ಪಕ್ಷನಿಷ್ಠ ತ್ಯಾಗಜೀವಿಗೆ ಮಹತ್ವದ ಹುದ್ದೆ : ಕೇಸರಿ ಪಡಸಾಲೆಯಲ್ಲಿ ಅಂತಿಮ ಹಂತದ ಮಾತುಕತೆ
ಮತ್ತೋರ್ವ ಮುಖಂಡರ ಅನುಕೂಲತೆಯ ದೃಷ್ಟಿಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮುಖಂಡಗೆ ಇದೀಗ ಮಹತ್ವದ ಸ್ಥಾನ ದೊರೆಯುವ ಸಾಧ್ಯತೆ ಇದೆ
ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎನ್ ಶಂಕರಪ್ಪಗೆ ರಾಜ್ಯಸಭಾ ಟಿಕೆಟ್...?ರಾಜ್ಯ ಬಿಜೆಪಿ ನಾಯಕರಲ್ಲಿ ಸಹಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್ ಶಂಕರಪ್ಪ ಹೆಸರು ಶಿಫಾರಸ್ಸು...
ಕೇಂದ್ರ ನಾಯಕರ ಸಹಮತ ಸಿಕ್ಕರೆ ಮಾಜಿ ಪರಿಷತ್ ಸದಸ್ಯ ಶಂಕರಪ್ಪಗೆ ಚಾನ್ಸ್... ಪಕ್ಷದ ಆದೇಶದಂತೆ ವಿಧಾನಪರಿಷತ್ ಸದಸ್ಯತ್ವವನ್ನೇ ಬಿಟ್ಟು ಕೊಟ್ಟಿದ್ದ ಶಂಕರಪ್ಪ..
ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ.. ಸಿಎಂ ಡಿವಿಎಸ್ ಪರಿಷತ್ ಸದಸ್ಯರಾಗಲು ಅನುಕೂಲವಾಗುವಂತೆ ರಾಜೀನಾಮೆ ನೀಡಿದ್ದ ಎನ್ ಶಂಕರಪ್ಪ..
2011 ರ ಅಕ್ಟೋಬರ್ 14 ರಂದು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದ ಶಂಕರಪ್ಪ..
ಬರೋಬ್ಬರಿ 9 ವರ್ಷಗಳ ಬಳಿಕ ಪಕ್ಷನಿಷ್ಠನಿಗೆ ಮಣೆ ಹಾಕಲು ಪಕ್ಷದ ರಾಜ್ಯ ನಾಯಕರ ಸಹಮತ..
ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಎನ್ ಶಂಕರಪ್ಪ ಹೆಸರು ಪ್ರಸ್ತಾಪವಾದಾಗ ಬೆಂಬಲ... ಹಿರಿಯ ನಾಯಕರಿಂದ ಶಂಕರಪ್ಪ ಹೆಸರಿಗೆ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಶಂಕರಪ್ಪ ಹೆಸರು ಶಿಫಾರಸ್ಸು...
ಅಂತಿಮವಾಗಿ ಕೇಂದ್ರ ನಾಯಕರು ನೀಡುವ ಸೂಚನೆಯಂತೆ ಟಿಕೆಟ್ ಅಂತಿಮವಾಗುವ ಸಾಧ್ಯತೆ.....