ದುರಂಕಾರದ ಮಾತು ಬಿಟ್ಟು, ಕೊಡುಗೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಎಚ್ಡಿಕೆ ಸಲಹೆ
ಮುಖ್ಯಮಂತ್ರಿ ಪದವಿ ಯಾರಿಗೂ ಶಾಶ್ವತ ಅಲ್ಲ. ಎರಡನೇ ಬಾರಿ ಸಿಎಂ ಆಗಿದ್ದೀರಿ. ನಿಮ್ಮ ದುರಂಕಾರದ ಮಾತು ಪಕ್ಕಕ್ಕಿಟ್ಟು, ರಾಜಕೀಯ ಜೀವನ ಕಡೆಘಟ್ಟದಲ್ಲಿರುವ ನೀವು ನಾಡಿನ ಜನರಿಗೆ ಏನಾದು ಕೊಡುಗೆ ನೀಡಿ ಹೋಗಲು ಪ್ರಯತ್ನಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು (ಮಾ.28): ಮುಖ್ಯಮಂತ್ರಿ ಪದವಿ ಯಾರಿಗೂ ಶಾಶ್ವತ ಅಲ್ಲ. ಎರಡನೇ ಬಾರಿ ಸಿಎಂ ಆಗಿದ್ದೀರಿ. ನಿಮ್ಮ ದುರಂಕಾರದ ಮಾತು ಪಕ್ಕಕ್ಕಿಟ್ಟು, ರಾಜಕೀಯ ಜೀವನ ಕಡೆಘಟ್ಟದಲ್ಲಿರುವ ನೀವು ನಾಡಿನ ಜನರಿಗೆ ಏನಾದು ಕೊಡುಗೆ ನೀಡಿ ಹೋಗಲು ಪ್ರಯತ್ನಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬುಧವಾರ ನಡೆದ ಬಿಜೆಪಿ- ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನಾವು ಮೈತ್ರಿ ಮಾಡಿಕೊಂಡಿರುವುದು ಅಧಿಕಾರಕ್ಕಾಗಿ ಅಲ್ಲ. ರಾಜ್ಯದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ. ಕಾವೇರಿ, ಕೃಷ್ಣ ಸೇರಿದಂತೆ ಅನೇಕ ಸಮಸ್ಯೆಗಳು ಕಣ್ಣ ಮುಂದಿದೆ. ಅದು ಸರಿಯಾಗಬೇಕಾದರೆ ನಾವು ಒಂದಾಗಬೇಕು. ನಮ್ಮದು ಪ್ರಾದೇಶಿಕ ಪಕ್ಷ, ಹಣಕಾಸು ಸಮಸ್ಯೆ ಇದೆ. ಮತ್ತೆ ಮೋದಿ ಅವರು ಪ್ರಧಾನಿ ಆಗುವುದರಿಂದ ರಾಜ್ಯದ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.
ನಮ್ಮ ನೀರು, ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ನಡೆಸಿದಿರಿ. ಬಳಿಕ ತಮಿಳುನಾಡಿಗೆ ನೀರು ಹರಿಸಿದಿರಿ. ಈಗ ಬಿಜೆಪಿ ಅವರಿಗೆ ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಕೇಳುವುದಾದರೆ ಅಂದು ಪಾದಯಾತ್ರೆ ಯಾಕೆ ಮಾಡಿದಿರಿ? ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಎಲ್ಲಾ ಪತ್ರಿಕೆಯ ಮುಖಪುಟದಲ್ಲಿ ನುಡಿದಂತೆ ನಡೆದಿದ್ದೇವೆ ಎಂಬ ಗ್ಯಾರಂಟಿ ಜಾಹೀರಾತು. ಅವರ ಫೋಟೋ ಇದೆ. ಇತ್ತ ಕೇಂದ್ರ ಸರ್ಕಾರ ಹಣ ನೀಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ತಾವು 15 ಬಾರಿ ಹಣಕಾಸು ಬಾರಿ ಸಚಿವರಾಗಿ ಬಜೆಟ್ ಮಂಡಿಸಿದರೂ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೇಳುತ್ತಾರೆ. ಉತ್ತರ ಕರ್ನಾಟಕ ಕೂಡಲ ಸಂಗಮದ ಹೆಸರಿನಲ್ಲಿ ಪಾಯಾತ್ರೆ ಮಾಡಿದರು. ಕಾಂಗ್ರೆಸ್ ನಡಿಗೆ ಕೃಷ್ಣದ ಕಡೆಗೆ ಎಂದು ಘೋಷೆ ಕೂಗಿದರು. ಬಳಿಕ ಐದು ವರ್ಷ ಸಿಎಂ ಆದರು. ಆಗ ಕೃಷ್ಣ ನೀರು ಎಲ್ಲಿಗೆ ಹೋಯಿತು. ಅವರ ನಡಿಗೆ ಅಧಿಕಾರದ ಕಡೆಗೆ ಹೋಯಿತು ಎಂದು ಅವರು ಹೇಳಿದರು. ಬಳಿಕ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷ ಕಾಂಗ್ರೆಸ್ ಗೆ ಆಪ್ತವಾಗಿದೆ. ಜತೆಗೆ ಯಾವುದೇ ಕಾರಣಕ್ಕೂ ಮೇಕೆದಾಟು ಕಟ್ಟಲು ಅವಕಾಶ ನೀಡಲ್ಲ ಎಂದು ಡಿಎಂಕೆ ಹೇಳಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ದೇಶದ ಒಂದು ಭದ್ರತೆಗೆ ಹಾಗೂ ಸುಙದ್ರ ಸರ್ಕಾರ ರಚನೆಯಾಗಬೇಕು. ಈ ಹಿನ್ನೆಲೆಯಲ್ಲಿ ಈಗ ಮೊದಲ ಸಭೆ ನಡೆಯುತ್ತಿದೆ. ನನ್ನ ರಾಜಕಾರಣ ಆರಂಭದ ಮೊದಲ ಸಭೆ ಮೈಸೂರಿನಲ್ಲಿ ನಡೆದಿತ್ತು. ಆಗಿನಿಂದ ಈವರೆಗೆ ಇಲ್ಲಿನ ಜನರು ಅಪಾರ ಪ್ರೀತಿ ನೀಡಿದ್ದೀರಿ. ಮೂರು ಬಾರಿ ಹೃದಯ ಚಿಕಿತ್ಸೆ, ಎರಡು ಬಾರಿ ಮೆದಳು ತೊಂದರೆ ಆಗಿದೆ. ಆದರೂ ಉಳಿದಿದ್ದೇನೆ ಎಂದರೆ. ನಾಡಿನ ಬಡಕುಟುಂಬಕ್ಕೆ ಅನುಕೂಲ ಕಲ್ಪಿಸಲು ಉಳಿದಿದ್ದೇನೆ ಎಂಬ ಭಾವನೆ ನನ್ನಲ್ಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.