ರಮೇಶ್ ಜಾರಕಿಹೊಳಿ ತಂಡದಲ್ಲಿ ಹೊಸ ಮುಖಗಳು: ಬಿಜೆಪಿಯಲ್ಲಿ ಶುರುವಾಯ್ತಾ ಗುಂಪುಗಾರಿಕೆ?
ಇಂದು (ಶುಕ್ರವಾರ) ಮಹಾ ಶಿವರಾತ್ರಿ ಅಂಗವಾಗಿ ನೂತನ ಸಚಿವ ರಮೇಶ್ ಜಾರಕಿಹೊಳಿ ಮತ್ತು ತಂಡ ಶಿರಡಿಗೆ ಭೇಟಿ ನೀಡಿದ್ದು ಸಾಯಿಬಾಬಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಗುಂಪಿನಲ್ಲಿ ಹೊಸ ಶಾಸಕರೊಬ್ಬರು ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲದೇ ರಮೇಶ್ ಜಾರಕಿಹೊಳಿ ತಂಡದಲ್ಲಿ ಹೊಸ ಮುಖಗಳು ಕಾಣಿಸಿಕೊಳ್ಳುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.ಬಿಜೆಪಿಯಲ್ಲಿ ಗುಂಪುಗಾರಿಕೆ ಶುರುವಾಯ್ತಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.
ನೂತನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮತ್ತು ತಂಡ ಶಿರಡಿಗೆ ಭೇಟಿ
ಸಚಿವ ಸ್ಥಾನ ವಂಚಿತ ಮಹೇಶ್ ಕುಮಟಳ್ಳಿ ಶಿರಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು
ಸಂಪುಟ ವಿಸ್ತರಣೆಯ ಕೊನೆಗಳಿಗೆಯಲ್ಲಿ ಸಚಿವ ಸ್ಥಾನ ವಂಚಿತ ಸಿ.ಪಿ.ಯೋಗೇಶ್ವರ್ ಕೂಡ ಹೋಗಿರುವುದು ವಿಶೇಷ.
ನೂತನ ಸಚಿವರ ಜತೆಗೆ ಮಸ್ಕಿ ಕ್ಷೇತ್ರದ ಅನರ್ಹ ಶಾಸಕರಾಗಿಯೇ ಉಳಿದುರುವ ಪ್ರತಾಪ್ ಗೌಡ ಪಾಟೀಲ್ ದರ್ಶನ ಪಡೆದುಕೊಂಡರು.
ನೂತನ ಸಚಿವ ರಮೇಶ್ ಜಾರಕಿಹೊಳಿ ಮತ್ತು ತಂಡದ ಜತೆಗೆ ಬಿಎಸ್ಪಿ ಶಾಸಕ ಎನ್ ಮಹೇಶ್ ಗುರುಸಿಸಿಕೊಳ್ಳುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನೂತನ ಸಚಿವ ರಮೇಶ್ ಜಾರಕಿಹೊಳಿ ಬಿಟ್ಟರೇ ಇನ್ನುಳಿದ ಸಚಿವರುಗಳು ಕಾಣಿಸಿಕೊಂಡಿಲ್ಲ
ಸಚಿವ ಸ್ಥಾನದ ಆಕಾಂಕ್ಷಿಗಳೇ ರಮೇಶ್ ಜಾರಕಿಹೊಳಿ ಜತೆ ಶಿರಡಿಗೆ ಹೋಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ನೂತನ ಶಾಸಕರುಗಳು ತಿರುಪತಿಗೆ ತೆರಳಿದ್ದರು.