MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಪರಂವಃ ಸ್ಟುಡಿಯೋ ನಿರ್ಮಾಣದಲ್ಲಿ ವಿಹಾನ್‌; ಚಂದ್ರಜಿತ್‌ ನಿರ್ದೇಶನ, ಅಂಕಿತಾ ಅಮರ್‌ ನಾಯಕಿ!

ಪರಂವಃ ಸ್ಟುಡಿಯೋ ನಿರ್ಮಾಣದಲ್ಲಿ ವಿಹಾನ್‌; ಚಂದ್ರಜಿತ್‌ ನಿರ್ದೇಶನ, ಅಂಕಿತಾ ಅಮರ್‌ ನಾಯಕಿ!

ಪರಂವಃ  ತಂಡದ ಜೊತೆ ಕೈ ಜೋಡಿಸಿದ ವಿಹಾನ್. ಆಕ್ಷನ್ ಕಟ್ ಹೇಳಲು ಸಜ್ಜಾದ ಚಂದ್ರಜಿತ್...

1 Min read
Vaishnavi Chandrashekar
Published : Jul 18 2022, 10:12 AM IST
Share this Photo Gallery
  • FB
  • TW
  • Linkdin
  • Whatsapp
17

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಸಾರಥ್ಯದಲ್ಲಿ ಪರಂವಃ ಸ್ಟುಡಿಯೋ ಮತ್ತೊಂದು ಚಿತ್ರವನ್ನು ಘೋಷಣೆ ಮಾಡಿದೆ. ಈ ಚಿತ್ರಕ್ಕೆ ವಿಹಾನ್‌ ನಾಯಕನಾಗಿ, ಅಂಕಿತಾ ಅಮರ್‌ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. 

27

ಚಂದ್ರಜಿತ್‌ ಬೆಳ್ಳಿಯಪ್ಪ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಆಗಸ್ಟ್‌ ತಿಂಗಳಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಹಾಗೂ ಸೆಪ್ಟೆಂಬರ್‌ನಲ್ಲಿ ಶೂಟಿಂಗ್‌ ಚಿತ್ರೀಕರಣ ಶುರುವಾಗಲಿದೆ.

37

ಈ ಹಿಂದೆ ‘ಕಾಲ್‌ ಕೆಜಿ ಪ್ರೀತಿ’, ‘ಪಂಚತಂತ್ರ’ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿ, ‘ಲೆಗೆಸಿ’ ಚಿತ್ರದಲ್ಲಿ ಮಾಸ್‌ ಹೀರೋ ಆಗಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಕೊಂಡ ವಿಹಾನ್‌ ಅವರಿಗೆ ಈಗ ರಕ್ಷಿತ್‌ ಶೆಟ್ಟಿಅವರ ಪರಂವಃ ಸ್ಟುಡಿಯೋ ಸಾಥ್‌ ನೀಡುತ್ತಿದೆ. 

47

ರೋಮ್ಯಾಂಟಿಕ್‌ ಹಾಗೂ ಡ್ರಾಮಾ ಶೈಲಿಯ ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳು ಈಗಾಗಲೇ ಆರಂಭವಾಗಿವೆ. ಕಾಲೇಜ್‌ ವಿದ್ಯಾರ್ಥಿ, ಕ್ರಿಕೆಟ್‌ ಆಟಗಾರ ಹಾಗೂ ಉದ್ಯಮಿ ಹೀಗೆ ಮೂರು ಹಂತಗಳಲ್ಲಿ ಚಿತ್ರದ ನಾಯಕನ ಪಾತ್ರವನ್ನು ನಿರ್ದೇಶಕರು ರೂಪಿಸಿದ್ದಾರೆ.

57

ಇನ್ನೂ ರಕ್ಷಿತ್‌ ಶೆಟ್ಟಿಅವರ ಸೆವೆನ್‌ ಆಡ್‌್ಸ ಟೀಮ್‌ನಲ್ಲಿ ಬರಹಗಾರನಾಗಿ ಗುರುತಿಸಿಕೊಂಡಿರುವ ಚಂದ್ರಜಿತ್‌ ಬೆಳ್ಳಿಯಪ್ಪ ಅವರು ಈ ಹಿಂದೆ ರಿಷಬ್‌ ಶೆಟ್ಟಿಅವರ ‘ಕಥಾಸಂಗಮ’ ಚಿತ್ರದಲ್ಲಿ ‘ರೈನ್‌ಬೋ ಲ್ಯಾಂಡ್‌’ ಕತೆಯನ್ನು ನಿರ್ದೇಶಿಸಿದ್ದರು.

67

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಪ್ರತಿಭಾವಂತರು. ‘ನಾಯಕನಿಗೆ ಇಲ್ಲಿ ಮೂರು ಹಂತದ ಪಾತ್ರಗಳಿವೆ. ಈ ಮೂರು ರೀತಿಯ ಕಾಲಘಟ್ಟಕ್ಕೆ ವಿಹಾನ್‌ ಅವರು ಸೂಕ್ತವಾಗುತ್ತಾರೆ.'

77

'ಹೀಗಾಗಿ ನಮ್ಮ ಚಿತ್ರದ ನಾಯಕನ ಪಾತ್ರಕ್ಕೆ ವಿಹಾನ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ. ಅಮೆರಿಕದ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್‌ ಸೆಲ್ವರಾಜನ್‌ ಅವರೇ ಈ ಚಿತ್ರಕ್ಕೂ ಕ್ಯಾಮೆರಾ ಹಿಡಿಯಲಿದ್ದಾರೆ. ಗಗನ್‌ ಬದೇರಿಯಾ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved