ಮದ್ವೆ ಮಾತುಕತೆ ಮುಗಿಸಿದ ಡಿಕೆಶಿ-ಕೃಷ್ಣ ಕುಟುಂಬ: ಹಾರ ಬದಲಾಯಿಸಿಕೊಂಡ ಅಮರ್ಥ್ಯ-ಐಶ್ವರ್ಯ
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ ತಾಂಬೂಲ ಶಾಸ್ತ್ರ ಕಾರ್ಯಕ್ರಮ ನೆರವೇರಿಸಿತ್ತು. ಆ ಮೂಲಕ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಎಸ್ಎಂಕೆ ಅಳಿಯ, ದಿವಂಗತ ಉದ್ಯಮಿ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಅವರ ವಿವಾಹಕ್ಕೆ ಮುನ್ನುಡಿ ಬರೆಯಲಾಗಿತ್ತು. ವಿವಾಹ ಸಂಪ್ರದಾಯದ ಮುಂದುವರೆದ ಭಾಗವಾಗಿ ಇಂದು (ಸೋಮವಾರ) ಸದಾಶಿವನರದಲ್ಲಿರುವ ಡಿಕೆಶಿ ನಿವಾಸಕ್ಕೆ ದಿವಂಗತ ಸಿದ್ಧರ್ಥ್ ಪತ್ನಿ, ಕೃಷ್ಣ ಪುತ್ರಿ ಮಾಳವಿಕಾ ಸೇರಿದಂತೆ ಎಸ್ಎಂಕೆ ಕುಟುಂಬ ತೆರಳಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ. ಈ ವೇಳೆ ಐಶ್ವರ್ಯ ಮತ್ತು ಅಮರ್ಥ್ಯ ಒಬ್ಬರಿಗೊಬ್ಬರು ಹಾರ ಬದಲಿಸಿಕೊಂಡರು.

<p>ಭಾನುವಾರ ಅಷ್ಟೇ ಡಿಕೆ ಶಿವಕುಮಾರ್ ಫ್ಯಾಮಿಲಿ ಎಸ್ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ವರ ನೋಡುವ ಶಾಸ್ತ್ರ ಮುಗಿಸಿತ್ತು. ಇದೀಗ ಎಸ್ಎಂ ಕೃಷ್ಣ ಕುಟುಂಬ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದರು..</p>
ಭಾನುವಾರ ಅಷ್ಟೇ ಡಿಕೆ ಶಿವಕುಮಾರ್ ಫ್ಯಾಮಿಲಿ ಎಸ್ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ವರ ನೋಡುವ ಶಾಸ್ತ್ರ ಮುಗಿಸಿತ್ತು. ಇದೀಗ ಎಸ್ಎಂ ಕೃಷ್ಣ ಕುಟುಂಬ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದರು..
<p>ಅಮರ್ಥ್ಯ ಹಾಗು ಐಶ್ವರ್ಯ ಮದುವೆ ಮಾತುಕತೆ ನಿಶ್ಚಯ ಮಾಡಿಕೊಂಡ ಎರಡು ಕುಟುಂಬ ವರ್ಗದವರು</p>
ಅಮರ್ಥ್ಯ ಹಾಗು ಐಶ್ವರ್ಯ ಮದುವೆ ಮಾತುಕತೆ ನಿಶ್ಚಯ ಮಾಡಿಕೊಂಡ ಎರಡು ಕುಟುಂಬ ವರ್ಗದವರು
<p>ಹಾರ ಬದಲಾಯಿಸಿಕೊಂಡ ನವ ಜೋಡಿ ಅಮರ್ಥ್ಯ ಹಾಗು ಐಶ್ವರ್ಯ</p>
ಹಾರ ಬದಲಾಯಿಸಿಕೊಂಡ ನವ ಜೋಡಿ ಅಮರ್ಥ್ಯ ಹಾಗು ಐಶ್ವರ್ಯ
<p>ವರ ಮತ್ತು ಹುಡುಗಿ ನೋಡುವ ಶಾಸ್ತ್ರಗಳು ಮುಗಿದಿದ್ದು, ಮುಂದಿನ ಕಾರ್ಯಕ್ರಮ ನಿಶ್ಚಿತಾರ್ಥ</p>
ವರ ಮತ್ತು ಹುಡುಗಿ ನೋಡುವ ಶಾಸ್ತ್ರಗಳು ಮುಗಿದಿದ್ದು, ಮುಂದಿನ ಕಾರ್ಯಕ್ರಮ ನಿಶ್ಚಿತಾರ್ಥ
<p>ಆಷಾಢ ಮುಗಿದ ಬಳಿಕ ಅಗಸ್ಟ್ ಮೊದಲ ವಾರದಲ್ಲಿ ನಿಶ್ಚಿತಾರ್ಥ ನಡೆಯುವ ಸಾಧ್ಯತೆಗಳಿವೆ. </p>
ಆಷಾಢ ಮುಗಿದ ಬಳಿಕ ಅಗಸ್ಟ್ ಮೊದಲ ವಾರದಲ್ಲಿ ನಿಶ್ಚಿತಾರ್ಥ ನಡೆಯುವ ಸಾಧ್ಯತೆಗಳಿವೆ.
<p>ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಅವಧೂತರ ಅಣತಿ ಮೇರೆಗೆ ಈ ವಿವಾಹ ನೆರವೇರಲಿದೆ.</p>
ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಅವಧೂತರ ಅಣತಿ ಮೇರೆಗೆ ಈ ವಿವಾಹ ನೆರವೇರಲಿದೆ.
<p> ಇದೀಗ ರಾಜಕೀಯ ಗುರುವಿನ ಮೊಮ್ಮಗನಿಗೆ ಪುತ್ರಿಯನ್ನು ವಿವಾಹ ಮಾಡಿಕೊಡುವ ಮೂಲಕ ರಾಜ್ಯದ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ವೈವಾಹಿಕ ಸಂಬಂಧ ಬೆಳೆಸಿವೆ.</p>
ಇದೀಗ ರಾಜಕೀಯ ಗುರುವಿನ ಮೊಮ್ಮಗನಿಗೆ ಪುತ್ರಿಯನ್ನು ವಿವಾಹ ಮಾಡಿಕೊಡುವ ಮೂಲಕ ರಾಜ್ಯದ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ವೈವಾಹಿಕ ಸಂಬಂಧ ಬೆಳೆಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.