MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • Photos: ಡಿಕೆಶಿ ಸಿಎಂ ಆಗಲೆಂದು 3 ವರ್ಷದಿಂದ ಗಡ್ಡ ಕೂದಲು ಕತ್ತರಿಸದೇ ಹರಕೆ; ಕೊನೆಗೂ ಅಭಿಮಾನಿಯ ತಪಸ್ಸು ಫಲಿಸಿತು!

Photos: ಡಿಕೆಶಿ ಸಿಎಂ ಆಗಲೆಂದು 3 ವರ್ಷದಿಂದ ಗಡ್ಡ ಕೂದಲು ಕತ್ತರಿಸದೇ ಹರಕೆ; ಕೊನೆಗೂ ಅಭಿಮಾನಿಯ ತಪಸ್ಸು ಫಲಿಸಿತು!

ಡಿಕೆ ಶಿವಕುಮಾರ್(DK Shivakumar) ಸಿಎಂ ಆಗಲಿ ಎಂದು ರಾಮನಗರದ ಈಶ್ವರಪ್ಪ ಮೂರು ವರ್ಷಗಳಿಂದ ತಲೆಕೂದಲು, ಗಡ್ಡ ತೆಗೆಯದೆ ಹರಕೆ ಹೊತ್ತಿದ್ದರು. ಕುಂಭಮೇಳದಲ್ಲಿ ಮಾಡಿದ ಸಂಕಲ್ಪ ಈಗ ನೆರವೇರಿದ್ದು, ಮಂತ್ರಾಲಯದಲ್ಲಿ ಹರಕೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. 

2 Min read
Author : Ravi Janekal
Published : May 30 2026, 01:30 PM IST
Share this Photo Gallery
  • FB
  • TW
  • Linkdin
  • Whatsapp
15
ಡಿಕೆಶಿ ಸಿಎಂ ಅಗಲೆಂದು ಅಭಿಮಾನಿ ಅಪರೂಪದ ಹರಕೆ!
Image Credit : Asianet News

ಡಿಕೆಶಿ ಸಿಎಂ ಅಗಲೆಂದು ಅಭಿಮಾನಿ ಅಪರೂಪದ ಹರಕೆ!

ರಾಜಕೀಯ ನಾಯಕರಿಗೆ ಅಭಿಮಾನಿಗಳು, ಬೆಂಬಲಿಗರು ಇರುವುದು ಸಾಮಾನ್ಯ. ಆದರೆ ಕೆಲವು ನಾಯಕರು ತಮ್ಮ ಅಭಿಮಾನಿಗಳ ಮೇಲೆ ಯಾವ ರೀತಿ ಪ್ರಭಾವಿಸಿರುತ್ತಾರೆ ಎಂದರೆ ಅಭಿಮಾನಿಗಳ ಪಾಲಿಗೆ ಅವರು ಕೇವಲ ರಾಜಕಾರಣಿಯಲ್ಲ, ನಾಯಕನಲ್ಲ ಅವರಲ್ಲಿ ದೇವರನ್ನ ಕಾಣುತ್ತಿರುತ್ತಾರೆ ಎಂದರೆ ನಂಬುತ್ತೀರ? ಹೌದು ಅಂಥ ನಾಯಕನಿಗಾಗಿ ಯಾವ ತ್ಯಾಗಕ್ಕೂ ಸಿದ್ಧರಿರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಡಿಕೆ ಶಿವಕುಮಾರ್ ಅಭಿಮಾನಿ ವಿಶೇಷ ಹರಕೆ ಫಲಿಸಿತು!
Image Credit : Asianet News

ಡಿಕೆ ಶಿವಕುಮಾರ್ ಅಭಿಮಾನಿ ವಿಶೇಷ ಹರಕೆ ಫಲಿಸಿತು!

ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದವರಾದ ಈಶ್ವರಪ್ಪ ಎಂಬ ಅಭಿಮಾನಿಯ ವಿಶೇಷ ಹರಕೆ ಇದೀಗ ಎಲ್ಲರ ಗಮನ ಸೆಳೆದಿದೆ.ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂಬ ಒಂದೇ ಕನಸಿಗಾಗಿ ಅವರು ಮೂರು ವರ್ಷಗಳ ಹಿಂದೆ ಅಪರೂಪದ ಹರಕೆಯೊಂದನ್ನು ಹೊತ್ತಿದ್ದರಂತೆ.

Related Articles

Related image1
ಡಿಕೆ ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ: ಕಾಂಗ್ರೆಸ್ 2.O ಸರ್ಕಾರದಲ್ಲಿ ಯಾರಿಗೆ ಅದೃಷ್ಟ?
Related image2
ಸಿದ್ದರಾಮಯ್ಯ, ಡಿಕೆ ಶಿವಕುಮಾರ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ; ಮುಂದಿನ ಸಿಎಂ ಯಾರು? ಯಾರೆಲ್ಲಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ?
35
ಕುಂಭಮೇಳದಲ್ಲಿ ಪ್ರತಿಜ್ಞೆ; ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜೆ!
Image Credit : Asianet News

ಕುಂಭಮೇಳದಲ್ಲಿ ಪ್ರತಿಜ್ಞೆ; ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜೆ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳಕ್ಕೆ ತೆರಳಿದ್ದ ಈಶ್ವರಪ್ಪ, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಡಿಕೆ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಪವಿತ್ರ ಸ್ನಾನ ಮಾಡಿದ್ದರು. ಇದೇ ವೇಳೆ 'ಡಿಕೆಶಿ ಮುಖ್ಯಮಂತ್ರಿ ಆಗುವವರೆಗೂ ನಾನು ತಲೆಕೂದಲು ಮತ್ತು ಗಡ್ಡ ತೆಗೆಯುವುದಿಲ್ಲ' ಎಂದು ದೇವರ ಮುಂದೆ ಸಂಕಲ್ಪ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ.

45
ಮೂರು ವರ್ಷ ಕಳೆದರೂ ಸಂಕಲ್ಪದಿಂದ ಹಿಂದೆ ಸರಿದಿರಲಿಲ್ಲ!
Image Credit : Asianet News

ಮೂರು ವರ್ಷ ಕಳೆದರೂ ಸಂಕಲ್ಪದಿಂದ ಹಿಂದೆ ಸರಿದಿರಲಿಲ್ಲ!

ಡಿಕೆಶಿ ಸಿಎಂ ಆಗಬೇಕು ಎಂಬ ಹರಕೆ ಹೊತ್ತು ದಿನಗಳು ಕಳೆದವು, ತಿಂಗಳುಗಳಾದವು, ತಿಂಗಳುಗಳು ವರ್ಷಗಳಾದವು. ಆದರೆ ಈಶ್ವರಪ್ಪ ತಮ್ಮ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ. ಮೂರು ವರ್ಷಗಳಿಂದ ತಲೆಕೂದಲು ಮತ್ತು ಗಡ್ಡವನ್ನು ಕತ್ತರಿಸದೇ ಹರಕೆಯನ್ನು ಮುಂದುವರಿಸಿದರು. ಅವರ ಈ ಅಭಿಮಾನ ಮತ್ತು ನಂಬಿಕೆ ಗ್ರಾಮದಲ್ಲಷ್ಟೇ ಅಲ್ಲ, ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಚರ್ಚೆಯ ವಿಷಯವಾಗಿತ್ತು. ಡಿಕೆಶಿ ಸಿಎಂ ಆಗುವ ಸುದ್ದಿ ಕೇಳುವ ದಿನಕ್ಕಾಗಿ ಅವರು ಕಾತರದಿಂದ ಕಾಯುತ್ತಿದ್ದರು.

ಕನಸು ನನಸಾದ ಕ್ಷಣ; ಅಭಿಮಾನಿ ಈಶ್ವರಪ್ಪ ಭಾವುಕ

ಡಿ.ಕೆ. ಶಿವಕುಮಾರ್ ಸದ್ಯದಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸುದ್ದಿ ಹೊರಬಿದ್ದ ತಕ್ಷಣ ಈಶ್ವರಪ್ಪ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಮೂರು ವರ್ಷಗಳ ತಪಸ್ಸಿಗೆ ಫಲ ಸಿಕ್ಕಂತಾಯಿತು. ಡಿಕೆಶಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಶುಭಾಶಯ ಕೋರಿ, ತಮ್ಮ ಹರಕೆಯ ಬಗ್ಗೆ ಹೇಳಬೇಕೆಂಬ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ.

55
ಡಿಕೆಶಿ ಭೇಟಿಯ ಬಳಿಕ ಹರಕೆ ತೀರಿಸಲು ಸಿದ್ಧತೆ
Image Credit : Asianet News

ಡಿಕೆಶಿ ಭೇಟಿಯ ಬಳಿಕ ಹರಕೆ ತೀರಿಸಲು ಸಿದ್ಧತೆ

ಅದರಂತೆ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ಸ್ವೀಕರಿಸುವ ದಿನದಂದು ಅಥವಾ ಮರುದಿನ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಬಳಿಕ ಹರಕೆ ತೀರಿಸುವ ಕಾರ್ಯ ಆರಂಭಿಸುವುದಾಗಿ, ಮೂರು ವರ್ಷಗಳಿಂದ ಬೆಳೆದಿರುವ ಗಡ್ಡ, ತಲೆಗೂದಲನ್ನು ತೆಗೆಯುವ ಮೂಲಕ ತಮ್ಮ ಸಂಕಲ್ಪವನ್ನು ಪೂರ್ಣಗೊಳಿಸುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ.

ಮಂತ್ರಾಲಯಕ್ಕೆ ಭೇಟಿ

ಹರಕೆ ತೀರಿಸಿದ ಬಳಿಕ ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಿದ್ದಾರೆ. ಒಬ್ಬ ರಾಜಕೀಯ ನಾಯಕನ ಮೇಲಿನ ಅಭಿಮಾನ ಹೇಗೆ ಭಕ್ತಿ ಮತ್ತು ನಂಬಿಕೆಯ ರೂಪ ತಾಳಬಹುದು ಎಂಬುದಕ್ಕೆ ಈಶ್ವರಪ್ಪ ಅವರ ಸಂಕಲ್ಪ ಒಂದು ಜೀವಂತ ಉದಾಹರಣೆಯಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಡಿ.ಕೆ. ಶಿವಕುಮಾರ್
ಕರ್ನಾಟಕ ಸುದ್ದಿ
ಕರ್ನಾಟಕ ರಾಜಕೀಯ

Latest Videos
Recommended Stories
Recommended image1
ಡಿಕೆ ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ: ಕಾಂಗ್ರೆಸ್ 2.O ಸರ್ಕಾರದಲ್ಲಿ ಯಾರಿಗೆ ಅದೃಷ್ಟ?
Recommended image2
Priyank kharge: ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹರಿಕಾರ ಪ್ರಿಯಾಂಕ್‌ಗೆ ಡಿಸಿಎಂ ಸ್ಥಾನಕ್ಕೆ ಶಾಸಕರ ಒತ್ತಾಯ
Recommended image3
DK Shivakumar: ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ರಾಮನಗರದಿಂದ 60 ಸಾವಿರ ಜನ ಸೇರಿಸಲು ಸಿದ್ಧತೆ!
Related Stories
Recommended image1
ಡಿಕೆ ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ: ಕಾಂಗ್ರೆಸ್ 2.O ಸರ್ಕಾರದಲ್ಲಿ ಯಾರಿಗೆ ಅದೃಷ್ಟ?
Recommended image2
ಸಿದ್ದರಾಮಯ್ಯ, ಡಿಕೆ ಶಿವಕುಮಾರ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ; ಮುಂದಿನ ಸಿಎಂ ಯಾರು? ಯಾರೆಲ್ಲಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved