MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Mysuru
  • ಮೈಸೂರಿನಲ್ಲಿ ಇದೆ ಮಹಾನ್ ಚೇತನನ ಹೆಜ್ಜೆ ಗುರುತು.. ಈ ಬಾರಿ ಮೋದಿ ಭೇಟಿ ನೀಡ್ತಿರುವ ಈ ಸ್ಥಳದ ಮಹತ್ವವೇನು?

ಮೈಸೂರಿನಲ್ಲಿ ಇದೆ ಮಹಾನ್ ಚೇತನನ ಹೆಜ್ಜೆ ಗುರುತು.. ಈ ಬಾರಿ ಮೋದಿ ಭೇಟಿ ನೀಡ್ತಿರುವ ಈ ಸ್ಥಳದ ಮಹತ್ವವೇನು?

ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ನೂತನ 'ವಿವೇಕ ಸ್ಮಾರಕ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಇದು ಯುವ ಸಬಲೀಕರಣ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.

2 Min read
Author : Ganesh Mabla Gowda
Published : Jul 26 2026, 10:22 AM IST
Share this Photo Gallery
  • FB
  • TW
  • Linkdin
  • Whatsapp
15
1892ರ ಆ ಐತಿಹಾಸಿಕ ಕ್ಷಣಗಳು!
Image Credit : Asianet News

1892ರ ಆ ಐತಿಹಾಸಿಕ ಕ್ಷಣಗಳು!

ಮೈಸೂರು: ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ಪ್ರಮುಖ ಉದ್ದೇಶ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ 'ವಿವೇಕ ಸ್ಮಾರಕ' (Viveka Smaraka) ವನ್ನು ಲೋಕಾರ್ಪಣೆ ಮಾಡುವುದು. ಹಾಗಾದರೆ, ಮೋದಿ ಭೇಟಿ ನೀಡುತ್ತಿರುವ ಈ ಸ್ಥಳದ ಮಹತ್ವವೇನು? ಇಲ್ಲಿ ಅಡಗಿರುವ ಐತಿಹಾಸಿಕ ಕ್ಷಣಗಳಾವುವು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ವಿವೇಕ ಸ್ಮಾರಕ ಕೇವಲ ಒಂದು ಕಟ್ಟಡವಲ್ಲ; ಇದು ಭಾರತದ ಆಧ್ಯಾತ್ಮಿಕ ಇತಿಹಾಸದ ಒಂದು ಪ್ರಮುಖ ಪುಟ. 1893ರಲ್ಲಿ ಶಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡುವ ಮೊದಲು, ಅಂದರೆ 1892ರ ನವೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದರು. ಸುಮಾರು ಮೂರು ವಾರಗಳ ಕಾಲ ಅವರು ಇಲ್ಲಿ ತಂಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸ್ಮಾರಕದ ಹಿನ್ನೆಲೆ
Image Credit : www.srkmys.org

ಸ್ಮಾರಕದ ಹಿನ್ನೆಲೆ

ಈ ವೇಳೆ ಅಂದಿನ ಮೈಸೂರು ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ಮತ್ತು ದಿವಾನರಾದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರೊಂದಿಗೆ ವಿವೇಕಾನಂದರು ಸಂವಾದ ನಡೆಸಿದ್ದರು. ವಿದೇಶದಲ್ಲಿ ಭಾರತದ ಸನಾತನ ಧರ್ಮದ ಧ್ವಜವನ್ನು ಹಾರಿಸಲು ಮಹಾರಾಜರು ನೀಡಿದ ಬೆಂಬಲ ಮತ್ತು ಪ್ರೋತ್ಸಾಹ ಸ್ವಾಮೀಜಿಯವರ ನಿರ್ಧಾರಕ್ಕೆ ದೊಡ್ಡ ಬಲ ತುಂಬಿತ್ತು. ಆ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಸ್ಥಳದಲ್ಲೇ ಇಂದು ಈ ಸ್ಮಾರಕ ತಲೆಯೆತ್ತಿದೆ.

Related Articles

Related image1
ಆಗಸ್ಟ್ 1ಕ್ಕೆ ಮೈಸೂರಿಗೆ ಪ್ರಧಾನಿ ಮೋದಿ ಭೇಟಿ.. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ ಸಾಂಸ್ಕೃತಿಕ ನಗರಿ..!
Related image2
ಪತ್ರಕರ್ತರ ಸೋಗಿನಲ್ಲಿ ಸುಲಿಗೆ; ಬೆಳಗಾವಿಯಲ್ಲಿ ನಾಲ್ವರು ಯೂಟ್ಯೂಬರ್‌ಗಳು ಅರೆಸ್ಟ್!
35
ಹಲವು ವರ್ಷಗಳ ಹೋರಾಟದ ಫಲ
Image Credit : www.srkmys.org

ಹಲವು ವರ್ಷಗಳ ಹೋರಾಟದ ಫಲ

ಈ ಸ್ಮಾರಕ ನಿರ್ಮಾಣವಾದ ಜಾಗವು ಈ ಹಿಂದೆ 'ಎನ್‌.ಟಿ.ಆರ್. ಶಾಲೆ' (NTR School) ಆವರಣವಾಗಿತ್ತು. ಈ ಜಾಗವನ್ನು ವಿವೇಕಾನಂದರ ಸ್ಮಾರಕವಾಗಿ ಪರಿವರ್ತಿಸಲು ರಾಮಕೃಷ್ಣ ಆಶ್ರಮವು ಹತ್ತಾರು ವರ್ಷಗಳ ಕಾಲ ಹೋರಾಟ ನಡೆಸಿದೆ. ಹಳೆಯ ಶಾಲೆಯನ್ನು ಸ್ಥಳಾಂತರಿಸಲು ವಿರೋಧ ವ್ಯಕ್ತವಾಗಿದ್ದರೂ, ಸುದೀರ್ಘ ಕಾನೂನು ಹೋರಾಟದ ನಂತರ ಹೈಕೋರ್ಟ್ ಆದೇಶದಂತೆ ಜಾಗವನ್ನು ಹಸ್ತಾಂತರಿಸಲಾಯಿತು. ರಾಮಕೃಷ್ಣ ಆಶ್ರಮವು ಇದಕ್ಕೆ ಪ್ರತಿಯಾಗಿ ಅತ್ಯಂತ ಸುಸಜ್ಜಿತವಾದ ಪರ್ಯಾಯ ಶಾಲಾ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ.

45
ವಿವೇಕ ಸ್ಮಾರಕದ ವಿಶೇಷತೆಗಳೇನು?
Image Credit : instagram

ವಿವೇಕ ಸ್ಮಾರಕದ ವಿಶೇಷತೆಗಳೇನು?

ಇದು ಕೇವಲ ದರ್ಶನ ಪಡೆಯುವ ಸ್ಥಳವಲ್ಲ, ಬದಲಿಗೆ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಇದರ ಪ್ರಮುಖ ಆಕರ್ಷಣೆಗಳೆಂದರೆ..

  • ಧ್ಯಾನ ಮಂದಿರ: ಮನಸ್ಸಿನ ಶಾಂತಿ ಮತ್ತು ಏಕಾಗ್ರತೆಗಾಗಿ ಅತ್ಯಂತ ಸುಂದರವಾದ ಧ್ಯಾನ ಮಂದಿರ ಇಲ್ಲಿದೆ
  • ಭವ್ಯ ಕಂಚಿನ ಪ್ರತಿಮೆ: ಸ್ವಾಮಿ ವಿವೇಕಾನಂದರ ಎತ್ತರದ ಕಂಚಿನ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದೆ
  • ಚಿತ್ರಪಟ ಪ್ರದರ್ಶನ (Gallery): ಆಧುನಿಕ ತಂತ್ರಜ್ಞಾನ ಬಳಸಿ ಸ್ವಾಮೀಜಿಯವರ ಜೀವನದ ಪ್ರಮುಖ ಘಟ್ಟಗಳು ಮತ್ತು ಮೈಸೂರು ಭೇಟಿಯ ಕ್ಷಣಗಳನ್ನು ವಿವರಿಸುವ ಗ್ಯಾಲರಿ ಇಲ್ಲಿದೆ
  • ಯುವ ಸಬಲೀಕರಣ ಕೇಂದ್ರ: ಇಲ್ಲಿ ಯುವಜನರಿಗೆ ನಾಯಕತ್ವ ಗುಣ, ಮೌಲ್ಯಾಧಾರಿತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ದೇಶಪ್ರೇಮದ ತರಬೇತಿ ನೀಡಲಾಗುತ್ತದೆ
55
ಮೋದಿ ಭೇಟಿಯ ಉದ್ದೇಶ: 'ವಿಕ್ಷಿತ್ ಭಾರತ್ 2047'
Image Credit : www.srkmys.org

