇಶ್, ನವೀನ್ ದರೋಡೆ ಮಾಡಲು ಸೇರಿಕೊಂಡಿದ್ದರು. ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ದರೋಡೆ ಗ್ಯಾಂಗ್‌ನ ಪವರ್ ಸೆಂಟರ್ ಆಗಿದ್ದನು. ಪೊಲೀಸ್ ನಮ್ಮ ಜೊತೆಯಲ್ಲಿಯೇ ಇದ್ದಾನೆ ಎಂದು ದರೋಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಪಕ್ಕಾ ಪ್ಲಾನ್ ಇದೆ, ಸಿಕ್ಕಿ ಬಿಳಲ್ಲ ಅಂತಾ ದರೋಡೆ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರು 7 ಕೋಟಿ ದರೋಡೆ: ರಿಕವರಿಯಾದ ಹಣವನ್ನು ಸೂಟ್‌ಕೇಸ್, ಗೋಣಿಚೀಲ, ಬಟ್ಟೆಯಲ್ಲಿ ಕಮಿಷನರ್ ಕಚೇರಿಗೆ ತಂದ ಪೊಲೀಸರು

55
ಹಾವೇರಿ ಜಿಲ್ಲೆ ಮೂಲದವನು ಅಣ್ಣಪ್ಪ
Image Credit : Asianet News

ಹಾವೇರಿ ಜಿಲ್ಲೆ ಮೂಲದವನು ಅಣ್ಣಪ್ಪ

2018ರಲ್ಲಿ ಪೊಲೀಸ್ ಇಲಾಖೆಗೆ ಹಾವೇರಿ ಜಿಲ್ಲೆ ವೀರಾಪುರ ತಾಲೂಕಿನ ಹಳೇ ವೀರಾಪುರ ಗ್ರಾಮದ ಅಣ್ಣಪ್ಪ ನಾಯಕ್‌ ಸೇರಿದ್ದ. ಮೊದಲು ಬಾಣಸವಾಡಿ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಆತ, ಕಳೆದ ಒಂದೂವರೆ ವರ್ಷದಿಂದ ಗೋವಿಂದಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ವೃತ್ತಿ ಜೀವನದಲ್ಲಿ ಅಣ್ಣಪ್ಪ ನಾಯಕ್ ಹಿನ್ನೆಲೆ ಉತ್ತಮವಾಗಿರಲಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ದರೋಡೆ, ಕಾರು ಅಡ್ಡಗಟ್ಟಿ 1.2 ಕೆಜಿ ಚಿನ್ನ ದೋಚಿದ ಖದೀಮರು!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ದರೋಡೆ
ಕರ್ನಾಟಕ ಸುದ್ದಿ
Latest Videos
Recommended Stories
Recommended image1
ಉಗ್ರರು ಗುಂಡಿನ ದಾಳಿ ನಡೆಸಿದ್ದ ಪೆಹಲ್ಗಾಂನಲ್ಲೇ ಕರ್ನಾಟಕ ರಾಜ್ಯೋತ್ಸವ ಆಚರಣೆ!
Recommended image2
ಖರ್ಗೆ-ಸಿದ್ದು ರಹಸ್ಯ ಮಾತುಕತೆ: ನಾಯಕತ್ವ ಬದಲಾವಣೆಗೆ ತೆರೆ ಬೀಳುತ್ತಾ?
Recommended image3
ಜಾತಿ ಸಂಕೋಲೆ ಮುರಿದ ಪ್ರೇಮ: ಸದ್ದಿಲ್ಲದ ಸಾಮಾಜಿಕ ಕ್ರಾಂತಿ, ಅಸ್ಪೃಶ್ಯತೆ ನಿವಾರಿಸುವತ್ತ ಮಂಗಳಸೂತ್ರ!
Related Stories
Recommended image1
ಬೆಂಗಳೂರು: ರಾಬರಿ ಪ್ರಕರಣ, ಹೈದರಾಬಾದ್‌ನಲ್ಲಿ ಮತ್ತೆ ಮೂವರ ಬಂಧನ, ಹೇಗಿತ್ತು ಗೊತ್ತಾ ದರೋಡೆಗೆ ಸ್ಕೆಚ್?
Recommended image2
ಬೆಂಗಳೂರು ದರೋಡೆ: ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ಸವಾಲಾಗಿದ್ದ ಅಂಶವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved