ಪ್ರತ್ಯಕ್ಷರಾದ ರಮ್ಯಾಗೆ ಎಂಪಿ ರೇಣುಕಾಚಾರ್ಯ ಕೇಳಿದ ಒಂದೇ ಒಂದು ಪ್ರಶ್ನೆ!
ಬೆಂಗಳೂರು(ಏ. 12) ಕಣ್ಮರೆಯಾಗಿದ್ದ ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. 10 ತಿಂಗಳ ನಂತರ ಅವರ ಟ್ವಿಟರ್ ಖಾತೆ ಆಕ್ಟಿವೇಟ್ ಆಗಿದೆ. ಕೊರೋನಾ ಹಾವಳಿ ಸಂದರ್ಭ ರಮ್ಯಾ ಹೇಗೆ ನಡೆದುಕೊಳ್ಳುತ್ತಾರೆ ಎಂದು ನೆಟ್ಟಿಗರು ಪ್ರಶ್ನೆ ಸಹ ಮಾಡ್ತಿದ್ದಾರೆ. ಇದೆಲ್ಲದರ ನಡುವೆ ಶಾಸಕ ಎಂಪಿ ರೇಣುಕಾಚಾರ್ಯ ಸಹ ರಮ್ಯಾ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ರಮ್ಯಾ ಕೊನೆಯದಾಗಿ ಟ್ವೀಟ್ ಮಾಡಿದ್ದರು.
ಕೊರೋನಾ ವಿರುದ್ಧದ ಹೋರಾಟದಲ್ಲಿ ರಮ್ಯಾ ನಡೆ ಏನಿರುತ್ತದೆ ಎಂಬುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.
ರಮ್ಯಾ ಅವರು ವಿದೇಶದಲ್ಲಿದ್ದಾರೆ, ಮದುವೆ ಆಗ್ತಿದ್ದಾರಂತೆ ಎಂಬ ಸುದ್ದಿಯೂ ಹರಿದಾಡಿತ್ತು.
ರಮ್ಯಾ ಟ್ಟಿಟ್ಟರ್ ಅಕೌಂಟ್ ಕೂಡ ಡಿಸೇಬಲ್ ಆಗಿತ್ತು.
ಸುಮಾರು ವರ್ಷಗಳ ಕಾಲ ಸ್ಯಾಂಡಲ್ ವುಡ್ ನಂಬರ್ 1 ನಟಿಯಾಗಿ ಮೆರೆದವರು ರಮ್ಯಾ
ರಮ್ಯಾ ದಿವ್ಯಸ್ಪಂದನ ಬಹಳ ದಿನ ಕಣ್ಮರೆಯಾಗಿದ್ದರು. ಸದ್ದಿಲ್ಲದೆ ಮತ್ತೆ ತಮ್ಮ ಟ್ವಿಟರ್ ಖಾತೆಯನ್ನ ಆಕ್ಟೀವ್ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಾದರೂ ಮೋದಿಜಿ ಕ್ರಮಗಳನ್ನು ಪ್ರಶಂಸೆ ಮಾಡುತ್ತಾರೆಯೇ ನೋಡೋಣ ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಆಗಾಗ ಟ್ರೋಲ್ ಗೆ ಗುರಿಯಾಗುತ್ತಿದ್ದರು.
ಉಪಚುನಾವಣೆ ಸಂದರ್ಭ ಮಂಡ್ಯದಿಂದ ಎಂಪಿಯಾಗಿ ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಮಂಡ್ಯದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು.
ರಮ್ಯಾ ಟ್ವೀಟ್ ಮಾಡಿದರೆ ಹಲವುಸಾರಿ ವಿವಾದ ಎದ್ದ ಉದಾಹರಣೆ ಇದೆ.
ರಮ್ಯಾ ಭಾರತದಲ್ಲಿ ಇಲ್ಲ ಎಂದು ಹೇಳಲಾಗಿದ್ದರೂ ಈಗ ಅವರ ಟ್ವೀಟ್ ಖಾತೆ ಆಕ್ಟೀವ್ ಆಗಿದೆ.