ಮೋದಿ ಭೇಟಿಯ ಉದ್ದೇಶ: 'ವಿಕ್ಷಿತ್ ಭಾರತ್ 2047'

ಸ್ವಾಮಿ ವಿವೇಕಾನಂದರ ತತ್ತ್ವಗಳು 2047ರ ವೇಳೆಗೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ (Viksit Bharat 2047) ಹಾದಿಯಲ್ಲಿ ದಾರಿದೀಪವಾಗಲಿವೆ ಎಂಬುದು ಕೇಂದ್ರ ಸರ್ಕಾರದ ಆಶಯ. ಯುವಶಕ್ತಿಯನ್ನು ಸರಿಯಾದ ಹಾದಿಯಲ್ಲಿ ನಡೆಸಲು ಈ ಕೇಂದ್ರವು ಸಹಕಾರಿಯಾಗಲಿದೆ. ಆಗಸ್ಟ್ 1ರಂದು ಮಧ್ಯಾಹ್ನ ಪ್ರಧಾನಿ ಮೋದಿ ಈ ಪವಿತ್ರ ತಾಣವನ್ನು ಉದ್ಘಾಟಿಸಿ ದೇಶಕ್ಕೆ ಸಮರ್ಪಿಸಲಿದ್ದಾರೆ.

About the Author

GM
Ganesh Mabla Gowda
ಮೈಸೂರು
ನರೇಂದ್ರ ಮೋದಿ
ಸುದ್ದಿ
ನ್ಯೂಸ್‌ ರೌಂಡ್‌ಅಪ್

Latest Videos
Recommended Stories
Recommended image1
ಆಗಸ್ಟ್ 1ಕ್ಕೆ ಮೈಸೂರಿಗೆ ಪ್ರಧಾನಿ ಮೋದಿ ಭೇಟಿ.. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ ಸಾಂಸ್ಕೃತಿಕ ನಗರಿ..!
Recommended image2
2026 Commonwealth Games: ದುರಂತವನ್ನೇ ಸೋಲಿಸಿದ ಶಿಲ್ಪಾ; ಕಾಮನ್‌ವೆಲ್ತ್ ಕನಸು ನನಸು, ರಾಜ್ಯದಿಂದ ಆಯ್ಕೆಯಾದ ಏಕೈಕ ಅಥ್ಲೀಟ್
Recommended image3
ಕೆಆರ್‌ಎಸ್‌ನಲ್ಲಿ ತುಂಬಿರುವ ಹೂಳಿನ ಪ್ರಮಾಣವೆಷ್ಟು? ನಮಗೆ ಗೊತ್ತೇ ಇಲ್ಲ ಎಂದ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ!
Related Stories
Recommended image1
ಆಗಸ್ಟ್ 1ಕ್ಕೆ ಮೈಸೂರಿಗೆ ಪ್ರಧಾನಿ ಮೋದಿ ಭೇಟಿ.. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ ಸಾಂಸ್ಕೃತಿಕ ನಗರಿ..!
Recommended image2
ಪತ್ರಕರ್ತರ ಸೋಗಿನಲ್ಲಿ ಸುಲಿಗೆ; ಬೆಳಗಾವಿಯಲ್ಲಿ ನಾಲ್ವರು ಯೂಟ್ಯೂಬರ್‌ಗಳು ಅರೆಸ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved