MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth

ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth

'ಸಪ್ತ ಸಾಗರದಾಚೆ ಎಲ್ಲೋ' ಮತ್ತು 'ಕಾಂತಾರ' ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಟಿ ರುಕ್ಮಿಣಿ ವಸಂತ್, ತಮ್ಮ ಯಶಸ್ಸಿನ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ದೇವಸ್ಥಾನವೇ ತಮ್ಮ ವೃತ್ತಿಜೀವನದ ಯಶಸ್ಸಿಗೆ ಕಾರಣ ಎಂದು ಅವರು ಬಹಿರಂಗಪಡಿಸಿದ್ದಾರೆ.

1 Min read
Author : Suchethana D
Published : Feb 10 2026, 05:02 PM IST
Share this Photo Gallery
  • FB
  • TW
  • Linkdin
  • Whatsapp
16
'ಸಪ್ತ ಸಾಗರದಾಚೆ ಎಲ್ಲೋ' ನಟಿ
Image Credit : our own

'ಸಪ್ತ ಸಾಗರದಾಚೆ ಎಲ್ಲೋ' ನಟಿ

ಕಾಂತಾರಾ ಚಾಪ್ಟರ್​-1 ಮೂಲಕ ಕನಕವತಿಯಾಗಿ ಮಿಂಚಿರುವ ನಟಿ ರುಕ್ಮಿಣಿ ವಸಂತ್​ ಅವರು ಸಕತ್​ ಫೇಮಸ್​ ಆಗಿದ್ದು, ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಮತ್ತು ಬಿ ಸಿನಿಮಾಗಳ ಮೂಲಕ.

26
2019ರಿಂದ ಸಿನಿ ಪಯಣ
Image Credit : Instagram

2019ರಿಂದ ಸಿನಿ ಪಯಣ

1994ರಲ್ಲಿ ಜನಿಸಿರುವ ನಟಿ ರುಕ್ಮಿಣಿ ಅವರಿಗೆ ಈಗ 32 ವರ್ಷ ವಯಸ್ಸು. ಅಶೋಕ ಚಕ್ರ ಪಡೆದ ಕರ್ನಲ್​ ವಸಂತ್​ ವೇಣುಗೋಪಾಲ ಅವರ ಪುತ್ರಿ ರುಕ್ಮಿಣಿ ಅವರಿಗೆ ಬಣ್ಣದ ಲೋಕ ಕೈಬೀಸಿ ಕರೆದದ್ದು, 2019ರಲ್ಲಿ ಬಿಡುಗಡೆಯಾದ ಬೀರಬಲ್ ಟ್ರೈಲಾಜಿ ಪ್ರಕರಣ 1.

Related Articles

Related image1
Bigg Boss ನಮ್ರತಾ ಗೌಡ- ಕಾರ್ತಿಕ್​ ಮಹೇಶ್​ ಮದ್ವೆಗೆ ಸಂಗೀತಾ ಶೃಂಗೇರಿ ಗ್ರೀನ್ ಸಿಗ್ನಲ್​: ನಟಿ ಹೇಳಿದ್ದೇನು?
Related image2
ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​: 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?
36
ಹೆಸರು ತಂದುಕೊಟ್ಟ ಚಿತ್ರ
Image Credit : Google

ಹೆಸರು ತಂದುಕೊಟ್ಟ ಚಿತ್ರ

ಆದರೆ ಅವರ ಕೈಹಿಡಿದದ್ದು 2023ರಲ್ಲಿ ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಮತ್ತು ಅದೇ ವರ್ಷ ಬಿಡುಗಡೆಯಾದ ಸೈಡ್​-ಬಿನಲ್ಲಿ ಪ್ರಿಯಾ ಪಾತ್ರದಲ್ಲಿ ಮಿಂಚಿದಾಗ. ಇದೇ ಸಾಲಿನಲ್ಲಿ ಬಾನ ದಾರಿಯಲ್ಲಿ ಅವರು ನಟಿಸಿದ್ದರೂ, ಅವರಿಗೆ ಸಕತ್​ ಹೆಸರು ತಂದುಕೊಟ್ಟಿದ್ದು ಮಾತ್ರ ಸಪ್ತ ಸಾಗರದಾಚೆ ಎಲ್ಲೋ ಚಿತ್ರ.

46
ಕನಕವತಿಯಾಗಿ ಮಿಂಚಿಂಗ್​
Image Credit : X

ಕನಕವತಿಯಾಗಿ ಮಿಂಚಿಂಗ್​

ಇದಾದ ಬಳಿಕ ಬಘೀರ್​, ಭೈರತಿ ರಣಗಲ್​ನಲ್ಲಿ ನಟಿಸಿದರೂ, ಅವರನ್ನು ಪ್ಯಾನ್​ ಇಂಡಿಯಾ ಮೀರಿದ ನಟಿಯನ್ನಾಗಿಸಿದ್ದು ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಚಾಪ್ಟರ್​-1 ಕನಕವತಿ ರೋಲ್​.

56
ಬೆಂಗಳೂರಿನ ದೇಗುಲ
Image Credit : our own

ಬೆಂಗಳೂರಿನ ದೇಗುಲ

ತಮ್ಮ ಈ ಎಲ್ಲಾ ಯಶಸ್ಸನ್ನು ಅವರು ಬೆಂಗಳೂರಿನ ದೇವಾಲಯವೊಂದಕ್ಕೆ ಸಮರ್ಪಿಸಿದ್ದಾರೆ. Rapid Rashi ಯುಟ್ಯೂಬ್​ ಚಾನೆಲ್​ ಜೊತೆ ಮಾತನಾಡಿರುವ ರುಕ್ಮಿಣಿ ವಸಂತ್​ ( Rukmini Vasanth) ಅವರು, ತಮ್ಮನ್ನು ಕೈಹಿಡಿದಿರುವ ಎರಡು ದೇವಸ್ಥಾನಗಳ ಪರಿಚಯವನ್ನು ಮಾಡಿಸಿದ್ದಾರೆ.

66
ಗಾಳಿ ಆಂಜನೇಯ ದೇವಸ್ಥಾನ
Image Credit : Instagram

ಗಾಳಿ ಆಂಜನೇಯ ದೇವಸ್ಥಾನ

ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ನನಗೆ ತುಂಬಾ ಶಾಂತಿ ಸಿಗುತ್ತದೆ. ಆದರೆ ನನ್ನನ್ನು ಕೈಹಿಡಿದು ನಡೆಸಿದ್ದು, ಮೈಸೂರು ರಸ್ತೆಯಲ್ಲಿ ಇರುವ ಗಾಳಿ ಆಂಜನೇಯ ದೇವಸ್ಥಾನ ಎಂದು ಹೇಳಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಬಹುತೇಕ ಶೂಟಿಂಗ್​ ಇಲ್ಲಿಯೇ ಹತ್ತಿರದಲ್ಲಿ ನಡೆದದ್ದರಿಂದ ತುಂಬಾ ಸಲ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ. ದಿನವೂ ಬೆಳಿಗ್ಗೆ ಇಲ್ಲಿಂದಲೇ ನನ್ನ ಪಯಣ ಶುರುವಾಗುತ್ತಿತ್ತು. ಈ ದೇವಸ್ಥಾನ ನನಗೆ ತುಂಬಾ ಕೊಟ್ಟಿದೆ ಎಂದು ಯಶಸ್ಸಿನ ಬಗ್ಗೆ ತಿಳಿಸಿದ್ದಾರೆ ನಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರುಕ್ಮಿಣಿ ವಸಂತ್
ಕಾಂತಾರ ಚಲನಚಿತ್ರ
ಸ್ಯಾಂಡಲ್ವುಡ್ ಫಿಲ್ಮ್
ನಟಿ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಗಿಲ್ಲಿ ಪ್ರಾಪರ್ಟಿ ಕಾಮಿಡಿ ದಾಸನಿಗೆ ಬಲು ಇಷ್ಟವಂತೆ! ಆ ಕನಸು ಈಡೇರುತ್ತಾ?
Recommended image2
ದೊಡ್ಮನೆ ಸಂಪ್ರದಾಯದ ಹಾದಿ ಹಿಡಿದ ಮನ ಮೆಚ್ಚಿದ ಹುಡುಗಿ, ಕೆಎಂಎಫ್‌ ನಂದಿನಿಗೆ ಸುಧಾರಾಣಿ ರಾಯಭಾರಿ!
Recommended image3
Sabarimala Gold Theft: ಶಬರಿಮಲೆಯ ಚಿನ್ನ ಕಳ್ಳತನದಲ್ಲಿ ಕಾಂತಾರ ಸಿನಿಮಾ ನಟನಿಗೆ ನೋಟೀಸ್!
Related Stories
Recommended image1
Bigg Boss ನಮ್ರತಾ ಗೌಡ- ಕಾರ್ತಿಕ್​ ಮಹೇಶ್​ ಮದ್ವೆಗೆ ಸಂಗೀತಾ ಶೃಂಗೇರಿ ಗ್ರೀನ್ ಸಿಗ್ನಲ್​: ನಟಿ ಹೇಳಿದ್ದೇನು?
Recommended image2
ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​: 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved